ಡಾ. ಮಹಾಂತ ಶಿವಯೋಗಿಗಳು ಎಲ್ಲರಿಗೂ ದಾರಿದೀಪ
ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕಿ ಚೇತನಾ ಪಾಟೀಲ ಅಭಿಮತ
ಅಥಣಿ:
ಮನುಷ್ಯ ದೈಹಿಕವಾಗಿ ಮಾನಸಿಕವಾಗಿ ಆರೋಗ್ಯದಿಂದಿರಲು ದುಶ್ಚಟಗಳಿಂದ ದೂರ ವಿರಬೇಕಾಗುತದೆ. ದುಶ್ಚಟಗಳ ಬಗ್ಗೆ ಅರಿವು ಮೂಡಿಸಿದ ಡಾ. ಮಹಾಂತ ಶಿವಯೋಗಿಗಳು ಎಲ್ಲರಿಗೂ ದಾರಿ ದೀಪವಾಗಿದ್ದಾರೆ. ಅಂತಹ ಪೂಜ್ಯರ ಜೀವಿತಾವಧಿಯಲ್ಲಿ ನಾವೆಲ್ಲರೂ ಬದುಕಿದ್ದೇವು ಎಂಬುದೆ ನಮ್ಮ ಪುಣ್ಯವಾಗಿದೆ ಎಂದು ಪಾಟೀಲ ಪಬ್ಲಿಕ್ ಶಾಲೆಯ ಮುಖ್ಯಶಿಕ್ಷಕಿ ಚೇತನಾ ಪಾಟೀಲ ಹೇಳಿದರು.
ಸಮೀಪದ ಸತ್ತಿ ಗ್ರಾಮದ ಬಸವಶ್ರೀ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಘದ ಪಾಟೀಲ ಪಬ್ಲಿಕ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಶ್ರೀ ಬಾಳಕೃಷ್ಣ ಮಹಾರಾಜ ಸಂಸ್ಕೃತ ಪಾಠ ಶಾಲೆಯಲ್ಲಿ ಲಿಂ. ಡಾ. ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ಜರುಗಿದ ವ್ಯಸನ ಮುಕ್ತದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಾ ಸವದಿ – ಇಳಕಲ್ ಮಠದ ಡಾ. ಮಹಾಂತ ಶಿವಯೋಗಿಗಳು ತಮ್ಮ ಜೀವನದುದ್ದಕ್ಕೂ ದುಶ್ಚಟ ಮಾಡುವವರ ವಿರುದ್ಧ ಹೋರಾಟ ಮಾಡಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನರನ್ನು ದುಶ್ಚಟಗಳಿಂದ ಶಾಶ್ವತ ದೂರ ಮಾಡಿದ್ದಾರೆ. ಸಮಾಜದಲ್ಲಿ ದುಶ್ಚಟಗಳ ಅರಿವು ಮೂಡಿಸಿದ ಅವರು ಭಾರತ ದೇಶದ ಮಹಾತ್ಮರ ಸಾಲಿನಲ್ಲಿ ಇದ್ದಾರೆ. ದುಶ್ಚಟಗಳ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುತ್ತಾ ಅವರು ತೋರಿದ ದಾರಿಯಲ್ಲಿ ನಾವೆಲ್ಲರೂ ಸಾಗೋಣವೆಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಬಸವಶ್ರೀ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಘದ ಅಧ್ಯಕ್ಷ ಚಿದಾನಂದ ಪಾಟೀಲ, ಸುಜಾತಾ ಕಶೆಟ್ಟಿ, ರೇಷ್ಮಾ ಜಂಗಲಿ, ಸುಧಾರಾಣಿ ಪಾಟೀಲ, ದಾನಮ್ಮ ಗುಡ್ಡಾಪುರ, ಅಸ್ಮಾ ಅತ್ತಾರ, ರಂಜನಾ ನಾಯಕ, ಸಂಗೀತಾ ಗೌಡ, ವಿಜಯಲಕ್ಷ್ಮೀ ಮಾಡಿವಾಳ, ಸವಿತಾ ನಾಯಕ, ರಾಧಾ ಪಾಟೀಲ, ಸ್ವಾತಿ ಶೇಟೆ, ಸೌಜನ್ಯಾ ಬಳವಾಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಗೆ ಸಿಹಿ ಹಂಚಲಾಯಿತು.



