Saturday, June 13, 2026
28.2 C
Belagavi

ಮಕ್ಕಳ ವರ್ತನೆಯಲ್ಲಿ ಈ ಬದಲಾವಣೆ ಕಾಣ್ತಿದೆಯಾ?: ಸೈಕಾಲಜಿಸ್ಟ್ ಏನಂತಾರೆ..?

advertisement

spot_img

ಮಕ್ಕಳ ವರ್ತನೆಯಲ್ಲಿ ಈ ಬದಲಾವಣೆ ಕಾಣ್ತಿದೆಯಾ?: ಸೈಕಾಲಜಿಸ್ಟ್ ಏನಂತಾರೆ..?

ಬೆಂಗಳೂರು: ಶಾಲೆ ಅಥವಾ ಕಾಲೇಜಿಗೆ ಹೋಗುವ ನಿಮ್ಮ ಮಕ್ಕಳಲ್ಲಿ, ಅದರಲ್ಲಿಯೂ ಗಂಡು ಮಕ್ಕಳಲ್ಲಿ, ಇದ್ದಕ್ಕಿದ್ದಂತೆ ಭಯ, ಸಂಕೋಚ, ಆತ್ಮವಿಶ್ವಾಸದ ಕೊರತೆ ಕಾಣಿಸುತ್ತಿದೆಯೇ?
ಅಥವಾ ಅವರು ತುಂಬಾ ಮೌನವಾಗಿದ್ದಾರೆಯೇ, ಎಲ್ಲರಿಂದ ದೂರವಾಗುತ್ತಿದ್ದಾರೆಯೇ?
ಇಲ್ಲವೇ, ಇದ್ದಕ್ಕಿದ್ದಂತೆ ಕೋಪ ಹೆಚ್ಚಾಗಿ, ಸಣ್ಣ ವಿಷಯಕ್ಕೂ ಅಗ್ರೆಸಿವ್ ಆಗಿ ಪ್ರತಿಕ್ರಿಯಿಸುತ್ತಿದ್ದಾರೆಯೇ?

ಹಾಗಿದ್ದರೆ ಅದನ್ನು ಏನೋ ವಯಸ್ಸಿನ ಸಮಸ್ಯೆ” ಎಂದು ನಿರ್ಲಕ್ಷ್ಯ ಮಾಡಬೇಡಿ . ನಿಧಾನವಾಗಿ ಅವರ ಜೊತೆ ಮಾತನಾಡಿ. ಶಾಲೆ ಅಥವಾ ಕಾಲೇಜಿನಲ್ಲಿ ಸೀನಿಯರ್‌ಗಳು, ಸಹಪಾಠಿಗಳು ಅಥವಾ ಸ್ನೇಹಿತರಿಂದ ಬುಲ್ಲಿಯಿಂಗ್ (Bullying), ಬೆದರಿಕೆ ಅಥವಾ ಅವಮಾನ ಎದುರಿಸುತ್ತಿದ್ದಾರೆಯೇ ಎಂದು ವಿಚಾರಿಸಿ.

ಅಂತಹ ಪರಿಸ್ಥಿತಿ ಇದ್ದರೆ, ಮಗುವಿನ ಜೊತೆ ನಿಲ್ಲಿ. ತಪ್ಪು ಅವರದಲ್ಲ ಎಂಬ ಭರವಸೆ ನೀಡಿ. ಇಂತಹ ಸಂದರ್ಭಗಳನ್ನು ಹೇಗೆ ನಿಭಾಯಿಸಬೇಕು ಎಂದು ತಿಳಿಸಿ. ಅಗತ್ಯವಿದ್ದರೆ ಶಾಲೆಯ ಶಿಕ್ಷಕರು ಅಥವಾ ಮುಖ್ಯಸ್ಥರ ಜೊತೆ ಮಾತನಾಡಿ.ನನ್ನ ಕೌನ್ಸೆಲಿಂಗ್ ಅನುಭವದಲ್ಲಿ, ಮನೆಯಲ್ಲಿ ಅತಿಯಾದ ಭಯ ಮತ್ತು ಒತ್ತಡದಲ್ಲಿ ಬೆಳೆದ ಮಕ್ಕಳು, ಆತಂಕ (Anxiety) ಹೊಂದಿರುವ ಮಕ್ಕಳು, ಅಥವಾ ಎಡಿಎಚ್‌ಡಿ (ADHD) ಮತ್ತು ಆಟಿಸಂ (Autism) ಇರುವ (ನ್ಯೂರೋಡೈವರ್ಜೆಂಟ್) ಮಕ್ಕಳು ಇಂತಹ ಬುಲ್ಲಿಯಿಂಗ್‌ಗೆ ಹೆಚ್ಚು ಗುರಿಯಾಗುವುದನ್ನು ನೋಡಿದ್ದೇನೆ.

