Monday, August 10, 2026
20.5 C
Belagavi

ನಾಡಿನ ಸಾರಥಿಗೆ ಭವ್ಯ ಸ್ವಾಗತ, ಸ್ವಕ್ಷೇತ್ರದಲ್ಲಿ ಮುಗಿಲು ಮುಟ್ಟಿದ ಹರ್ಷೋದ್ಗಾರ, ಉಕ್ಕಿ ಹರಿದ ಅಭಿಮಾನದ ಹೊಳೆ

advertisement

spot_img

ನಾಡಿನ ಸಾರಥಿಗೆ ಭವ್ಯ ಸ್ವಾಗತ, ಸ್ವಕ್ಷೇತ್ರದಲ್ಲಿ ಮುಗಿಲು ಮುಟ್ಟಿದ ಹರ್ಷೋದ್ಗಾರ, ಉಕ್ಕಿ ಹರಿದ ಅಭಿಮಾನದ ಹೊಳೆ

ಹುಟ್ಟೂರಿನ ಮಗನನ್ನು ಮನದುಂಬಿ ಹರಸಿದ ಕನಕಪುರ ಕ್ಷೇತ್ರದ ಜನತೆ

ಹಾರೋಹಳ್ಳಿಯಲ್ಲಿ ಮಲ್ಲಿಗೆ ಹೂವಿನ ಸುರಿಮಳೆ; ದೃಷ್ಟಿ ನಿವಾರಣೆಗೆ ಮೆಣಸಿನಕಾಯಿ, ಬೆಳ್ಳುಳ್ಳಿ ಬೃಹತ್ ಹಾರ

ದಾರಿಯುದ್ದಕ್ಕೂ ಬೃಹತ್ ಸೇಬಿನ ಹಾರಗಳು, ಪಟಾಕಿ ಸಿಡಿಸಿ ಸಂಭ್ರಮ

ನನಗೆ ಜಾತಿ-ಧರ್ಮ ಬೇಧವಿಲ್ಲ, ಎಲ್ಲರ ಮನೆ‌ ಮಗ ನಾನು ಎಂದ ಸಿಎಂ

ಕನಕಪುರ, 

ಮುಖ್ಯಮಂತ್ರಿಯಾದ ನಂತರ ಮೊದಲ‌‌ ಬಾರಿಗೆ ಸ್ವಕ್ಷೇತ್ರಕ್ಕೆ ಭೇಟಿ ನೀಡಿದ ಡಿ.ಕೆ.ಶಿವಕುಮಾರ್ ಅವರಿಗೆ ಅಭಿಮಾನಿಗಳಿಂದ ಅಭೂತಪೂರ್ವ ಸ್ವಾಗತ ದೊರೆಯಿತು. ಅಭಿಮಾನಿಗಳ ಹರ್ಷೋದ್ಗಾರದಲ್ಲಿ ಡಿ.ಕೆ. ಶಿವಕುಮಾರ್ ಮಿಂದೆದ್ದರು. “ಡಿ.ಕೆ, ಡಿ.ಕೆ” ಎನ್ನುವ ಘೋಷಣೆ ಮುಗಿಲು ಮುಟ್ಟುತ್ತಿದ್ದಂತೆ ಮುಖ್ಯಮಂತ್ರಿಯವರು ಭಾವುಕರಾದರು.

“ನಿಮ್ಮ ಪ್ರೀತಿಗೆ ಆಭಾರಿ. ನಿಮ್ಮಿಂದ ನಾನು ವಿಧಾನಸೌಧದ ಮೂರನೇ ಮಹಡಿಯಲ್ಲಿದ್ದೇನೆ. ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದೇನೆ.‌ ನಿಮಗೆಲ್ಲರಿಗೂ ಕೋಟಿ, ಕೋಟಿ ವಂದನೆಗಳು” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿನಾಯಪೂರ್ವಕವಾಗಿ ಹೇಳಿದರು.

