ತುಮಕೂರಿನ ಶ್ರೀ ಸಿದ್ಧಗಂಗಾ ಮಠದಲ್ಲಿ ನಡೆದ ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ 119ನೇ ಜಯಂತೋತ್ಸವ ಹಾಗೂ ಗುರುವಂದನಾ ಮಹೋತ್ಸವ ಕಾರ್ಯಕ್ರಮದಲ್ಲಿ ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು President of India , ಕರ್ನಾಟಕದ ಘನತೆವತ್ತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ Dr. Thawarchand Gehlot , ಶ್ರೀ ಸಿದ್ಧಗಂಗಾ ಮಠದ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳೊಂದಿಗೆ ಸಿದ್ದಗಂಗಾ ಮಠ ತುಮಕೂರು siddaganga mutt tumkur ಭಾಗಿಯಾದ ಕ್ಷಣಗಳು.
ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳು ಒಬ್ಬ ಮಹಾನ್ ಸಂತರು. ಹಸಿವಿನ ನೋವನ್ನು ಅರ್ಥಮಾಡಿಕೊಂಡ ಹೃದಯವಂತರು. ಅನಾಥರಿಗೆ ಅಪ್ಪನಾಗಿ ಅವರು ಪ್ರಾರಂಭಿಸಿದ ‘‘ಅನ್ನದಾಸೋಹ’’ ಇದು ಕೇವಲ ಊಟವಲ್ಲ ಇದು ಸಮಾನತೆಯ ಸಂದೇಶ, ಜಾತಿ- ಧರ್ಮ- ಬಡತನವೆಂಬ ಬೇಧಗಳನ್ನು ಕರಗಿಸಿ, ಯಾರೂ ಹಸಿದಿರಬಾರದು ಎಂಬ ಮಾನವೀಯ ಮಂತ್ರವನ್ನು ಜಗತ್ತಿಗೆ ಸಾರಿದ ಮಹಾಯಜ್ಞದ ಕುರಿತು ಈ ಸಂದರ್ಭದಲ್ಲಿ ಮಾತನಾಡಿದೆನು.
ಭಗವಾನ್ ಬಸವಣ್ಣನವರ ‘‘ಕಾಯಕವೇ ಕೈಲಾಸ’’ ಎಂಬ ತತ್ವವನ್ನು ಅಕ್ಷರಶಃ ಪಾಲಿಸಿದ ಶ್ರೀಗಳು, ತಮ್ಮ ಜೀವನದ 111 ವರ್ಷಗಳಲ್ಲಿ ಅವರು ಒಂದು ದಿನವೂ ವಿಶ್ರಮಿಸಲಿಲ್ಲ. ಪ್ರತಿದಿನ ಸುಮಾರು 10,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಯಾತ್ರಿಕರಿಗೆ ಉಚಿತವಾಗಿ ಆಹಾರ ಮತ್ತು ವಸತಿ ಕಲ್ಪಿಸಿ, ‘‘ತ್ರಿವಿಧ ದಾಸೋಹ’’ – ಅನ್ನ, ಅರಿವು ಮತ್ತು ಆಧ್ಯಾತ್ಮವನ್ನು ಪಸರಿಸಿದರು. ಶ್ರೀಗಳನ್ನು ಭಾರತದ ಮಹಾನ್ ನಾಯಕ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು, ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ, ಸ್ವಾಮೀಜಿಗಳ ಪಾದಸ್ಪರ್ಶ ಮಾಡಿ ಆಶೀರ್ವಾದ ಪಡೆದ ಕ್ಷಣವು ರಾಜಕೀಯದ ಗೌರವವಲ್ಲದೇ, ಸಂಸ್ಕೃತಿಯ ನಮನವಾಗಿದ್ದು, ‘‘ಉತ್ತರದಲ್ಲಿ ಗಂಗಾ ನದಿ ಹರಿಯುತ್ತಿದ್ದರೆ, ದಕ್ಷಿಣದಲ್ಲಿ ಈ ಸಿದ್ಧಗಂಗೆ ಹರಿಯುತ್ತಿದೆ’’ ಎಂದು ಹೇಳಿದ ಐತಿಹಾಸಿಕ ಕ್ಷಣದ ಬಗ್ಗೆ ಈ ಸುಂದರ ಸಮಯದಲ್ಲಿ ವಿವರಿಸಿದೆನು.
ಈ ಸುಸಂದರ್ಭದಲ್ಲಿ ಸಿದ್ಧಗಂಗಾ ಮಠದ ಕಿರಿಯ ಶ್ರೀಗಳಾದ ಶ್ರೀ ಶಿವಸಿದ್ಧೇಶ್ವರ ಸ್ವಾಮಿಗಳು, ಕೇಂದ್ರ ರಾಜ್ಯ ಖಾತೆ ಸಚಿವರಾದ ಶ್ರೀ ವಿ ಸೋಮಣ್ಣ V Somanna , ರಾಜ್ಯ ಸರ್ಕಾರದ ಸಚಿವರು ಉಪಸ್ಥಿತರಿದ್ದರು.
Trending Now



