Monday, August 10, 2026
20.5 C
Belagavi

ಸುಸ್ಥಿರ ಇಂಧನ: 2047ರ ಭಾರತಕ್ಕಾಗಿ ಒಂದು ಕಾರ್ಯಸೂಚಿ’

advertisement

spot_img

ಸುಸ್ಥಿರ ಇಂಧನ: 2047ರ ಭಾರತಕ್ಕಾಗಿ ಒಂದು ಕಾರ್ಯಸೂಚಿ’ ಎಂಬ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಈ ಪ್ರಮುಖ ಸಭೆಯನ್ನು ಉದ್ದೇಶಿಸಿ ಮಾತನಾಡುವುದು ನನಗೆ ಗೌರವ ಮತ್ತು ಮಹತ್ವದ ವಿಷಯವಾಗಿದೆ.

ಭಾರತವು ಐತಿಹಾಸಿಕ ಪರಿವರ್ತನೆಯ ದಶೆಯಲ್ಲಿ ನಿಂತಿರುವ ಸಂದರ್ಭದಲ್ಲಿ, ಸ್ವಾತಂತ್ರ್ಯದ 100 ವರ್ಷಗಳ ಮೈಲಿಗಲ್ಲಲ್ಲಿ ಭಾರತವು ಸಾಗುತ್ತಿರುವಾಗ, ಈ ಸಂವಾದವು ಅತಿ ಪ್ರಮುಖವೆನಿಸಿದೆ.

ಈ ಪ್ರಮುಖ ವೇದಿಕೆಯನ್ನು ಕಲ್ಪಿಸಲು ನೆರವಾದ ಕಾಮನ್ ವೆಲ್ತ್ ಕಾನೂನು ಶಿಕ್ಷಣ ಸಂಸ್ಥೆ (CLEA), ಇಂಧನ ಇಲಾಖೆ ಮತ್ತು ಎಲ್ಲಾ ಪೂರಕ ಸಂಸ್ಥೆಗಳಿಗೆ ನನ್ನ ಅಭಿನಂದನೆಗಳು.

ಈ ಸಮ್ಮೇಳನವು ಕೇವಲ ಶೈಕ್ಷಣಿಕ ಅಥವಾ ನೀತಿ ನಿರೂಪಣೆಯ ಕಾರ್ಯಕ್ರಮವಲ್ಲ. ಇದು ಕಾನೂನು, ಆಡಳಿತ, ತಂತ್ರಜ್ಞಾನ ಮತ್ತು ನ್ಯಾಯದ ಸಂಯೋಜನೆಯಾಗಿದೆ.

ಜಾಗತಿಕ ಇಂಧನ ಪರಿವರ್ತನೆಯು ಇಂದು ನಿರ್ಣಾಯಕ ಹಂತದಲ್ಲಿದೆ. ತೀವ್ರ ಹವಾಮಾನ ವೈಪರೀತ್ಯಗಳು, ಸಂಪನ್ಮೂಲಗಳ ಒತ್ತಡ ಮತ್ತು ಪರಿಸರ ಅಸಮತೋಲನವು ವಿಶ್ವದ ವಿವಿಧ ಖಂಡಗಳ ಜನರ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತಿವೆ.ಆದರೆ, ಶುದ್ಧ ಇಂಧನಕ್ಕೆ ಬದಲಾಗುವುದು ಜಾಗತಿಕ ಅಗತ್ಯವಾಗಿದ್ದರೂ, ಅದು ಸಮಾನತೆ ಮತ್ತು ನ್ಯಾಯಬದ್ಧವಾಗಿರಬೇಕು. ಕಾರ್ಬನ್ ಎಮಿಷನ್ ಗೆ ಗಣನೀಯವಾಗಿ ಕೊಡುಗೆ ನೀಡಿರುವ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು, ಕೇವಲ ಎಮಿಷನ್ ಅನ್ನು ಕಡಿತಗೊಳಿಸುವುದಲ್ಲದೇ, ಅಭಿವೃದ್ಧಿಶೀಲ ಆರ್ಥಿಕತೆಗಳಿಗೆ ತಂತ್ರಜ್ಞಾನ ಹಂಚಿಕೆ, ಹವಾಮಾನ ಹಣಕಾಸು ಮತ್ತು ಸಾಮರ್ಥ್ಯ ವೃದ್ಧಿಸುವಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ನಿಭಾಯಿಸಬೇಕು.

