ಕೋಲಾರದಲ್ಲಿ ಭೀ*ಕರ ರಸ್ತೆ ಅಪಘಾತ – ಮೂವರು ಕೂಲಿ ಕಾರ್ಮಿಕರು ದು*ರ್ಮರಣ!
ಭೀಕರ ರಸ್ತೆ ಅಪಘಾತದಲ್ಲಿ ಮೂವರು ಕೂಲಿ ಕಾರ್ಮಿಕರು ಸಾ*ವನ್ನಪ್ಪಿದ್ದು, 15 ಮಂದಿಗೆ ಗಂಭೀರ ಗಾಯವಾಗಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಬಳಿ ನಡೆದಿದೆ. ಮುನಿಯಮ್ಮ, ವೆಂಕಟಪ್ಪ ಮೃ*ತ ದುರ್ದೈವಿಗಳು.
ಮೃ*ತರೆಲ್ಲರೂ ಆಂಧ್ರಪ್ರದೇಶದ ಮದನಪಲ್ಲಿಯವರು. ಕೂಲಿ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಬೊಲೆರೊ ಪಿಕಪ್ ವಾಹನ ನಿಯಂತ್ರಣ ಪಲ್ಟಿಯಾಗಿದ್ದು, ಮೂವರು ಕೂಲಿ ಕಾರ್ಮಿಕರು ಮೃ*ತಪಟ್ಟಿದ್ದಾರೆ. ಶ್ರೀನಿವಾಸಪುರದ ಕಾಲೂನಿ ಗೇಟ್ ಬಳಿ ಈ ಘಟನೆ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಶ್ರೀನಿವಾಸಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



