ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ತೋರಣಗಟ್ಟಿ ಗ್ರಾಮದಲ್ಲಿ ಕೊರಕೋಪ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಶಾಸಕರು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಎಮ್ ಪಟ್ಟಣ ಭೂಮಿ ಪೂಜೆ ನೆರೆವರಿಸಿದರು.
ಈ ಸಂಧರ್ಭದಲ್ಲಿ ಶಾಸಕರು ಅಶೋಕ ಪಟ್ಟಣ ಮಾತನಾಡಿ ತೋರಣಗಟ್ಟಿ ಸಮಸ್ತ ರೈತ ಬಾಂಧವರಿಗೆ ಹೊಲಕ್ಕೆ ಹೋಗುವ ರಸ್ತೆಗಳ್ಳನ್ನು ಅತಿ ಶೀಘ್ರದಲ್ಲಿ ಪ್ರಾರಂಭಿಸಿ ರೈತರಿಗೆ ಅನಕೂಲ ಮಾಡುತ್ತೇನೆ, ಹಾಗೂ ತೋರಣಗಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಹೆಚ್ಚಿನ ಪತ್ತು ಮಂಜೂರು ಮಾಡಿಸುತ್ತೇನೆ ಎಂದು ಭರವಸೆ ನೀಡಿದರು. ಗುತ್ತಿಗೆದಾರರು ಒಳ್ಳೆಯ ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್ ಎನ್ ಶಿಂಗಾರಗೋಪ್ಪ ಪ್ರಾಸ್ತವಿಕವಾಗಿ ಮಾತನಾಡಿ ತೋರಣಗಟ್ಟಿ ಗ್ರಾಮಕ್ಕೆ ಕೆರೆಗೆ ನೀರು ತುಂಬಿಸುವ ಯೋಜನೆಯಲ್ಲಿ ನಮ್ಮ ಗ್ರಾಮ ಆಯ್ಕೆ ಮಾಡಿದ್ದಕ್ಕೆ ಶಾಸಕರಿಗೆ ಅಭಿನಂದನೆ ಸಲ್ಲಿಸಿದರು ಹಾಗೂ ಇನ್ನು ಹಲವಾರು ಯೋಜನೆ ಅಭಿವೃದ್ಧಿ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಉಳವಯ್ಯ ಹಿರೇಮಠ, ಮಹಾಂತೇಶ ಬೆನಕಟ್ಟಿಮಠ ವಹಿಸಿದ್ದರು, ಎಸ್ ಏನ್ ಶಿಂಗಾರಗೋಪ್ಪ, ರುದ್ರಪ್ಪ ಶಿಂಗಾರಗೋಪ್ಪ, ಮಾಜಿ ಪಿ.ಕೆ.ಪಿ ಎಸ ಅಧ್ಯಕ್ಷ ಸೋಮು ಮಲಗೌಡ್ರ, ತಮ್ಮೆಶ ಐನಾಪುರ, ಎಸ್. ಪಿ ಮುನ್ನೊಳ್ಳಿ, ಮಹದೇವ ಚಿನ್ನಾಕಟ್ಟಿ, ರೇವಪ್ಪ ಶಿಂಗಾರಗೋಪ್ಪ, ರಾಮಣ್ಣ ಮೆಟಗುಡ್ಡ, ಜಗದೀಶ ಬಿಜಲಿ, ಮಾಜಿ ಗ್ರಾ ಪಂ ಅಧ್ಯಕ್ಷೆ ಲಕ್ಷ್ಮಿ ಮುದಗೊಂಡ, ಸೋಮಲಿಂಗಪ್ಪ ಕುರಿ, ಪಂಚಾಯತ್ ಆಡಳಿತ ಅಧಿಕಾರಿ ಪ್ರಕಾಶ ಮುಗೋಳಕೋಡ, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.