ಸುಸ್ಥಿರ ಅಭಿವೃದ್ಧಿ ಗುರಿಗಳು (SDGs) ರಾಷ್ಟ್ರಗಳಿಗೆ ಬೆಳವಣಿಗೆ ಮತ್ತು ಸುಸ್ಥಿರತೆಯನ್ನು ಸಮನ್ವಯಗೊಳಿಸುವ ಜಾಗತಿಕ ಚೌಕಟ್ಟನ್ನು ಒದಗಿಸುತ್ತವೆ.

ಆದ್ದರಿಂದ ಅಭಿವೃದ್ಧಿ ಮತ್ತು ಸುಸ್ಥಿರತೆ ಹಾಗೂ ಒಳಗೊಳ್ಳುವಿಕೆಯ ಗುರಿಯ ನಡುವೆ ಸಮತೋಲನ ಸಾಧಿಸಲು ಭಾರತದ ಮಾರ್ಗವು ವಿಶಿಷ್ಟವಾಗಿರಬೇಕು. ಇಂಧನವು ಕೇವಲ ಸಂಪನ್ಮೂಲವಲ್ಲ; ಅದು ಅಭಿವೃದ್ಧಿ ಮತ್ತು ವಿಶ್ವಾಸದ ಆಧಾರವಾಗಿದೆ.

ಮಾರುಕಟ್ಟೆಗಳು ಸ್ವಭಾವತಃ ಸಮಾನತೆ ಅಥವಾ ದೀರ್ಘಕಾಲೀನ ಸುಸ್ಥಿರತೆಯ ಜವಾಬ್ದಾರಿಯನ್ನು ಹೊರುವುದಿಲ್ಲ. ಆದ್ದರಿಂದ, ಸುಸ್ಥಿರ ಇಂಧನದತ್ತ ಪರಿವರ್ತನೆಗೆ ಅವುಗಳನ್ನು ಅವಲಂಬಿಸದೇ, ಬಲವಾದ ಮತ್ತು ದೂರದೃಷ್ಠಿಯ ಆಡಳಿತದ ಅಗತ್ಯವಿದೆ.

ಸರ್ಕಾರಗಳು ಸ್ಥಿರ ನೀತಿಚೌಕಟ್ಟುಗಳನ್ನು ನಿರ್ಮಿಸಿ, ನಾವಿನ್ಯತೆಯಲ್ಲಿ ಹೂಡಿಕೆ ಮಾಡಿ, ಶುದ್ಧ ಇಂಧನವನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡಬೇಕು. ಸಾರ್ವಜನಿಕ ನೀತಿಗಳು ಆರ್ಥಿಕ ಬೆಳವಣಿಗೆಯ ಜೊತೆಗೆ ಪರಿಸರದ ಜವಾಬ್ದಾರಿಗೂ ಆದ್ಯತೆ ನೀಡಬೇಕು.

ಇದರಲ್ಲಿ ನ್ಯಾಯಾಂಗದ ಪಾತ್ರವೂ ಪ್ರಮುಖವಾಗಿದೆ. ನಮ್ಮಂತಹ ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ, ನ್ಯಾಯಾಂಗವು ಪರಿಸರ ನ್ಯಾಯ ಮತ್ತು ತಲೆಮಾರುಗಳ ಸಮಾನತೆಯ ರಕ್ಷಕನಾಗಿ ಕಾರ್ಯನಿರ್ವಹಿಸುತ್ತದೆ.

ಭಾರತದಲ್ಲಿ ಈ ಜವಾಬ್ದಾರಿ ಸಂವಿಧಾನದಲ್ಲಿ ಗಾಢವಾಗಿ ನೆಲೆಗೊಂಡಿದೆ. ರಾಜ್ಯ ನೀತಿ ನಿರ್ದೇಶಕ ತತ್ವಗಳು ಪರಿಸರ ರಕ್ಷಣೆಗೆ ಒತ್ತಾಯಿಸುತ್ತವೆ, ಹಾಗೂ ಮೂಲಭೂತ ಕರ್ತವ್ಯಗಳು ನಾಗರಿಕರ ಮೇಲೆ ಪ್ರಕೃತಿ ಸಂಪನ್ಮೂಲಗಳನ್ನು ಕಾಪಾಡುವ ಹೊಣೆಗಾರಿಕೆಯನ್ನು ವಿಧಿಸುತ್ತವೆ.

