400 ಕೋಟಿ ಕಂಟೇನರ್ ದರೋಡೆ : ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ..
ಬೆಂಗಳೂರು: ದೇಶದಲ್ಲೇ ಸಂಚಲನ ಮೂಡಿಸಿದ್ದ 400 ಕೋಟಿ ರೂಪಾಯಿ ಕಂಟೇನರ್ ದರೋಡೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಪ್ರಮುಖ ಆರೋಪಿ ಕಿಶೋರ್ ಸಾವ್ಲಾ ನಾಸಿಕ್ ಗ್ರಾಮೀಣ ಪೊಲೀಸರಿಗೆ ಶರಣಾಗಿದ್ದಾನೆ.
ಥಾಣೆಯ ಪ್ರಸಿದ್ಧ ನಿರ್ಮಾಣ ವೃತ್ತಿಪರ ಕಿಶೋರ್ ಸಾವ್ಲಾ ಘೋಟಿಯಿಂದ ದರೋಡೆ ಮಾಡಿದ್ದ ಶಂಕಿತ ಸಂದೀಪ್ ಪಾಟೀಲ್ ಅವರನ್ನು ಅಪಹರಿಸಲಾಗಿತ್ತು.
ಕರ್ನಾಟಕದ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಚೋರ್ಲಾ ಘಾಟ್ನಲ್ಲಿ ಕಂಟೇನರ್ಗಳಲ್ಲಿದ್ದ ಹಳೆಯ ನೋಟುಗಳನ್ನು ಲೂಟಿ ಮಾಡಲಾಗಿತ್ತು ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡಿತ್ತು.
ಅಲ್ಲದೆ ಸಂದೀಪ್ ಪಾಟೀಲ್ ಈ ಕುರಿತು ಮಹಾರಾಷ್ಟ್ರ ಪೊಲೀಸರಿಗೆ ದೂರನ್ನೂ ಸಹ ನೀಡಿದ್ದರು. ಬಳಿಕ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಈ ಪ್ರಕರಣದ ತನಿಖೆಗಾಗಿ ಎಸ್ಐಟಿ ರಚಿಸಿ ಆದೇಶ ಹೊರಡಿಸಿದ್ದರು.
ಮಹಾರಾಷ್ಟ್ರದ ಅಡ್ಗಾಂವ್ನ ಗ್ರಾಮೀಣ ಪ್ರಧಾನ ಕಚೇರಿಯಲ್ಲಿ ಈ ದರೋಡೆ ಪ್ರಕರಣ ಕುರಿತು ಎಸ್ಐಟಿ ತನಿಖೆ ನಡೆಸುತ್ತಿದೆ.
ಎಸ್ ಐಟಿ ಮುಖ್ಯಸ್ಥ ಆದಿತ್ಯ ಮಿರ್ಖೇಲ್ಕರ್ ಕಂಟೇನರ್ ಪ್ರಕರಣದಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡಿದ್ದು, ಈ ಎಲ್ಲಾ ಪ್ರಕರಣದ ಆರೋಪಿಗಳು ಶೀಘ್ರದಲ್ಲೇ ಇಗತ್ಪುರಿ ನ್ಯಾಯಾಲಯದಲ್ಲಿ ಹಾಜರಾಗಲಿದ್ದಾರೆ.
ಕಳೆದ ಕೆಲ ದಿನಗಳ ಹಿಂದಷ್ಟೇ ದೂರೂದಾರ ಸಂದೀಪ್ ಪಾಟೀಲ್ ಮಹಾರಾಷ್ಟ್ರ ಪೊಲೀಸರ ನಿರ್ಲಕ್ಷ್ಯಕ್ಕೆ ಬೇಸತ್ತು ಕರ್ನಾಟಕ ಪೊಲೀಸರಿಗೆ ದೂರು ನೀಡಿ ತನಿಖೆಗೆ ಒತ್ತಾಯಿಸಲು ಯೋಚಿಸಿದ್ದರು, ಈ ನಡುವೆ ಕಿಶೋರ್ ಸಾವ್ಲಾ ಶರಣಾಗಿದ್ದಾನೆ.



