Tuesday, June 16, 2026
22.8 C
Belagavi

_ವಿಶ್ವ ರಕ್ತದಾನ ದಿನಾಚರಣೆ ಪ್ರಯುಕ್ತ 45 ಬಾರಿ ರಕ್ತ ನೀಡಿ ಘನತೆ ಹೆಚ್ಚಿಸಿದ ಪತ್ರಕರ್ತ ಗಿರಿಯಪ್ಪ ಪೂಜಾರಿ

advertisement

spot_img

_ವಿಶ್ವ ರಕ್ತದಾನ ದಿನಾಚರಣೆ ಪ್ರಯುಕ್ತ
_
45 ಬಾರಿ ರಕ್ತ ನೀಡಿ ಘನತೆ ಹೆಚ್ಚಿಸಿದ ಪತ್ರಕರ್ತ ಗಿರಿಯಪ್ಪ ಪೂಜಾರಿ

ವಾರ್ತೆ ದೇವದುರ್ಗ, ಜೂ.14:

ಸಮಾಜದಲ್ಲಿನ ಆಗು ಹೋಗುಗಳ ಬಗ್ಗೆ ಸದಾ ಸುದ್ದಿ ಹುಡುಕಾಟದಲ್ಲಿರುವವರ ಪತ್ರಕರ್ತರ ಪೈಕಿ ಇಲ್ಲೊಬ್ಬ ಗ್ರಾಮೀಣ ಪತ್ರಕರ್ತ ಗಿರಿಯಪ್ಪ ಪೂಜಾರಿ 45 ಬಾರಿ ರಕ್ತದಾನ ಮಾಡಿ ಅನೇಕರ ಜೀವಕ್ಕೆ ಆಸರೆಯಾಗಿದ್ದಾನೆ.

ಸಮಾಜದಲ್ಲಿ ಹುಡುಕಾಟದ ಪತ್ರಕರ್ತರೆಂದರೆ ಜವಾಬ್ದಾರಿ, ಅವಸರದಲ್ಲಿರುವವರು, ಜನ ಸಾಮಾನ್ಯರ ಸಮಸ್ಯೆ ಆಳುವ ಸರ್ಕಾರಕ್ಕೆ, ಅಧಿಕಾರಿಗಳೆಗೆ ತಲುಪಿಸುವ ಕೆಲಸದಲ್ಲಿರುವವರು ಎಂಬ ಭಾವನೆ ಇದೆ. ಇದು ನಿಜವಾದರೂ ಇಲ್ಲೊಬ್ಬ ಗ್ರಾಮೀಣ ಪತ್ರಕರ್ತನೊಬ್ಬ ತನ್ನೆಲ್ಲ ಕೆಲಸ ಕಾರ್ಯಗಳ ಮಧ್ಯೆ 45 ಬಾರಿ ರಕ್ತ ದಾನ ಮಾಡಿ ಸುದ್ದಿಯಾಗಿದ್ದಾನೆ.

ಸದ್ಯ ಸುದ್ದಿಮೂಲ ಪತ್ರಿಕೆಯ ಜಾಲಹಳ್ಳಿಯ ವರದಿಗಾನೂ ಆಗಿರುವ ಗಿರಿಯಪ್ಪ ಪೂಜಾರಿ ಅನೇಕ ಸಮಾಜಮುಖಿ ಸೇವೆ, ಸಿಐಟಿಯು ಕಾರ್ಮಿಕ ಸಂಘಟನೆ ತಾಲೂಕು ಸಂಚಾಲಕರಾಗಿ, ಪ್ರಗತಿಪರ ವಾದ ಸಾಹಿತ್ಯದ ಪುಸ್ತಕ ಮಾರಾಟ, ಓದುವ ಹವ್ಯಾಸ ರೂಢಿಸಿಕೊಂಡು ಒಂದಲ್ಲಒಂದು ಕಾರ್ಯದಲ್ಲಿ ಅತ್ಯಂತ ಕ್ರಿಯಾಶೀಲರಾಗಿ ತಮ್ಮ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ.

ರಕ್ತದಾನ ಮಹಾದಾನ, ನಿಮ್ಮ ರಕ್ತಕ್ಕೆ ಜೀವ ಉಳಿಸುವ ಶಕ್ತಿ ಇದೆ ಎಂದು ಭಾಷಣ ಕೇಳಿ ಸುದ್ದಿ ಬರೆದರೆ ಕೆಲಸ ಮುಗಿಯಿತು ಎನ್ನುವ ಅನೇಕರೆ ಮಧ್ಯೆ ಗಿರಿಯಪ್ಪ ಪೂಜಾರಿ ಇಂತಹ ಅಪರೂಪದ ಕಾಳಜಿ ಉಳ್ಳ ಪತ್ರಕರ್ತನಾಗಿರುವುದು ವಿಶೇಷವಾಗಿದೆ.

