ಗೋನಾಳ ಎಸ್.ಟಿ. ಗ್ರಾಮದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಭಕ್ತಿಯ ವಿಶಿಷ್ಟ ಸೇವೆ
ಬಾಗಲಕೋಟೆ: ಶ್ರೀ ಮಾರುತೇಶ್ವರ ಹಾಗೂ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಗೋನಾಳ ಎಸ್.ಟಿ. ಗ್ರಾಮದಲ್ಲಿ ವಿಶೇಷ ಭಕ್ತಿಯ ಕಾರ್ಯಕ್ರಮ ನಡೆಯಲಿದೆ. ಗ್ರಾಮದ ಬಾಲಕ ಕುಮಾರ ಬಾಲರಾಜ ಹನಮಂತಪ್ಪ ಕುರಿ ಅವರು ಪ್ರಥಮ ಬಾರಿಗೆ 105 ತೂಕದ ಚೀಲವನ್ನು ಮನೆಯಿಂದ ಹೊತ್ತುಕೊಂಡು ಶ್ರೀ ಮಾರುತೇಶ್ವರ ದೇವಸ್ಥಾನದವರೆಗೆ ದೀಡನಮಸ್ಕಾರ ಸಲ್ಲಿಸಲಿದ್ದಾರೆ.
ಈ ಧಾರ್ಮಿಕ ಸೇವೆ ಶನಿವಾರ (ಏಪ್ರಿಲ್ 18, 2026) ರಂದು ನಡೆಯಲಿದ್ದು, ಗ್ರಾಮಸ್ಥರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಬಾಲಕನ ಈ ಭಕ್ತಿ ಕಾರ್ಯಕ್ಕೆ ಗ್ರಾಮದ ಹಿರಿಯರು ಹಾಗೂ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿ, ಭಗವಂತನ ಆಶೀರ್ವಾದ ಸದಾ ಇರಲಿ ಎಂದು ಹಾರೈಸಿದ್ದಾರೆ.
Trending Now



