ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಉಪಕ್ರಮದಡಿ ಕೈಗಾರಿಕಾ ಅನುಮತಿ ಮತ್ತಷ್ಟು ಸಲೀಸು-ಶೀಘ್ರ!
ರಾಜ್ಯದ ಆರ್ಥಿಕ ಬೆಳವಣಿಗೆಗೆ ವೇಗ ನೀಡಬೇಕಾದರೆ ಹೂಡಿಕೆದಾರರಿಗೆ ಸುಲಲಿತ ವ್ಯವಹಾರ ವಾತಾವರಣ ಅನಿವಾರ್ಯ. ಅದಕ್ಕಾಗಿ ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಕುರಿತು ಮಹತ್ವದ ಸಭೆ ನಡೆಸಿ ಸ್ಪಷ್ಟ ಸಂದೇಶ ನೀಡಲಾಯಿತು – ಅನಗತ್ಯ ವಿಳಂಬಕ್ಕೆ ಅಂತ್ಯ, ತ್ವರಿತ ನಿರ್ಧಾರಗಳಿಗೆ ಆರಂಭ!
ಉದ್ದಿಮೆ ಆರಂಭಿಸಲು ನಾನಾ ಇಲಾಖೆ ಮತ್ತು ಸಂಸ್ಥೆಗಳ ಅನುಮೋದನೆಗಾಗಿ ಹಿಡಿಯುತ್ತಿರುವ ದೀರ್ಘ ಕಾಲಾವಕಾಶ ಹೂಡಿಕೆದಾರರಿಗೆ ಅಡಚಣೆಯಾಗುತ್ತಿತ್ತು. ಈ ಹಿಂದೆ ನಿಗದಿಪಡಿಸಿದ್ದ ಟೈಮ್ ಲೈನ್ ಗಳನ್ನು ಕಡಿತಗೊಳಿಸಿ, ಕಾಲಮಿತಿಯೊಳಗೆ ತ್ವರಿತವಾಗಿ ಅನುಮತಿ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ರಾಜ್ಯ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ಎಸ್. ಸೆಲ್ವಕುಮಾರ್, ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ಗೌರವ್ ಗುಪ್ತಾ, ಕೈಗಾರಿಕಾ ಇಲಾಖೆ ಆಯುಕ್ತರಾದ ಶ್ರೀಮತಿ ಗುಂಜನ್ ಕೃಷ್ಣ, , KIADB ಹಿರಿಯ ಅಧಿಕಾರಿಗಳು ಸೇರಿದಂತೆ ರಾಜ್ಯ ಸರ್ಕಾರದ ಬಹುತೇಕ ಎಲ್ಲಾ ಇಲಾಖೆಗಳ ಮುಖ್ಯಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದರು. ಕೈಗಾರಿಕೆ ಸ್ಥಾಪನೆಗೆ ಅಗತ್ಯವಾದ ಅನುಮತಿ, ನೀರು, ವಿದ್ಯುತ್, ಭೂ ಪರಿವರ್ತನೆ, ಪರಿಸರ ಅನುಮೋದನೆ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ತ್ವರಿತವಾಗಿ ಒದಗಿಸಲು ಸ್ಪಷ್ಟ ಟೈಮ್ ಲೈನ್ ನಿಶ್ಚಯಿಸಲಾಗಿದೆ.
Time is Money! ಸಮಯ ಉಳಿಸಿದರೆ ಹೂಡಿಕೆ ಹೆಚ್ಚುತ್ತದೆ; ಹೂಡಿಕೆ ಹೆಚ್ಚಿದರೆ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ; ಉದ್ಯೋಗ ಸೃಷ್ಟಿಯಾದರೆ ರಾಜ್ಯದ ಆರ್ಥಿಕ ಶಕ್ತಿ ದ್ವಿಗುಣಗೊಳ್ಳುತ್ತದೆ.
ಸುಲಲಿತ ವ್ಯವಹಾರ ವ್ಯವಸ್ಥೆ ಮೂಲಕ ಹೂಡಿಕೆದಾರರ ವಿಶ್ವಾಸವನ್ನು ಮತ್ತಷ್ಟು ಬಲಪಡಿಸಿ, ರಾಜ್ಯವನ್ನು ಕೈಗಾರಿಕಾ ಹಾಗೂ ಉದ್ಯೋಗ ಸೃಷ್ಟಿಯ ಶಕ್ತಿಕೇಂದ್ರವನ್ನಾಗಿಸುವ ದಿಟ್ಟ ಹೆಜ್ಜೆ ಇದಾಗಿದೆ.



