ಬಾಗಲಕೋಟೆಯಲ್ಲಿ ಮುಸ್ಲಿಂ ಹುಡುಗ ಹಿಂದೂ ಯುವತಿ ಪ್ರೇಮ ಪ್ರಕರಣ.
ಹಿಂದೂ ಯುವತಿ ಆತ್ಮಹತ್ಯೆಗೆ ಶರಣಾದ ವಿಚಾರ. ಬಾಗಲಕೋಟೆ ಎಸ್ಪಿ ಸಿದ್ದಾರ್ಥ ಗೋಯೆಲ್ ಹೇಳಿಕೆ.
ನಿನ್ನೆ ಭೂಮಿಕಾ ಮೋಹನ್ ತಿಪ್ಪಣ್ಣವರ.
19 ವರ್ಷದ ಯುವತಿ ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇಮ್ಮಿಡಿಯೇಟ್ ಆಗಿ ನಾವು ಹಾಗೂ ನಮ್ಮ ಸಿಬ್ಬಂದಿ ಸ್ಪಾಟ್ ಗೆ ಹೋಗಿದ್ದೆವು.
ಸೀನ್ ಆಫ್ ಕ್ರೈಂ ಆಫೀಸರ್ಸ್ ಕೂಡ ವಿಸಿಟ್ ಮಾಡಿದ್ದಾರೆ. ಹುಡುಗಿಯ ಫೋನ್ ಸೀಜ್ ಮಾಡಿದ್ದೀವಿ.
ಅದೆ ಸೆಕ್ಟರ್ ನಲ್ಲಿನ ಡೊಂಗ್ರಿ ಸಾಬ್ ನದಾಫ್ ಎಂಬ ಹುಡುಗನ ಮೇಲೆ ಕಂಪ್ಲೇಂಟನ್ನು ಕೊಟ್ಟಿದ್ದಾರೆ.
ತಾಯಿ ಕೊಟ್ಟ ದೂರಿನ ಮೇಲೆ ಕ್ರೈಮ್ ಎಫ್ ಐ ಆರ್ ಮಾಡಿದ್ದೇವೆ.
ಆತನ ಪೋನ್ ಸೀಜ್ ಮಾಡಿದ್ದೇವೆ.
ಕ್ರೈಮ್ ನಂ ೬೮/೨೦೨೬,ಬಿಎನ್ ಎಸ್ ೧೦೮ ಆತ್ಮಹತ್ಯೆಗೆ ಪ್ರೇರಣೆ ಅಡಿ ಪ್ರಕರಣ ದಾಖಲಿಸಿದ್ದೇವೆ.
ಈಗಾಗಲೇ ಆ ಹುಡುಗನನ್ನು ಅರೆಸ್ಟ್ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದೇವೆ. ಹುಡುಗಿಯ ಜೊತೆ ಹಲವು ವರ್ಷಗಳಿಂದ ಹುಡುಗ ರಿಲೇಷನ್ಶಿಪ್ ನಲ್ಲಿದ್ದ.
ಅವರ ತಾಯಿ ಹೇಳುವ ಪ್ರಕಾರ ಮದುವೆ ಮಾಡಿಕೊಳ್ಳಲು ಆತ ಒತ್ತಾಯ ಮಾಡುತ್ತಿದ್ದ ಎಂದು ಹೇಳಲಾಗಿದೆ.
ಆದ ಕಾರಣ ಮಾನಸಿಕವಾಗಿ ನೊಂದು ಹುಡುಗಿ ಸುಸೈಡ್ ಮಾಡಿಕೊಂಡಿದ್ದಾಳೆ ಎಂದು ತಾಯಿ ದೂರದಲ್ಲಿ ಉಲ್ಲೇಖಿಸಿದ್ದಾರೆ.
ಯುವತಿಗೆ ಯಾವ ರೀತಿ ಟಾರ್ಚರ್ ಕೊಡ್ತಾ ಇದ್ರು.
ಏನೆಲ್ಲ ತೊಂದರೆ ಕೊಡ್ತಾ ಇದ್ರು ಅದರ ಬಗ್ಗೆ ಡೀಟೇಲ್ ಆಗಿ ವೆರಿಫಿಕೇಶನ್ ಮಾಡಿ.
ನಾವು ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸುತ್ತೇವೆ.
ಎರಡು ಸಮುದಾಯದವರೆಗೂ ನಾವು ರಿಕ್ವೆಸ್ಟ್ ಮಾಡುತ್ತೇವೆ ದಯವಿಟ್ಟು ಶಾಂತಿ ಕಾಪಾಡಬೇಕು.
ಇನ್ಸಿಡೆಂಟ್ ಏನಾಗಿದೆ ಆ ಪ್ರಕಾರ ನಾವು ಕ್ರಮ ಕೈಗೊಳ್ಳುತ್ತೇವೆ.
ಡೆತ್ ನೋಟ್ ಏನು ಸಿಕ್ಕಿಲ್ಲ.
—–
ಹಿಂದೂಪರ ಸಂಘಟನೆಯಿಂದ ಲವ್ ಜಿಹಾದ್ ಆರೋಪ ವಿಚಾರ.
ತಾಯಿಯ ದೂರಿನಲ್ಲಿ ಸದ್ಯಕ್ಕೆ ಅಂತಹ ಯಾವುದೇ ವಿಷಯಗಳ ಉಲ್ಲೇಖವಿಲ್ಲ. ಅವರಿಗೆ ಅವಕಾಶ ಇದೆ, ಇನ್ನೊಂದು ಸಾರಿ ದೂರು ಕೊಡೋದಕ್ಕೆ.
ಅವರು ಏನೆಲ್ಲಾ ವಿಷಯಗಳನ್ನು ಉಲ್ಲೇಖ ಮಾಡುತ್ತಾರೆ ಅದರ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದ ಎಸ್ ಪಿ.
Trending Now


