ಸುಗಮ ಸಂಚಾರಕ್ಕೆ ರಸ್ತೆಗಳು ಅವಶ್ಯಕ
ಕಾಂಗ್ರೆಸ್ ಯುವ ಮುಖಂಡ ಚಿದಾನಂದ ಸವದಿ
ಅಥಣಿ* :
ರೈತ ಬಾಂಧವರು ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ರಸ್ತೆಗಳು ಅತ್ಯಂತ ಅವಶ್ಯಕ. 5 ಕೋಟಿ ವೆಚ್ಚದಲ್ಲಿ ನಾಗನೂರು ಪಿ. ಕೆ. ಗ್ರಾಮದಿಂದ ದೊಡದೊಡ ಮಾರ್ಗವಾಗಿ ಸತ್ತಿ , ಜನವಾಡ ರಸ್ತೆ ವರೆಗೂ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಯುವ ಮುಖಂಡ ಚಿದಾನಂದ ಸವದಿ ಹೇಳಿದರು.
ತಾಲೂಕಿನ ದೊಡವಾಡ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ 5 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಮುಂಬರುವ ದಿನಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲು ಅವರಖೋಡ, ನಾಗನೂರು ಪಿ.ಕೆ. ದೊಡ್ಡವಾಡ ಮಾರ್ಗವಾಗಿ ಸತ್ತಿ ಗ್ರಾಮದ ವರೆಗೆ ರಸ್ತೆ ಸಾರಿಗೆ ಬಸ್ ಸೌಲಭ್ಯ ಕಲ್ಪಿಸುವ ಯೋಜನೆಯನ್ನು ಇಟ್ಟುಕೊಳ್ಳಲಾಗಿದೆ. ರಸ್ತೆಗಳನ್ನು ಅಭಿವೃದ್ದಿ ಪಡಿಸುವಾಗ ಎಲ್ಲ ಗ್ರಾಮಸ್ಥರು ಸಹಕಾರ ನೀಡಬೇಕೆಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ತಾ.ಪಂ. ಮಾಜಿ ಸದಸ್ಯ ಜಡೆಪ್ಪ ಕುಂಬಾರ, ಶ್ರೀಶೈಲ ಹುದ್ದಾರ, ಮಲ್ಲೇಶ ಸವದಿ, ರಾವಸಾಬ ಐಗಳಿ, ಕಾಂತು ಹುದ್ದಾರ, ಶಿವರುದ್ರ ಗೂಳಪ್ಪನವರ, ಲೋಕೋಪಯೋಗಿ ಅಭಿಯಂತ ಮಲ್ಲಿಕಾರ್ಜುನ ಮಗದುಮ್ಮ, ಶಂಕರ ಐಗಳಿ, ಗ್ರಾ.ಪಂ. ಸದಸ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.



