ಮಹರ್ಷಿ ಪತಾಂಜಲಿ ಯೋಗ ಪ್ರತಿಷ್ಠಾನ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ವಿಶ್ವ ಯೋಗ ದಿನಾಚರಣೆ.
ಮಹರ್ಷಿ ಪತಾಂಜಲಿ ಯೋಗ ಪ್ರತಿಷ್ಠಾನ ರಾಮದುರ್ಗ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ರಾಮದುರ್ಗ ಪಟ್ಟಣದ ಶ್ರೀ ಬಸವೇಶ್ವರ ಶಾಲಾ ಆವರಣದಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು . ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ವಿರಕ್ತಮಠ ಟ್ರಸ್ಟ್ ನ ಅಧ್ಯಕ್ಷರು ಶಾಸಕರ ಸಹೋದರರಾದ ಶ್ರೀ ಪ್ರದೀಪ್ ಪಟ್ಟಣ್ ಧನಲಕ್ಷ್ಮಿ ಸಕ್ಕರೆ ಕಾರ್ಖಾನೆ ಹಾಗೂ ಬಿಡಿಸಿಸಿ ಬ್ಯಾಂಕ್ ನ ನಿರ್ದೇಶಕರಾದ ಮಲ್ಲಣ್ಣ ಯಾದವಾಡ ಆಗಮಿಸಿದ್ದರು .
ಮುಖ್ಯ ಅತಿಥಿಗಳಾಗಿ ನಿವೃತ್ತ ಅರಣ್ಯ ಅಧಿಕಾರಿ ಸಿಬಿ ಪಾಟೀಲ್ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಶೇಷಪ್ಪ ಪೋತ್ರಡ್ಡಿ ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರ ಆನಂದ ನಾಯಕ್ ಬ್ರಹ್ಮಕುಮಾರಿ ಆಶ್ರಮದ ಮಾತೆ ಮಹಾದೇವಿ ಹಾಲಭಾವಿ ಗಣ್ಯ ವ್ಯಾಪಾರಸ್ಥರುಗಳಾದ ಚಂದ್ರು ಮಾಳದಕರ್ ಪ್ರವೀಣ್ ಪತ್ತೆಪುರ್ ವೇದಿಕೆಯನ್ನು ಹಂಚಿಕೊಂಡಿದ್ದರು , ಮಹರ್ಷಿ ಪತಾಂಜಲಿ ಯೋಗ ಪ್ರತಿಷ್ಠಾನದ ಯೋಗ ಗುರುಗಳಾದ ಆರ್ ಎಸ್ ಕೋಟೂರ್ ಎಲ್ಲ ಯೋಗ ಶಿಬಿರಾರ್ಥಿಗಳಿಗೆ ಯೋಗದ ತರಬೇತಿ ನೀಡಿದರು ಈ ಸಂದರ್ಭದಲ್ಲಿ ಮಹರ್ಷಿ ಪತಾಂಜಲಿ ಯೋಗ ಪ್ರತಿಷ್ಠಾನದ ಎಲ್ಲ ಪದಾಧಿಕಾರಿಗಳು ಸದಸ್ಯರು ಉದ್ಘಾಟಕರಿಗೆ ಅತಿಥಿಗಳಿಗೆ ಸನ್ಮಾನಿಸಿ ಸತ್ಕರಿಸಿದರು
ಬಿಡಿಸಿಸಿ ಬ್ಯಾಂಕ್ ಹಾಗೂ ಧನಲಕ್ಷ್ಮಿ ಕಾರ್ಖಾನೆ ನಿರ್ದೇಶಕ ಮಲ್ಲಣ್ಣ ಯಾದವಾಡ ಯೋಗ ಗುರುಗಳಾದ ಆರ್ ಎಸ್ ಕೋಟೂರ್ ಯೋಗ ಪ್ರತಿಷ್ಠಾನದ ಪದಾಧಿಕಾರಿಗಳಿಗೆ ಸನ್ಮಾನಿಸಿ ಸತ್ಕರಿಸಿದರು ವೇದಿಕೆಯ ಮೇಲಿದ್ದ ಎಲ್ಲ ಗಣ್ಯರು ಸಸಿಗಳನ್ನ ಹಂಚುವ ಮೂಲಕ ಪರಿಸರ ಜಾಗೃತಿ ಮೂಡಿಸಿದರು ಈ ಒಂದು ಭವ್ಯ ಕಾರ್ಯಕ್ರಮದಲ್ಲಿ ಮಹರ್ಷಿ ಪತಾಂಜಲಿ ಯೋಗ ಪ್ರತಿಷ್ಠಾನದ ಅಧ್ಯಕ್ಷರು ಪದಾಧಿಕಾರಿಗಳು ಸರ್ವ ಸದಸ್ಯರು ಸ್ಥಳೀಯ ಸಾರ್ವಜನಿಕರು ಉಪಸ್ಥಿತರಿದ್ದರು.