ಜೀವಿಸುವ ಹಕ್ಕಿನ ಪ್ರಗತಿಪರ ವ್ಯಾಖ್ಯಾನಗಳ ಮೂಲಕ ಸುಪ್ರೀಂ ಕೋರ್ಟ್ ಸ್ವಚ್ಛ ಮತ್ತು ಆರೋಗ್ಯಕರ ಪರಿಸರವನ್ನು ಮೂಲಭೂತ ಹಕ್ಕಾಗಿ ಪರಿಗಣಿಸಿದೆ. ಅನೇಕ ಮಹತ್ವದ ತೀರ್ಪುಗಳು ಪರಿಸರ ನಿಯಮಗಳನ್ನು ಬಲಪಡಿಸಿ, ಸುಸ್ಥಿರ ಕೈಗಾರಿಕಾ ಪದ್ಧತಿಗಳನ್ನು ಉತ್ತೇಜಿಸಿವೆ.

ಮಾಲಿನ್ಯ ಉಂಟುಮಾಡುವವರೇ ಪಾವತಿಸುವ ತತ್ವ, ಮುನ್ನೆಚ್ಚರಿಕೆ ತತ್ವ ಮತ್ತು ಅಂತರ-ಪೀಳಿಗೆಯ ಸಮಾನತೆಯ ಪರಿಕಲ್ಪನೆಯಂತಹ ನ್ಯಾಯಾಂಗ ಸಿದ್ಧಾಂತಗಳು ಪರಿಸರ ಆಡಳಿತವನ್ನು ಬಲಪಡಿಸಿವೆ ಮತ್ತು ಸುಸ್ಥಿರ ಅಭಿವೃದ್ಧಿಯ ಹಾದಿಯನ್ನು ಭಾರತಕ್ಕೆ ತೋರಿದೆ.

ಭಾರತದ ನವೀಕರಿಸಬಹುದಾದ ಇಂಧನದ ಪ್ರಯಾಣದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ನಮಗೆ ಹೆಮ್ಮೆಯ ಸಂಗತಿ. ನಾವು ಶುದ್ಧ ತಂತ್ರಜ್ಞಾನಗಳನ್ನು ಸಕ್ರಿಯವಾಗಿ ಉತ್ತೇಜಿಸಿದ್ದು, ಖಾಸಗಿ ಹೂಡಿಕೆಯನ್ನು ಪ್ರೋತ್ಸಾಹಿಸಿದ್ದೇವೆ ಮತ್ತು ನಾವೀನ್ಯತೆ ಹಾಗೂ ಸುಸ್ಥಿರತೆಯನ್ನು ಬೆಂಬಲಿಸುವ ಪ್ರಗತಿಪರ ಚೌಕಟ್ಟುಗಳನ್ನು ನಿರ್ಮಿಸಿದ್ದೇವೆ.

ಕರ್ನಾಟಕವು 25,700 ಮೆಗಾವ್ಯಾಟ್‌ಗಳಿಗಿಂತ ಹೆಚ್ಚು ಸ್ಥಾಪಿತ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಹೊಂದಿದ್ದು, 10,500 ಮೆಗಾವ್ಯಾಟ್‌ಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸೌರಶಕ್ತಿ, ಸುಮಾರು 3,800 ಮೆಗಾವ್ಯಾಟ್‌ಗಳಷ್ಟು ಜಲಶಕ್ತಿ ಸಾಮರ್ಥ್ಯ ಮತ್ತು 7,900 ಮೆಗಾವ್ಯಾಟ್‌ ಪವನ ಶಕ್ತಿ ನೀಡುತ್ತದೆ. ಇದರಿಂದಾಗಿ ಕರ್ನಾಟಕ ಶುದ್ಧ ಇಂಧನ ನಿಯೋಜನೆಯಲ್ಲಿ ಭಾರತದ ಅಗ್ರ ರಾಜ್ಯಗಳಲ್ಲಿ ಒಂದಾಗಿದೆ.

