ರಾಮದುರ್ಗ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ವ್ಯಥೆಯ.
ವಿದ್ಯುತ್ ವಿತರಣಾ ಉಪಕೇಂದ್ರದಲ್ಲಿ
ಪ್ರಥಮ ತ್ರೈಮಾಸಿಕ ನಿರ್ವಹಣಾ ತುರ್ತು ಕಾರ್ಯ ನಿಮಿತ್ತ ರಾಮದುರ್ಗ ಪಟ್ಟಣ ಸೇರಿದಂತೆ ತಾಲೂಕಿನ ಹಲವು ಗ್ರಾಮೀಣ ಪ್ರದೇಶಗಳಲ್ಲಿ ಏ.18ರ ಶನಿವಾರ ಬೆಳಿಗ್ಗೆ 9 ರಿಂದ ಸಂಜೆ 5ರ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಉಪವಿಭಾಗದ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಸ್ಕಾಂ ಉಪ ವಿಭಾಗಕ್ಕೆ ಒಳಪಡುವ ಸಾಲಾಪುರ, ಮುದೇನೂರ, ಸುನ್ನಾಳ, ಗೊಣಗನೂರ, ಓಬಳಾಪುರ, ಹಲಗತ್ತಿ, ರಂಕಪಲಕೊಪ್ಪ, ರಾಮದುರ್ಗ, ಕೊಳಚಿ, ಮಾಗನೂರ, ಚಿಲಮೂರ, ಈಐಡಿ ಪ್ಯಾರಿ ಶುಗರ್ಷ, ಮುದಕವಿ, ತಿಮ್ಮಾಪುರ, ಎಂ.ಖಾನಾಪುರ, ಹೊಸಕೇರಿ, ಕರಡಿಗುಡ್ಡ ಗ್ರಾಮದಾದ್ಯಂತ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಇಲಾಖೆ ಅಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.