“ನಿಮ್ಮ ಪಾಲಿಗೆ ನಾನು ಸಿಎಂ ಅಲ್ಲ, ಸೇವಕ. ನನ್ನ ಕೊನೆಯುಸಿರು ಇರುವವರೆಗೂ ನಿಮ್ಮ ಮನೆ ಮಗನಾಗಿ ಸೇವೆ ಮಾಡುವೆ. ಸ್ವಂತ ಮಗನಂತೆ ನನ್ನನ್ನು ಬೆಳೆಸಿದ್ದೀರಿ. ನನ್ನ ಕ್ಷೇತ್ರದ ಪ್ರತಿಯೊಬ್ಬರಿಗೂ ಸಾಷ್ಟಾಂಗ ನಮಸ್ಕಾರಗಳು. ನಾನು ಈ ಕ್ಷೇತ್ರ ದಾಟಿ ಹೋದಾಗ ಮಾತ್ರ ಮುಖ್ಯಮಂತ್ರಿ. ‌ಇಲ್ಲಿಗೆ ಬಂದಾಗ ನಿಮ್ಮ ಮನೆ ಸೇವಕ” ಎನ್ನುವ ಮಾತನ್ನು ಭೇಟಿ ಕೊಟ್ಟ ಪ್ರತಿ ಊರಿನಲ್ಲೂ ಒತ್ತಿ, ಒತ್ತಿ ಹೇಳಿದರು.

“ನನ್ನ ಶಕ್ತಿ ನೀವೇ, ಬದುಕು ನೀವೇ, ಉಸಿರು ನೀವೇ. ನನ್ನ ಬದುಕಿನ ಕಷ್ಟ ಕಾಲದಲ್ಲಿ ನೀವು ನನಗೆ ನೆರಳಾಗಿದ್ದೀರಿ. ನಿಮ್ಮ ಸೇವಕನಾಗಿ ಮುಂದುವರಿದು, ಋಣ ತೀರಿಸುತ್ತೇನೆ” ಎಂದರು.

ಕನಕಪುರ ರಸ್ತೆಯ ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣದಿಂದಲೇ ರಸ್ತೆಯ ಇಕ್ಕೆಲಗಳಲ್ಲಿ ಕಿಕ್ಕಿರಿದು ನಿಂತಿದ್ದ ಸಾರ್ವಜನಿಕರು ಡಿ.ಕೆ. ಶಿವಕುಮಾರ್ ಅವರಿಗೆ ಜೈಕಾರ ಹಾಕಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ದಾರಿಯುದ್ದಕ್ಕೂ ಶುಭಾಶಯ ಕೋರುವ ಬ್ಯಾನರ್ ಗಳು,‌ ಫ್ಲೆಕ್ಸ್ ಗಳು ಕಾಂಗ್ರೆಸ್ ಪಕ್ಷದ ಬಾವುಟಗಳು ರಾರಾಜಿಸಿದವು.

ಒಣ- ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ ಹಾರ

ನೂತನ ಸಿಎಂ ಅವರಿಗೆ ಯಾರ ದೃಷ್ಟಿಯೂ ತಾಕದಿರಲಿ ಎಂದು ಮೆಣಸಿನಕಾಯಿ ಹಾಗೂ ಬೆಳ್ಳುಳ್ಳಿ ಪೋಣಿಸಿ ಮಾಡಿದ್ದ ಬೃಹತ್ ಹಾರವನ್ನು ಹಾರೋಹಳ್ಳಿಯ ಜನರು ಹಾಕಿದ್ದು ವಿಶೇಷವಾಗಿತ್ತು. ಸುಮಾರು 50 ಕೆ.ಜಿ ಒಣ ಮೆಣಸಿನಕಾಯಿ 70 ಕೆಜಿಗೂ ಹೆಚ್ಚು ಹಸಿಮೆಣಸಿನಕಾಯಿ ಮತ್ತು 50 ಕೆ.ಜಿಗೂ ಹೆಚ್ಚು ಬೆಳ್ಳುಳ್ಳಿ ಬಳಸಲಾಗಿತ್ತು. ಕ್ರೇನ್ ಮೂಲಕ ಬೃಹತ್ ಸೇಬಿನ ಹಾರವನ್ನು ಹಾಕಿ ಅಭಿಮಾನಿಗಳು ಸಂಭ್ರಮಿಸಿದರು.

