ಕೆರೂರ: ಪಟ್ಟಣದ ಗ್ರಾಮದೇವತೆಗಳ ಜಾತ್ರಾ ಮಹೋತ್ಸವದ ಪ್ರಯುಕ್ತ ಒಂಭತ್ತು ವರ್ಷಗಳ ಬಳಿಕ ಮತ್ತೊಮ್ಮೆ ಜರುಗಿದ ಗ್ರಾಮದೇವಿ ಮಹಾರಥೋತ್ಸವ ಅದ್ದೂರಿಯಾಗಿ ನೆರವೇರಿತು. ಹೆಲಿಕ್ಯಾಪ್ಟರ್ ಪುಷ್ಪಾರ್ಚಣೆ ಮಾಡಲಾಯಿತು. ಡೊಳ್ಳು ಕುಣಿತ, ಆನೆ ಅಂಬಾರಿ. ಕುದುರೆ ಮೂಲಕ ಮೆರವಣಿಗೆಯ ಅಮ್ಮನ ಜಾತ್ರೆಗೆ ಕಳೆ ತಂದವು.
ಗ್ರಾಮ ದೇವತೆಗಳಾದ ದ್ಯಾಮವ್ವ ದುರ್ಗಮ್ಮರ ಜಾತ್ರೆಯ ರಥೋತ್ಸವಕ್ಕೆ ಬುಧವಾರ ಸಂಜೆ ಅಪಾರ ಭಕ್ತಗಣ ಸಾಕ್ಷಿಯಾಯಿತು. ವೈವಿಧ್ಯಮಯ ಹೂವು ತಳಿರು ತೋರಣ ಕೇಸರಿ వివిధ ಬಣ್ಣಗಳಲ್ಲಿ ಅಲಂಕರಿಸಿದ್ದ ದೇವಿಯರ ನೂತನ ರಥವು ಎ.ಆರ್. ಹಿರೇಮಠ ಆವರಣದಿಂದ ಮುಂದೆ ಚಲಿಸುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿ (218)ಯ ಇಕ್ಕೆಲಗಳಲ್ಲಿ ಕಿಕ್ಕಿರಿದು ನೆರೆದಿದ್ದ ಆಗಣಿತ ಭಕ್ತರು ಉತ್ತತಿ ಬಾಳೆಹಣ್ಣು, ಭಂಡಾರ ಎಸೆದು ಭಕ್ತಿಭಾವ ಮೆರೆದರು,
ಜಾತ್ರೆಯ ಸಂಭ್ರಮ ಹೆಚ್ಚಿಸಿದ ಆನೆ ಅಂಬಾರಿ ಭಕ್ತರ ಪಡೆ ರಥ ಸಾಗುತ್ತಿದ್ದಂತೆ ಹೆದ್ದಾರಿಯಲ್ಲಿ ಆನೆ ಅಂಬಾರಿ ಸಾಥ್ ನೀಡುತ್ತ ಠೀವಿಯಿಂದ ಸಾಗುತ್ತಿದ್ದ ದೃಶ್ಯ
ಸೆಳೆಯಿತು.
ಪಟ್ಟಣದ 46 ಸಮಾಜಗಳ ಬಾಂಧವರು ಹಾಗೂ ಬಂಧು ಬಳಗ ಸೇರಿ ಏಕತೆ ಸಾರಿದ್ದು ವಿಶೇಷವಾಗಿತ್ತು.
ಗಾಮದೇವತೆಯರ : ಭಂಡಾರದಲ್ಲಿ ಮಿಂದೆದ್ದ ಭಕ್ತಗಣ: ಗ್ರಾಮದೇ ಜಾತ್ರೆ ಪ್ರಯುಕ್ತ ಯುವಕ-ಯುವತಿಯರು ಪರಸ್ಪರ ಭಂಡಾರ ಎರಚುತ್ತ ಸಂಭ್ರಮಿಸಿದ್ದು ಪಟ್ಟಣದ ರಸ್ತೆಗಳೆಲ್ಲ ಭಂಡಾರಮಯವಾಗಿದ್ದವು.
ಪುರದೇವಿ ಜಾತ್ರೆ ನಿಮಿತ್ಯ ಪ.ಪಂ ಮುಖ್ಯಾಧಿಕಾರಿ ರಮೇಶ ಮಾಡಬಾಳ ನೇತೃತ್ವದಲ್ಲಿ ಭಕ್ತರಿಗೆ ನೀರಿನ
ವ್ಯವಸ್ಥೆ ಕಲ್ಪಿಸಿದರೆ ಮುಸ್ಲಿಂ ಸಮಾಜದಿಂದ ಶರಬತ್ ವಿವಿಧ ಭಕ್ತರು ಮಜ್ಜಿಗೆ ವಿತರಿಸಿ ಬಿಸಿಲಿನ ತಾಪದ ದಾಹ ನೀಗಿಸಿದರು. ಬನಶಂಕರಿ ದೇವಸ್ಥಾನದಲ್ಲಿ ಯುವಕರು ತಂಪು ಪಾನೀಯ ವಿತರಿಸಿದರು.