ಆಗಸ್ಟ್ 2025 ರಲ್ಲಿ, ಕರ್ನಾಟಕದ ವಿದ್ಯುತ್ ಉತ್ಪಾದನೆಯ ಶೇ.80 ರಷ್ಟು ವಿದ್ಯುತ್ ನವೀಕರಿಸಬಹುದಾದ ಮೂಲಗಳಿಂದ ದೊರೆತಿದ್ದು, ಇದು ಭಾರತದಲ್ಲಿ ಅತ್ಯಧಿಕವಾಗಿದೆ. ನಾವು ವಿಶ್ವದ ಅತಿದೊಡ್ಡಸೌರ ಉದ್ಯಾನವನಗಳಲ್ಲಿ ಒಂದಾದ ಪಾವಗಡ ಸೌರ ಉದ್ಯಾನವನವನ್ನು ನಿಜ ಮಾಡಿದ್ದೇವೆ.

ಸಿಎಂ ಸೌರ ಕೃಷಿ ಯೋಜನೆಯ ಮೂಲಕ, ನಾವು ರೈತರಿಗೆ 3,000 ಮೆಗಾವ್ಯಾಟ್‌ಗಳ ಸೌರ ಸಾಮರ್ಥ್ಯವನ್ನು ಸೃಷ್ಟಿಸುತ್ತಿದ್ದು, ಹಗಲಿನಲ್ಲಿ ವಿಶ್ವಾಸಾರ್ಹ ವಿದ್ಯುತ್ ಮತ್ತು ಜೀವನೋಪಾಯದ ಭದ್ರತೆಯನ್ನು ಖಾತ್ರಿಪಡಿಸಿದ್ದೇವೆ.. PM-KUSUM ಯೋಜನೆಯಡಿಯಲ್ಲಿ, ನಾವು ಸೋಲಾರ್ ಪಂಪ್‌ಗಳಿಗೆ ಸಬ್ಸಿಡಿಗಳನ್ನು 50% ಕ್ಕೆ ಹೆಚ್ಚಿಸಿದ್ದು ಅನುಷ್ಠಾನದ ವೇಗವನ್ನು ಹೆಚ್ಚಿಸಿದ್ದೇವೆ.

ಆದರೆ ನಮ್ಮ ದೃಷ್ಟಿಕೋನವು ಸಾಮರ್ಥ್ಯ ಸೃಷ್ಟಿಯನ್ನು ಮೀರಿದೆ. ಗ್ರಿಡ್ ಮೂಲಸೌಕರ್ಯ ಮತ್ತು ಇಂಧನ ಸಂಗ್ರಹ ವ್ಯವಸ್ಥೆಗಳನ್ನು ಬಲಪಡಿಸುವುದು, ಹಸಿರು ಹೈಡ್ರೋಜನ್ ಮತ್ತು ಶುದ್ಧ ತಂತ್ರಜ್ಞಾನಗಳನ್ನು ಉತ್ತೇಜಿಸುವುದು ಮತ್ತು ಪ್ರತಿ ಮನೆಗೆ ಇಂಧನ ಪ್ರವೇಶವನ್ನು ಹೆಚ್ಚಿಸುವ ಕಡೆಗೆ ನಾವು ಕೆಲಸ ಮಾಡುತ್ತಿದ್ದೇವೆ.

ಮೀಸಲಾದ ನವೀಕರಿಸಬಹುದಾದ ಇಂಧನ ನೀತಿಯನ್ನು ಪರಿಚಯಿಸಿದ ಭಾರತದ ಮೊದಲ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ನಮ್ಮ ಸಮರ್ಪಕ ಸಂಪನ್ಮೂಲ ಯೋಜನೆಯಡಿಯಲ್ಲಿ, ನವೀಕರಿಸಬಹುದಾದ ಪ್ರವೇಶ ಹೆಚ್ಚಾದಂತೆ ವಿಶ್ವಾಸಾರ್ಹತೆ ಮತ್ತು ಗ್ರಿಡ್ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಬ್ಯಾಟರಿ ಶಕ್ತಿ ಸಂಗ್ರಹ ವ್ಯವಸ್ಥೆಗಳಿಂದ ಬೆಂಬಲಿತವಾದ 38 ಗಿಗಾವ್ಯಾಟ್‌ಗಳಿಗಿಂತ ಹೆಚ್ಚುವರಿ ಪವನ ಮತ್ತು ಸೌರ ಸಾಮರ್ಥ್ಯವನ್ನು ನಾವು ಗುರಿಯಾಗಿಸಿಕೊಂಡಿದ್ದೇವೆ.