500 ಕೆಜಿಗೂ ಹೆಚ್ಚು ತೂಕದ ಸೇಬಿನ ಹಾರಗಳು

ಕಗ್ಗಲೀಪುರ, ತುಂಗಣಿ, ನಾರಾಯಣಪುರಗಳಲ್ಲಿ ಅಭಿಮಾನಿಗಳು ಸುಮಾರು 500 ಕೆಜಿಗೂ ಹೆಚ್ಚು ಸೇಬು ಬಳಸಿ ಬೃಹತ್ ಹಾರಗಳನ್ನು ಮಾಡಿಸಿ ಡಿ.ಕೆ. ಶಿವಕುಮಾರ್ ಅವರ ಮೇಲಿನ ಅಭಿಮಾನ ಮೆರೆದರು. ತುಂಗಣಿಯಲ್ಲಿ ಎರಡು ಸೇಬಿನ ಹಾರಗಳು ಇದ್ದಿದ್ದು ವಿಶೇಷವಾಗಿತ್ತು. ಹೆರಿಂದ್ಯಾಪನಹಳ್ಳಿಯಲ್ಲಿ ಮಾಡಿದ್ದ ಸೇಬಿನ ಹಾರ 30 ಅಡಿಗೂ ಹೆಚ್ಚು ಉದ್ದವಾಗಿತ್ತು.

ಸಿಎಂ ಸ್ವಾಗತಕ್ಕೆ ಜಾನಪದ ಮೆರುಗು; ಪೂರ್ಣಕುಂಭ ಸ್ವಾಗತ

“ನಾರಾಯಣಪುರದಲ್ಲಿ ಪೂಜಾಕುಣಿತ ಕಲಾವಿದರು ಸ್ವಾಗತಿಸಿದರೆ, ಕೊಳಗೊಂಡನಹಳ್ಳಿಯಲ್ಲಿ ನಂದಿಧ್ವಜ, ಪಟ ಕುಣಿತ, ನಂದಿಧ್ವಜ ಹೊತ್ತ ಕಲಾವಿದರು ಸ್ವಾಗತಿಸಿದರು. ಪ್ರತಿ ಊರಿನಲ್ಲೂ ತಮಟೆ, ನಗಾರಿ ಸದ್ದು ಮೇಳೈಸಿತ್ತು. ಬೇಕುಪ್ಪೆಯಲ್ಲಿ ಮನೆದೇವರು ಕೆಂಕೇರಮ್ಮನಿಗೆ ಹಾಗೂ ತುಂಗಣಿಯಲ್ಲಿ ಚಾಮುಂಡೇಶ್ವರಿ ದೇವಾಲಯದಲ್ಲಿ ಸಹೋದರ ಡಿ.ಕೆ.ಸುರೇಶ್ ಅವರ ಜೊತೆಗೂಡಿ ಪೂಜೆ ಸಲ್ಲಿಸಿದರು. ಕ್ಷೇತ್ರದ ಗಡಿ ಭಾಗದಲ್ಲಿ ಮಹಿಳೆಯರು ಪೂರ್ಣಕುಂಭ ಸ್ವಾಗತ ನೀಡಿದರು.

ಯುವ ಯುಗ ಘೋಷಣೆಗೆ ಸ್ವಕ್ಷೇತ್ರದಲ್ಲೇ ಶಕ್ತಿ

ಡಿ.ಕೆ. ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡಾಗ ಕರ್ನಾಟಕದಲ್ಲಿ ಯುವ ಯುಗ ಆರಂಭ ಎಂದು ಯುವಕರನ್ನು ಗಮನದಲ್ಲಿಟ್ಟುಕೊಂಡು ಘೋಷಣೆ ಮಾಡಿದ್ದರು. ಪ್ರತಿ ಊರಿನಲ್ಲೂ ಯುವಕರು ನೀಡಿದ ಕೊಡುಗೆಗೆ ಧನ್ಯವಾದ ತಿಳಿಸಿದರು.‌ ಪ್ರತಿ ಊರಿನಲ್ಲೂ ಯುವಕರೇ ಮುಂದೆ ನಿಂತು ಮುಖ್ಯಮಂತ್ರಿಗಳನ್ನು ಸ್ವಾಗತಿಸಿದರು.