ಕಳೆದ 15-20 ವರ್ಷಗಳಿಂದ ನಿರಂತರವಾಗಿ ರಕ್ತ ದಾನ ಮಾಡಿದ್ದಾರೆ ಇದರಲ್ಲಿ ಪ್ರಮುಖವಾಗಿ ಅಪಘಾತವಾದ ರೋಗಿಗಳಿಗೆ, ಗರ್ಭಿಣಿ,

ಬಾಕ್ಸೈಟಂ ಪತ್ರಕರ್ತನಾಗಿರುವ ಗಿರಿಯಪ್ಪ ಪೂಜಾರಿ ಪ್ರತಿವರ್ಷ ಕನಿಷ್ಟ ಎರಡು ಬಾರಿ ರಕ್ತ ದಾನ ಮಾಡುತ್ತಾರೆ. ಅಲ್ಲದೆ, ತಾವು ರಕ್ತದಾನ ಮಾಡುತ್ತಿರುವುದರಿಂದಲೇ ಯಾವುದೆ ಖಾಯಿಲೆಯಾಗಲಿ ತಮ್ಮ ಬಳಿ ಸುಳಿದಿಲ್ಲ. ರಕ್ತ ನೀಡುವುದರಿಂದ ಸಿಗುವ ಆನಂದ, ಜನರ ಹಾರೈಕೆಯಿಂದ ತಾನು ಆರೋಗ್ಯವಾಗಿರುವುದಾಗಿ ಹರ್ಷ ವ್ಯಕ್ತಪಡಿಸುವ ಗಿರಿಯಪ್ಪ ಪೂಜಾರಿ, ನಮ್ಮ ನೌಕರಿ, ಕೆಲಸಗಳ ಮಧ್ಯೆಯೂ ಇಂತಹ ಸಣ್ಣ ಪುಟ್ಟ ಸೇವೆ ಮಾಡಿದಾಗ ಸಿಗುವ ತೃಪ್ತಿ ಎಷ್ಟೆ ಹಣ ಬಂದರೂ ಸಿಗದು ಎಂದರು.

ಬಾಣಂತಿಯರಿಗೆ, ರಕ್ತ ಹೀನತೆ ಇರುವ ರೋಗಿ ಗಳಿಗೆ, ಬೇರೆ ಬೇರೆ ಕಾರ್ಯಕ್ರಮದಲ್ಲಿ ಉಚಿತ ರಕ್ತದಾನ ಶಿಬಿರಗಳಲ್ಲಿಯೂ ಮುಂಚೂಣಿಯಲ್ಲಿದ್ದು ಗಿರಿಯಪ್ಪ ಪೂಜಾರಿ ತಮ್ಮ ರಕ್ತ ದಾನ ಮಾಡಿ ಇಂದು ರಕ್ತ ದಾನ ಮಾಡಲೂ ಮಾರುದ್ದ ದೂರ ಓಡಿ ಹೋಗುವ ಯುವಕರಿಗೆ ಸ್ಫೂರ್ತಿ ಯಾಗಿದ್ದಾರೆ.

Hot this week

ಪೌರ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ : ಸಚಿವ ಡಾ.ಯತೀಂದ್ರ ಭರವಸೆ..

ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಇಂದು ಬೆಂಗಳೂರಿನ ಗೃಹ...

ರಾಮದುರ್ಗ |ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಯೋಗ ಶಿಬಿರ

ರಾಮದುರ್ಗ |ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಯೋಗ ಶಿಬಿರ ಅಂತರಾಷ್ಟ್ರೀಯ ಯೋಗ ದಿನಾಚರಣೆ...

ಸಿಐಡಿ ಪ್ರಗತಿ ಪರಿಶೀಲನೆ ನಡೆಸಿದ ಸಚಿವ ಪ್ರಿಯಾಂಕ್ ಖರ್ಗೆ ಹೊಸ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸೂಚನೆ

ಸಿಐಡಿ ಪ್ರಗತಿ ಪರಿಶೀಲನೆ ನಡೆಸಿದ ಸಚಿವ ಪ್ರಿಯಾಂಕ್ ಖರ್ಗೆ ಹೊಸ ಸವಾಲುಗಳನ್ನು ಸಮರ್ಥವಾಗಿ...

