ರಸ್ತೆ ತಡೆದು ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಹಾಗೂ ಗ್ರಾಮದ ಮಹಿಳೆಯರು ಹೌದು ವೀಕ್ಷಕರೇ, ಬೆಳಗಾವಿ ಜಿಲ್ಲೆ ಸೌದತ್ತಿ ತಾಲೂಕಿನ ಕಟ್ಟಕಡೆ ಗ್ರಾಮ ಇನಾಂ ಗೋವಿನ ಕೊಪ್ಪದಲ್ಲಿ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವ ಬಸ್ಸುಗಳನ್ನು ತಡೆದು ಪ್ರತಿಭಟನೆ ನಡೆಸಿದರು ನಮ್ಮ ಗ್ರಾಮದ ಮಾರ್ಗವಾಗಿ ಸಂಚರಿಸುವ ಬಸ್ಗಳಿಗೆ ನಮ್ಮ ಗ್ರಾಮಕ್ಕೆ ನಿಲುಗಡೆ ಕಲ್ಪಿಸಿ ಎಂದು ಸಾಕಷ್ಟು ವರ್ಷಗಳಿಂದ ಲಿಖಿತ ರೂಪದಲ್ಲಿ ಮನವಿಯನ್ನ ಸಂಬಂಧಪಟ್ಟ ಇಲಾಖೆಯವರಿಗೆ ಸಲ್ಲಿಸಿದರು ಸಹ ಇತ್ತಕಡೆ ಗಮನ ಹರಿಸದೆ ಕೇವಲ ಆಶ್ವಾಸನೆ ಕೊಡುತ್ತಾ ಬಂದಿದ್ದ
ಅಧಿಕಾರಿಗಳ ವಿರುದ್ಧ ಹಾಗೂ ಜನಪ್ರತಿನಿಧಿಗಳ ವಿರುದ್ಧ ತಮ್ಮ ರೋಷ ಅವರ ಹಾಕಿದ್ದಲ್ಲದೆ ಬಸ್ಗಳನ್ನ ತಡೆದು ಪ್ರತಿಭಟನೆ ನಡೆಸಿದರು ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ರಾಮದುರ್ಗ ಉಪ ವಿಭಾಗದ ಡಿ ಎಸ್ ಪಿ ಚಿದಂಬರ್ ಮಡಿವಾಳರ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸಿ ಸೂಕ್ತ ಕ್ರಮ ವಹಿಸುವುದಾಗಿ ಭರವಸೆ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.
ಈ ಸಂದರ್ಭದಲ್ಲಿ ಊರಿನ ಯುವಕರಾದ ಭುಜಂಗ ಚುಂಗಿನ ಸುನಿಲ್ ಬೆನ್ನಿ ಪ್ರಶಾಂತ ಬಡಿಗೇರ್ ಶಿವಾನಂದ ದೊಡವಾಡ ಹಾಗೂ ನೂರಾರು ವಿದ್ಯಾರ್ಥಿಗಳು ಗ್ರಾಮದ ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.