ಕಗ್ಗಲೀಪುರದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತಾಡಿದ ಶಿವಕುಮಾರ್ ಅವರು, “ನಿಮ್ಮಿಂದ ನಾನು ಇಷ್ಟು ಎತ್ತರಕ್ಕೆ ಬೆಳೆದಿದ್ದೇ‌ನೆ. ನಾನು ಚುನಾವಣಾ ಪ್ರಚಾರಕ್ಕೆ ಬರದೇ ಇದ್ದರೂ 1.23 ಲಕ್ಷ ಮತಗಳ ಅಂತರದಿಂದ ನನ್ನನ್ನು ಗೆಲ್ಲಿಸಿದ್ದೀರಿ” ಎಂದು ಸ್ಮರಣೆ ಮಾಡಿದರು.

“ದುಃಖವನ್ನು ದೂರ ಮಾಡುವ ದೇವಿ ದುರ್ಗಾದೇವಿ. ಬೆಂಗಳೂರು ದಕ್ಷಿಣ ಜಿಲ್ಲೆಯ ಮಗನಾಗಿ ಜನರ ಮುಂದೆ ನಿಂತಿದ್ದೇನೆ.‌ ಈ ಕ್ಷೇತ್ರದ ಜನ ನನ್ನ ಪರವಾಗಿ ಪ್ರಾರ್ಥನೆ ಮಾಡಿದ್ದೀರಿ. ನೋವು, ದುಃಖವನ್ನು ಅನುಭವಿಸಿದ್ದೀರಿ. ವಿಧಾನಸೌಧದ ಮೂರನೇ ಮಹಡಿಯಲ್ಲಿ ನಾನು ಕುಳಿತುಕೊಳ್ಳಬೇಕು ಎಂದು ನೀವು ಪ್ರಾರ್ಥನೆ ಮಾಡಿದ್ದರ ಫಲವಾಗಿ ನಾನು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದೇನೆ. ಪ್ರಯತ್ನ ವಿಫಲವಾಗಬಹುದು ಆದರೆ ಪ್ರಾರ್ಥನೆ ವಿಫಲವಾಗುವುದಿಲ್ಲ” ಎಂದರು.

ನನಗೆ ಜಾತಿ ಧರ್ಮ ಬೇಧವಿಲ್ಲ, ಎಲ್ಲರ ಮನೆ‌ ಮಗ ನಾನು

“2028 ಕ್ಕೆ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಕ್ಷೇತ್ರದ ಜನ ಪ್ರಾರ್ಥನೆ ಮಾಡಬೇಕು. ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ. ನನಗೆ ಆ ಧರ್ಮ ಈ ಧರ್ಮ, ಆ ಜಾತಿ ಈ ಜಾತಿ ಎನ್ನುವ ಬೇದವಿಲ್ಲ. ಹಾರೋಹಳ್ಳಿಯ ಮುದ್ದೆಗೌಡರು, ಅಲಿಸಾಬ್, ಪುಟ್ಟೇಗೌಡರು, ಸತ್ತಾರ್ ಸಾಹೇಬರು ಹೀಗೆ ಅನೇಕರು ನನ್ನನ್ನು ಮನೆ ಮಗನಾಗಿ ಬೆಳೆಸಿದರು. ಪಿಜಿಆರ್ ಸಿಂಧ್ಯಾ ಅವರು ನನ್ನ ಜೊತೆಯಾಗಿ ನಿಂತಿದ್ದಾರೆ. ‌ನನ್ನ ವಿರುದ್ದ ಸ್ಪರ್ಧಿಸಿದ್ದ ನಾರಾಯಣ ಗೌಡರು ಇಂದೂ ನನಗೆ ಬೆಂಬಲವಾಗಿದ್ದಾರೆ” ಎಂದರು.