ಜಾಗತಿಕ ಸಂಸ್ಥೆಗಳು, ಇನ್‌ಕ್ಯುಬೇಶನ್ ಕೇಂದ್ರಗಳು, ಸೂರ್ಯ ಮಿತ್ರ ಮತ್ತು ವಾಯು ಮಿತ್ರದಂತಹ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳ ಸಹಯೋಗದ ಮೂಲಕ, ಈ ಪರಿವರ್ತನೆಯನ್ನು ಮುನ್ನಡೆಸಲು ನಾವು ಮುಂದಿನ ಪೀಳಿಗೆಯನ್ನು ಸಿದ್ಧಪಡಿಸುತ್ತಿದ್ದೇವೆ.

1902 ರಲ್ಲಿ ಭಾರತದ ಮೊದಲ ಜಲವಿದ್ಯುತ್ ಯೋಜನೆಯ ನೆಲೆಯಿಂದ ಇಂದು ನವೀಕರಿಸಬಹುದಾದ ಇಂಧನದಲ್ಲಿ ರಾಷ್ಟ್ರೀಯ ನಾಯಕನಾಗಿ ಹೊರಹೊಮ್ಮುವವರೆಗೆ, ಕರ್ನಾಟಕದ ಪ್ರಯಾಣವು ಪರಂಪರೆ ಮತ್ತು ನಾಯಕತ್ವ ಎರಡನ್ನೂ ಪ್ರತಿಬಿಂಬಿಸುತ್ತದೆ.

ಆತಿಥೇಯ ರಾಜ್ಯವಾಗಿ, ಕರ್ನಾಟಕವು ಕೇವಲ ಮೂಲಸೌಕರ್ಯವನ್ನು ಮಾತ್ರವಲ್ಲದೆ, ನಾವೀನ್ಯತೆಯ ಪರಿಸರ ವ್ಯವಸ್ಥೆಯನ್ನು ಒದಗಿಸುತ್ತೆ, ಅಲ್ಲಿ ತಂತ್ರಜ್ಞಾನ, ನೀತಿ ಮತ್ತು ಸಂಶೋಧನಾ ಸಂಸ್ಥೆಗಳು ಭವಿಷ್ಯಕ್ಕಾಗಿ ಪರಿಹಾರಗಳನ್ನು ರೂಪಿಸಲು ಒಂದೆಡೆ ಸೇರಲಿವೆ.

ಇಂದು ನಾವು ಮಾಡುವ ಆಯ್ಕೆಗಳು ಭವಿಷ್ಯದ ಪೀಳಿಗೆಗೆ ನಾವು ಬಿಟ್ಟುಹೋಗುವ ಜಗತ್ತನ್ನು ವ್ಯಾಖ್ಯಾನಿಸುತ್ತವೆ. ಸುಸ್ಥಿರ ಇಂಧನಕ್ಕೆ ಆಗುವ ಪರಿವರ್ತನೆಯ ಕೇವಲ ಇಂಗಾಲದ ಹೆಜ್ಜೆಗುರುತುಗಳನ್ನು ಕಡಿಮೆ ಮಾಡುವುದರ ಬಗ್ಗೆಯಲ್ಲದೇ ನಮ್ಮ ಅಭಿವೃದ್ಧಿ ಮಾದರಿಯನ್ನು ಮರು ವ್ಯಾಖ್ಯಾನಿಸುವುದರ ಕುರಿತಾಗಿದೆ. ನಮ್ಮ ಗ್ರಹವನ್ನು ಒತ್ತೆ ಇಟ್ಟು ಮಾಡುವ ಬೆಳವಣಿಗೆಯಲ್ಲ ಎಂದು ಖಚಿತಪಡಿಸಿಕೊಳ್ಳುವುದರ ಬಗ್ಗೆ ಮತ್ತು ಪ್ರಗತಿಯು ದುರ್ಬಲರನ್ನು ಹೊರಗಿಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳುವುದರ ಕುರಿತಾಗಿದೆ.