ಬಿಡದಿ ಟೌನ್‌ ಶಿಪ್ ಸರಕಾರಿ ರಿಯಲ್ ಎಸ್ಟೇಟ್ ಯೋಜನೆ ಎಂದ ಹೆಚ್.ಡಿ. ಕುಮಾರಸ್ವಾಮಿ

ಬಿಡದಿ ಟೌನ್‌ ಶಿಪ್ ಸರಕಾರಿ ರಿಯಲ್ ಎಸ್ಟೇಟ್ ಯೋಜನೆ ಎಂದ ಹೆಚ್.ಡಿ....

Topics

ಪೌರ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ : ಸಚಿವ ಡಾ.ಯತೀಂದ್ರ ಭರವಸೆ..

ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಇಂದು ಬೆಂಗಳೂರಿನ ಗೃಹ...

ರಾಮದುರ್ಗ |ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಯೋಗ ಶಿಬಿರ

ರಾಮದುರ್ಗ |ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಯೋಗ ಶಿಬಿರ ಅಂತರಾಷ್ಟ್ರೀಯ ಯೋಗ ದಿನಾಚರಣೆ...

ಸಿಐಡಿ ಪ್ರಗತಿ ಪರಿಶೀಲನೆ ನಡೆಸಿದ ಸಚಿವ ಪ್ರಿಯಾಂಕ್ ಖರ್ಗೆ ಹೊಸ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸೂಚನೆ

ಸಿಐಡಿ ಪ್ರಗತಿ ಪರಿಶೀಲನೆ ನಡೆಸಿದ ಸಚಿವ ಪ್ರಿಯಾಂಕ್ ಖರ್ಗೆ ಹೊಸ ಸವಾಲುಗಳನ್ನು ಸಮರ್ಥವಾಗಿ...

ಬಿಡದಿ ಟೌನ್‌ ಶಿಪ್ ಸರಕಾರಿ ರಿಯಲ್ ಎಸ್ಟೇಟ್ ಯೋಜನೆ ಎಂದ ಹೆಚ್.ಡಿ. ಕುಮಾರಸ್ವಾಮಿ

ಬಿಡದಿ ಟೌನ್‌ ಶಿಪ್ ಸರಕಾರಿ ರಿಯಲ್ ಎಸ್ಟೇಟ್ ಯೋಜನೆ ಎಂದ ಹೆಚ್.ಡಿ....

ಗೃಹಲಕ್ಷ್ಮಿ, ಗೃಹಜ್ಯೋತಿ ಸೇರಿ ಯಾವುದೇ ಗ್ಯಾರಂಟಿ ಯೋಜನೆ ನಿಲ್ಲುವುದಿಲ್ಲ: ಸಿಎಂ ಡಿ ಕೆ ಶಿವಕುಮಾರ್

ಸಿಎಂ ಡಿ ಕೆ ಶಿವಕುಮಾರ್ ಅವರ ಮಾಧ್ಯಮ ಹೇಳಿಕೆ ಗೃಹಲಕ್ಷ್ಮಿ, ಗೃಹಜ್ಯೋತಿ ಸೇರಿ...

ಪರಿಹಾರದ ವಿಚಾರದಲ್ಲಿ ತಾರತಮ್ಯ ಆರೋಪ: ಪ್ರಾಧಿಕಾರ ಕಚೇರಿಯಲ್ಲಿ ಸಿಬ್ಬಂದಿಗೆ ಚಪ್ಪಲಿ ಏಟು

ಪರಿಹಾರದ ವಿಚಾರದಲ್ಲಿ ತಾರತಮ್ಯ ಆರೋಪ: ಪ್ರಾಧಿಕಾರ ಕಚೇರಿಯಲ್ಲಿ ಸಿಬ್ಬಂದಿಗೆ ಚಪ್ಪಲಿ ಏಟು ಬಾಗಲಕೋಟೆ,  ಪರಿಹಾರ...

ಲಾರಿ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಡುವೆ ಭೀಕರ ಅಪಘಾತ

ಲಾರಿ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಡುವೆ ಭೀಕರ ಅಪಘಾತ ಇಬ್ಬರು ಸ್ಥಳದಲ್ಲೇ ದುರ್ಮರ,ಮೂವರ...
spot_img

Related Articles

Popular Categories

spot_img