ಟಿ.ಬೇಕುಪ್ಪೆಯಲ್ಲಿ ಮಾತನಾಡಿದ ಅವರು, “ಮನುಷ್ಯ ಹುಟ್ಟುವಾಗ ನಾಲ್ಕು ಋಣದಲ್ಲಿ ಹುಟ್ಟುತ್ತಾನೆ. ತಂದೆ ತಾಯಿ, ಗುರು, ದೇವರ ಹಾಗೂ ಸಮಾಜ. ನಾನು ನಿಮ್ಮ ಋಣದಲ್ಲಿದ್ದೇನೆ. ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತೇನೆ. ನಿಮ್ಮ ತಾಲ್ಲೂಕಿನ ಮಗ, ನಿಮ್ಮ ಸೇವಕ. ಈಗ 136 ಸ್ಥಾನಗಳನ್ನು ಗೆಲ್ಲಿಸಿ 2028 ಕ್ಕೆ ಪಕ್ಷವು ಮತ್ತೊಮ್ಮೆ ಅಧಿಕಾರಕ್ಕೆ ಏರುವಂತೆ ಮಾಡುವ ಜವಾಬ್ದಾರಿ ನಿಮ್ಮ ಬಳಿಯಿದೆ. ರಾಮನಗರ ಹಾಗೂ ಹಾರೊಹಳ್ಳಿಯ ಪ್ರತಿ ಬಡವರ ತಲೆಯ ಮೇಲೂ ಸ್ವಂತ ಸೂರು ಇರಬೇಕು ಎಂಬುದು ನನ್ನ ಆಸೆ. ಈ ಆಸೆಯನ್ನು ಆದಷ್ಟು ಬೇಗ ಸಾಕಾರಗೊಳಿಸಲಾಗುವುದು” ಎಂದು ಹೇಳಿದರು.

“ನಾರಾಯಣಪುರ, ಸಂತೆ ಕೋಡಿಹಳ್ಳಿ, ಹೆರಿಂದ್ಯಾಪನಹಳ್ಳಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, “ತಿಹಾರ್ ಜೈಲಿನಲ್ಲಿ ಇದ್ದಾಗ ನನ್ನ ಕ್ಷೇತ್ರದ ಜನರು ಕಣ್ಣೀರು ಸುರಿಸಿ ಪ್ರಾರ್ಥನೆ ಮಾಡಿದರು. ಆ ಪ್ರಾರ್ಥನೆ ನನ್ನನ್ನು ಕಾಪಾಡಿದೆ. ನೀವು ನನ್ನ ಪರವಾಗಿ ಕೊರಗಿದ್ದು ನನ್ನ ರಕ್ಷಿಸಿದೆ. ನನಗೆ ಹಣದ, ಅಧಿಕಾರದ ಅವಶ್ಯಕತೆ ಬೇಕಾಗಿಲ್ಲ. ನಿಮ್ಮ ಜೀವನದಲ್ಲಿ ಬದಲಾವಣೆ ಉಂಟಾಗಬೇಕು ಎಂಬುದೇ ನನ್ನ ಧ್ಯೇಯ” ಎಂದರು.

ಅಜ್ಜಯ್ಯನ ಮಾರ್ಗದರ್ಶನ

“ಸಿಎಂ ರೋಡ್ ಶೋ ನಡೆಸಿದ ವಾಹನದ ಮುಂಭಾಗದಲ್ಲಿ ಅಜ್ಜಯ್ಯನ ಫೋಟೊ ಅಳವಡಿಸಿದ್ದು ವಿಶೇಷವಾಗಿತ್ತು. ವೀರ ಗಂಗಾಧರ ಅಜ್ಜಯ್ಯನ ಮಾರ್ಗದರ್ಶನದಲ್ಲಿ ಮುನ್ನಡೆಯುವ ಸಂದೇಶ ಕೊಟ್ಟರು.