ಬೆಂಗಳೂರು ಘೋಷಣೆಯು ಕಾನೂನು, ನೀತಿ ಮತ್ತು ನಾವೀನ್ಯತೆಯನ್ನು ನ್ಯಾಯ ಮತ್ತು ಸುಸ್ಥಿರತೆಯ ತತ್ವಗಳೊಂದಿಗೆ ಜೋಡಿಸುವ ಮಾರ್ಗದರ್ಶಿಯಾಗಿ ಹೊರಹೊಮ್ಮಲಿ.

ಭಾರತವು ಪ್ರಮಾಣದಲ್ಲಿ ಮಾತ್ರವಲ್ಲದೆ, ದೃಷ್ಟಿಕೋನದಲ್ಲಿಯೂ ಮುನ್ನಡೆಸಲಿ ಮತ್ತು ಶುದ್ಧ, ನ್ಯಾಯಯುತ ಮತ್ತು ಶಾಶ್ವತವಾದ ಇಂಧನ ಭವಿಷ್ಯವನ್ನು ನಿರ್ಮಿಸಲು ನಾವು ಬದ್ಧರಾಗೋಣ.

Hot this week

ಮಳೆ ಕೊರತೆಯಿಂದ ಬೆಳೆ ಹಾನಿ: ಚಾಮನಹಳ್ಳಿಹುಂಡಿ ಗ್ರಾಮದಲ್ಲಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಪರಿಶೀಲನೆ

ಮಳೆ ಕೊರತೆಯಿಂದ ಬೆಳೆ ಹಾನಿ: ಚಾಮನಹಳ್ಳಿಹುಂಡಿ ಗ್ರಾಮದಲ್ಲಿ ಸಚಿವ ಡಾ. ಯತೀಂದ್ರ...

ಜನರ ಸಹಕಾರದೊಂದಿಗೆ ವಿಜಯಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಡಾ. ಯತೀಂದ್ರ ಸಿದ್ದರಾಮಯ್ಯ

ಜನರ ಸಹಕಾರದೊಂದಿಗೆ ವಿಜಯಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಡಾ....

ದೇಶದ ಉಜ್ವಲ ಭವಿಷ್ಯಕ್ಕಾಗಿ ಸಂವಿಧಾನ, ಪ್ರಜಾಪ್ರಭುತ್ವ ರಕ್ಷಿಸಬೇಕು: ಬಿ.ಕೆ.ಹರಿಪ್ರಸಾದ್

ದೇಶದ ಉಜ್ವಲ ಭವಿಷ್ಯಕ್ಕಾಗಿ ಸಂವಿಧಾನ, ಪ್ರಜಾಪ್ರಭುತ್ವ ರಕ್ಷಿಸಬೇಕು: ಬಿ.ಕೆ.ಹರಿಪ್ರಸಾದ್ ಬೆಂಗಳೂರು : ಕರ್ನಾಟಕ...

ಉತ್ತರ ಕರ್ನಾಟಕದ ಗ್ರಾಮೀಣ ಹಾಗೂ ಬಡ ಪ್ರತಿಭಾವಂತ ಮಕ್ಕಳಿಗೆ ಗುಣಮಟ್ಟದ ತರಬೇತಿ: ಬಸವರಾಜ ಬೊಮ್ಮಾಯಿ

ಉತ್ತರ ಕರ್ನಾಟಕದ ಗ್ರಾಮೀಣ ಹಾಗೂ ಬಡ ಪ್ರತಿಭಾವಂತ ಮಕ್ಕಳಿಗೆ ಗುಣಮಟ್ಟದ ತರಬೇತಿ:...

ಅಸಮಾನತೆ, ಜಾತಿ ವ್ಯವಸ್ಥೆ ಇರುವವರೆಗೆ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ

ಅಸಮಾನತೆ, ಜಾತಿ ವ್ಯವಸ್ಥೆ ಇರುವವರೆಗೆ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ ಸಾಮಾಜಿಕ ನ್ಯಾಯ,...

Topics

ಮಳೆ ಕೊರತೆಯಿಂದ ಬೆಳೆ ಹಾನಿ: ಚಾಮನಹಳ್ಳಿಹುಂಡಿ ಗ್ರಾಮದಲ್ಲಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಪರಿಶೀಲನೆ

ಮಳೆ ಕೊರತೆಯಿಂದ ಬೆಳೆ ಹಾನಿ: ಚಾಮನಹಳ್ಳಿಹುಂಡಿ ಗ್ರಾಮದಲ್ಲಿ ಸಚಿವ ಡಾ. ಯತೀಂದ್ರ...