ದುರದೃಷ್ಟವಶಾತ್, ಬಾಲ್ಯದಲ್ಲಿ ಶಾಲೆ ಅಥವಾ ಕಾಲೇಜಿನಲ್ಲಿ ಅನುಭವಿಸಿದ ಈ ಭಯ ಕೆಲವರನ್ನು ಜೀವನಪೂರ್ತಿ ಹಿಂಬಾಲಿಸುತ್ತದೆ.

ಮುಂದೆ ಉದ್ಯೋಗಕ್ಕೆ ಹೋದಾಗ ಬಾಸ್ ಸ್ವಲ್ಪ ದನಿ ಎತ್ತರಿಸಿದರೂ ಹೆದರುತ್ತಾರೆ. ಸಹೋದ್ಯೋಗಿಗಳ ಸಾಮಾನ್ಯ ತಮಾಷೆಯನ್ನೂ ಟೀಕೆ ಎಂದು ಭಾವಿಸುತ್ತಾರೆ. “ನಾನು ಏನಾದರೂ ತಪ್ಪು ಮಾಡಿಬಿಡುವೆನೇ?”, “ಜನ ಏನು ಅಂದುಕೊಳ್ಳುತ್ತಾರೆ?” ಎಂಬ ಆತಂಕದಲ್ಲೇ ಬದುಕಲು ಆರಂಭಿಸುತ್ತಾರೆ.

ಮಕ್ಕಳಿಗೆ ಉತ್ತಮ ಶಿಕ್ಷಣ, ಆಹಾರ, ವಸತಿ ಮತ್ತು ಆಸ್ತಿ ಎಷ್ಟು ಮುಖ್ಯವೋ, ಮಾನಸಿಕ ಸುರಕ್ಷತೆ, ಭಾವನಾತ್ಮಕ ಬೆಂಬಲ ಮತ್ತು ಆತ್ಮವಿಶ್ವಾಸವೂ ಅಷ್ಟೇ ಮುಖ್ಯ.

ನಿಮ್ಮ ಸಮಯೋಚಿತ ಬೆಂಬಲ, ನಿಮ್ಮ ಮಗುವಿನ ಇಡೀ ಭವಿಷ್ಯವನ್ನು ಬದಲಾಯಿಸಬಹುದು.

ನೆನಪಿಡಿ: ಮಕ್ಕಳಿಗೆ ನಾವು ಕೊಡಬಹುದಾದ ದೊಡ್ಡ ಆಸ್ತಿ ಎಂದರೆ ಭಯವಿಲ್ಲದೆ ಬದುಕುವ ಧೈರ್ಯ.

( ಇದೇ ರೀತಿಯ‌ ಶಾಲಾ ಕಾಲೇಜಿನಲ್ಲಿ ಸತತ ಬೆದರಿಕೆಗೆ ಒಳಗಾಗಿ ಭಯವಿಟ್ಟುಕೊಂಡ ಬೆಳೆದು ಆಂಕ್ಸೈಟಿಯಿಂದ ಕೆಲಸದಲ್ಲಿ ಎಲ್ಲಿಯೂ ಒಂದೆಡೆ ನೆಲೆಸಲಾಗದೇ ಖಿನ್ನತೆಗೆ ಜಾರಿದ ಹುಡುಗನೊಬ್ಬನನ್ನು ಜೊತೆ ಮಾತಾಡಿದ ನಂತರ ಇದನ್ನು ಬರೆಯಬೇಕನಿಸಿತು)

ಡಾ. ರೂಪಾ ರಾವ್ (Dr. Ruupa Rao, ಸೈಕಾಲಜಿಸ್ಟ್ ಬೆಂಗಳೂರು

Hot this week

ಖಾಯಂ ವೈದ್ಯರ ನೇಮಕಾತಿಗೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ

ಖಾಯಂ ವೈದ್ಯರ ನೇಮಕಾತಿಗೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ...

ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಹೆಗಲಾದ ಕರವೇ ಸ್ವಾಭಿಮಾನಿ ಬಣ ಉಚಿತ ಪುಸ್ತಕ ವಿತರಿಸಿ ದಾನಿಗಳಿಗೆ ಸನ್ಮಾನ

ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಹೆಗಲಾದ ಕರವೇ ಸ್ವಾಭಿಮಾನಿ ಬಣ...

ಬಾಗಲಕೋಟೆಯಲ್ಲಿ ರೌಡಿಸಂ ನಿಗ್ರಹ ದಳ ರಚನೆ.

ಬಾಗಲಕೋಟೆಯಲ್ಲಿ ರೌಡಿಸಂ ನಿಗ್ರಹ ದಳ ರಚನೆ. ರೌಡಿಸಂ ನಿಯಂತ್ರಣಕ್ಕೆ ಪೊಲೀಸ್ ಇಲಾಖೆಯಿಂದ ಮಹತ್ವದ...

Topics

ಖಾಯಂ ವೈದ್ಯರ ನೇಮಕಾತಿಗೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ

ಖಾಯಂ ವೈದ್ಯರ ನೇಮಕಾತಿಗೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ...

ಬಾಗಲಕೋಟೆಯಲ್ಲಿ ರೌಡಿಸಂ ನಿಗ್ರಹ ದಳ ರಚನೆ.

ಬಾಗಲಕೋಟೆಯಲ್ಲಿ ರೌಡಿಸಂ ನಿಗ್ರಹ ದಳ ರಚನೆ. ರೌಡಿಸಂ ನಿಯಂತ್ರಣಕ್ಕೆ ಪೊಲೀಸ್ ಇಲಾಖೆಯಿಂದ ಮಹತ್ವದ...

ಡಾ.ಯತೀಂದ್ರ ಸಿದ್ದರಾಮಯ್ಯಗೆ ಕಲಾತ್ಮಕ ಹಣ್ಣಿನ ಕೆತ್ತನೆಯ ಉಡುಗೊರೆ ನೀಡಿದ ಕಲಾವಿದ

ಡಾ.ಯತೀಂದ್ರ ಸಿದ್ದರಾಮಯ್ಯಗೆ ಕಲಾತ್ಮಕ ಹಣ್ಣಿನ ಕೆತ್ತನೆಯ ಉಡುಗೊರೆ ನೀಡಿದ ಕಲಾವಿದ ಬೆಂಗಳೂರು: ಹಣ್ಣು-ತರಕಾರಿಗಳ...

ಕರ್ನಾಟಕದ ಸರ್ವತೋಮುಖ ಪ್ರಗತಿಗೆ ಕೈಜೋಡಿಸಲು ಐಎಎಸ್, ಐಪಿಎಸ್, ಐಎಫ್ಎಸ್ ಅಧಿಕಾರಿಗಳಿಗೆ ಸಿಎಂ ಡಿ ಕೆ ಶಿವಕುಮಾರ್ ಕರೆ

ಕರ್ನಾಟಕದ ಸರ್ವತೋಮುಖ ಪ್ರಗತಿಗೆ ಕೈಜೋಡಿಸಲು ಐಎಎಸ್, ಐಪಿಎಸ್, ಐಎಫ್ಎಸ್ ಅಧಿಕಾರಿಗಳಿಗೆ ಸಿಎಂ...

ಅಶೋಕ್ ಕಸ ಮಾಫಿಯಾ ಗ್ಯಾಂಗಿನ ಏಜೆಂಟ್ ಆಗಿ ಮಾತನಾಡುತ್ತಿದ್ದಾರೆ: ಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು

ಅಶೋಕ್ ಕಸ ಮಾಫಿಯಾ ಗ್ಯಾಂಗಿನ ಏಜೆಂಟ್ ಆಗಿ ಮಾತನಾಡುತ್ತಿದ್ದಾರೆ: ಸಿಎಂ ಡಿ.ಕೆ....
spot_img

Related Articles

Popular Categories

spot_img