ಬೇಕುಪ್ಪೆ ಗ್ರಾಮದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದ ವೇಳೆ ಆಂಬ್ಯುಲೆನ್ಸ್ ಬಂದ ಕಾರಣಕ್ಕೆ ಮಧ್ಯದಲ್ಲೇ ಭಾಷಣ ನಿಲ್ಲಿಸಿದ ಮುಖ್ಯಮಂತ್ರಿಯವರು ಜನರಿಗೆ ದಾರಿ ಬಿಡುವಂತೆ ಸೂಚಿಸಿದರು. ಆಂಬ್ಯುಲೆನ್ಸ್ ಹೋದ ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

Hot this week

ಮಳೆ ಕೊರತೆಯಿಂದ ಬೆಳೆ ಹಾನಿ: ಚಾಮನಹಳ್ಳಿಹುಂಡಿ ಗ್ರಾಮದಲ್ಲಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಪರಿಶೀಲನೆ

ಮಳೆ ಕೊರತೆಯಿಂದ ಬೆಳೆ ಹಾನಿ: ಚಾಮನಹಳ್ಳಿಹುಂಡಿ ಗ್ರಾಮದಲ್ಲಿ ಸಚಿವ ಡಾ. ಯತೀಂದ್ರ...

ಜನರ ಸಹಕಾರದೊಂದಿಗೆ ವಿಜಯಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಡಾ. ಯತೀಂದ್ರ ಸಿದ್ದರಾಮಯ್ಯ

ಜನರ ಸಹಕಾರದೊಂದಿಗೆ ವಿಜಯಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಡಾ....

ದೇಶದ ಉಜ್ವಲ ಭವಿಷ್ಯಕ್ಕಾಗಿ ಸಂವಿಧಾನ, ಪ್ರಜಾಪ್ರಭುತ್ವ ರಕ್ಷಿಸಬೇಕು: ಬಿ.ಕೆ.ಹರಿಪ್ರಸಾದ್

ದೇಶದ ಉಜ್ವಲ ಭವಿಷ್ಯಕ್ಕಾಗಿ ಸಂವಿಧಾನ, ಪ್ರಜಾಪ್ರಭುತ್ವ ರಕ್ಷಿಸಬೇಕು: ಬಿ.ಕೆ.ಹರಿಪ್ರಸಾದ್ ಬೆಂಗಳೂರು : ಕರ್ನಾಟಕ...

ಉತ್ತರ ಕರ್ನಾಟಕದ ಗ್ರಾಮೀಣ ಹಾಗೂ ಬಡ ಪ್ರತಿಭಾವಂತ ಮಕ್ಕಳಿಗೆ ಗುಣಮಟ್ಟದ ತರಬೇತಿ: ಬಸವರಾಜ ಬೊಮ್ಮಾಯಿ

ಉತ್ತರ ಕರ್ನಾಟಕದ ಗ್ರಾಮೀಣ ಹಾಗೂ ಬಡ ಪ್ರತಿಭಾವಂತ ಮಕ್ಕಳಿಗೆ ಗುಣಮಟ್ಟದ ತರಬೇತಿ:...

ಅಸಮಾನತೆ, ಜಾತಿ ವ್ಯವಸ್ಥೆ ಇರುವವರೆಗೆ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ

ಅಸಮಾನತೆ, ಜಾತಿ ವ್ಯವಸ್ಥೆ ಇರುವವರೆಗೆ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ ಸಾಮಾಜಿಕ ನ್ಯಾಯ,...

Topics

ಮಳೆ ಕೊರತೆಯಿಂದ ಬೆಳೆ ಹಾನಿ: ಚಾಮನಹಳ್ಳಿಹುಂಡಿ ಗ್ರಾಮದಲ್ಲಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಪರಿಶೀಲನೆ

ಮಳೆ ಕೊರತೆಯಿಂದ ಬೆಳೆ ಹಾನಿ: ಚಾಮನಹಳ್ಳಿಹುಂಡಿ ಗ್ರಾಮದಲ್ಲಿ ಸಚಿವ ಡಾ. ಯತೀಂದ್ರ...