ಜನರ ಸಹಕಾರದೊಂದಿಗೆ ವಿಜಯಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಡಾ. ಯತೀಂದ್ರ ಸಿದ್ದರಾಮಯ್ಯ

ಜನರ ಸಹಕಾರದೊಂದಿಗೆ ವಿಜಯಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಡಾ....

ದೇಶದ ಉಜ್ವಲ ಭವಿಷ್ಯಕ್ಕಾಗಿ ಸಂವಿಧಾನ, ಪ್ರಜಾಪ್ರಭುತ್ವ ರಕ್ಷಿಸಬೇಕು: ಬಿ.ಕೆ.ಹರಿಪ್ರಸಾದ್

ದೇಶದ ಉಜ್ವಲ ಭವಿಷ್ಯಕ್ಕಾಗಿ ಸಂವಿಧಾನ, ಪ್ರಜಾಪ್ರಭುತ್ವ ರಕ್ಷಿಸಬೇಕು: ಬಿ.ಕೆ.ಹರಿಪ್ರಸಾದ್ ಬೆಂಗಳೂರು : ಕರ್ನಾಟಕ...

ಉತ್ತರ ಕರ್ನಾಟಕದ ಗ್ರಾಮೀಣ ಹಾಗೂ ಬಡ ಪ್ರತಿಭಾವಂತ ಮಕ್ಕಳಿಗೆ ಗುಣಮಟ್ಟದ ತರಬೇತಿ: ಬಸವರಾಜ ಬೊಮ್ಮಾಯಿ

ಉತ್ತರ ಕರ್ನಾಟಕದ ಗ್ರಾಮೀಣ ಹಾಗೂ ಬಡ ಪ್ರತಿಭಾವಂತ ಮಕ್ಕಳಿಗೆ ಗುಣಮಟ್ಟದ ತರಬೇತಿ:...

ಅಸಮಾನತೆ, ಜಾತಿ ವ್ಯವಸ್ಥೆ ಇರುವವರೆಗೆ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ

ಅಸಮಾನತೆ, ಜಾತಿ ವ್ಯವಸ್ಥೆ ಇರುವವರೆಗೆ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ ಸಾಮಾಜಿಕ ನ್ಯಾಯ,...

ಪಿಎಚ್‌ಡಿ ಪದವಿ ಪಡೆದ ಜಹುರಬಾಶಾ ಕಲೆಗಾರರಿಗೆ ಅಭಿನಂದನೆ

ಪಿಎಚ್‌ಡಿ ಪದವಿ ಪಡೆದ ಜಹುರಬಾಶಾ ಕಲೆಗಾರರಿಗೆ ಅಭಿನಂದನೆ ರಾಮದುರ್ಗ: ಕಿತ್ತೂರು ರಾಣಿ ಚನ್ನಮ್ಮ...

ಹೊರಟ್ಟಿಯವರಿಂದ ರಾಜೀನಾಮೆ ಪಡೆದ ಸರ್ಕಾರದ ನಡೆ ಪರಿಷತ್ ಇಹಾಸದಲ್ಲಿ ಕಪ್ಪು ಚುಕ್ಕೆ:ಬಸವರಾಜ ಬೊಮ್ಮಾಯಿ

ಹೊರಟ್ಟಿಯವರಿಂದ ರಾಜೀನಾಮೆ ಪಡೆದ ಸರ್ಕಾರದ ನಡೆ ಪರಿಷತ್ ಇಹಾಸದಲ್ಲಿ ಕಪ್ಪು ಚುಕ್ಕೆ:ಬಸವರಾಜ...

ಸೆಂಟಮ್ ಎಲೆಕ್ಟ್ರಾನಿಕ್ಸ್ ₹500 ಕೋಟಿ ಹೂಡಿಕೆಗೆ ವೇಗ – 1,500 ಉದ್ಯೋಗ ಸೃಷ್ಟಿ

ಸೆಂಟಮ್ ಎಲೆಕ್ಟ್ರಾನಿಕ್ಸ್ ₹500 ಕೋಟಿ ಹೂಡಿಕೆಗೆ ವೇಗ - 1,500 ಉದ್ಯೋಗ...
spot_img

Related Articles

Popular Categories

spot_img