ಜನರ ಸಹಕಾರದೊಂದಿಗೆ ವಿಜಯಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಡಾ. ಯತೀಂದ್ರ ಸಿದ್ದರಾಮಯ್ಯ

ಜನರ ಸಹಕಾರದೊಂದಿಗೆ ವಿಜಯಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಡಾ....

ದೇಶದ ಉಜ್ವಲ ಭವಿಷ್ಯಕ್ಕಾಗಿ ಸಂವಿಧಾನ, ಪ್ರಜಾಪ್ರಭುತ್ವ ರಕ್ಷಿಸಬೇಕು: ಬಿ.ಕೆ.ಹರಿಪ್ರಸಾದ್

ದೇಶದ ಉಜ್ವಲ ಭವಿಷ್ಯಕ್ಕಾಗಿ ಸಂವಿಧಾನ, ಪ್ರಜಾಪ್ರಭುತ್ವ ರಕ್ಷಿಸಬೇಕು: ಬಿ.ಕೆ.ಹರಿಪ್ರಸಾದ್ ಬೆಂಗಳೂರು : ಕರ್ನಾಟಕ...

ಉತ್ತರ ಕರ್ನಾಟಕದ ಗ್ರಾಮೀಣ ಹಾಗೂ ಬಡ ಪ್ರತಿಭಾವಂತ ಮಕ್ಕಳಿಗೆ ಗುಣಮಟ್ಟದ ತರಬೇತಿ: ಬಸವರಾಜ ಬೊಮ್ಮಾಯಿ

ಉತ್ತರ ಕರ್ನಾಟಕದ ಗ್ರಾಮೀಣ ಹಾಗೂ ಬಡ ಪ್ರತಿಭಾವಂತ ಮಕ್ಕಳಿಗೆ ಗುಣಮಟ್ಟದ ತರಬೇತಿ:...

ಅಸಮಾನತೆ, ಜಾತಿ ವ್ಯವಸ್ಥೆ ಇರುವವರೆಗೆ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ

ಅಸಮಾನತೆ, ಜಾತಿ ವ್ಯವಸ್ಥೆ ಇರುವವರೆಗೆ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ ಸಾಮಾಜಿಕ ನ್ಯಾಯ,...

ಪಿಎಚ್‌ಡಿ ಪದವಿ ಪಡೆದ ಜಹುರಬಾಶಾ ಕಲೆಗಾರರಿಗೆ ಅಭಿನಂದನೆ

ಪಿಎಚ್‌ಡಿ ಪದವಿ ಪಡೆದ ಜಹುರಬಾಶಾ ಕಲೆಗಾರರಿಗೆ ಅಭಿನಂದನೆ ರಾಮದುರ್ಗ: ಕಿತ್ತೂರು ರಾಣಿ ಚನ್ನಮ್ಮ...

ಹೊರಟ್ಟಿಯವರಿಂದ ರಾಜೀನಾಮೆ ಪಡೆದ ಸರ್ಕಾರದ ನಡೆ ಪರಿಷತ್ ಇಹಾಸದಲ್ಲಿ ಕಪ್ಪು ಚುಕ್ಕೆ:ಬಸವರಾಜ ಬೊಮ್ಮಾಯಿ

ಹೊರಟ್ಟಿಯವರಿಂದ ರಾಜೀನಾಮೆ ಪಡೆದ ಸರ್ಕಾರದ ನಡೆ ಪರಿಷತ್ ಇಹಾಸದಲ್ಲಿ ಕಪ್ಪು ಚುಕ್ಕೆ:ಬಸವರಾಜ...

ಸೆಂಟಮ್ ಎಲೆಕ್ಟ್ರಾನಿಕ್ಸ್ ₹500 ಕೋಟಿ ಹೂಡಿಕೆಗೆ ವೇಗ – 1,500 ಉದ್ಯೋಗ ಸೃಷ್ಟಿ

ಸೆಂಟಮ್ ಎಲೆಕ್ಟ್ರಾನಿಕ್ಸ್ ₹500 ಕೋಟಿ ಹೂಡಿಕೆಗೆ ವೇಗ - 1,500 ಉದ್ಯೋಗ...
spot_img

Related Articles

Popular Categories

spot_img