SSLC ಪಲಿತಾಂಶ, ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ರಾಜ್ಯಕ್ಕೆ ಪ್ರಥಮ.
ಚಿಕ್ಕೋಡಿ: ಇವತ್ತು ರಾಜ್ಯಾದ್ಯಂತ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಿದ್ದು, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಅಥಣಿ ಪಟ್ಟಣದ ನಿವಾಸಿ ಪ್ರಾರ್ಥನಾ ನಾಗರಾಜ್ ಬಿರಾದಾರ ಪಾಟೀಲ್ ರಾಜಕ್ಕೆ ಪ್ರಥಮ ಸ್ಥಾನ ಬಂದಿದ್ದು, ಕುಂದಾ ನಗರಿ ಕೀರ್ತಿ ಪತಾಕೆ ಮತ್ತಷ್ಟು ಉತ್ತುಂಗಕ್ಕೆ ಹಾರಿಸಿದ್ದಾರೆ, ೬೨೫ ಪೈಕಿ ೬೨೫ ಅಂಕ ಗಳಸಿ ರಾಜ್ಯಕ್ಕೆ ಪ್ರತಮ ಸ್ಥಾನ ಪಡೆದಿದ್ದಾರೆ,
ವಿದ್ಯಾರ್ಥಿ ಪ್ರಾರ್ಥನಾ ಮಾತನಾಡಿ, ನಾನು ಎಲ್ಲಾ ವಿದ್ಯಾರ್ಥಿಗಳ ರೀತಿಯಲ್ಲಿ ಸಾಮಾನ್ಯವಾಗಿ ವಿದ್ಯಾಭ್ಯಾಸ ಮಾಡುತಿದ್ದೆ, ನಾನು ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದ್ದು, ನಮ್ಮ ಶಿಕ್ಷಕರಿಗೆ ದನ್ಯವಾದಗಳು ಹೇಳುತ್ತೆನೆ ಎಂದು ಹರ್ಷ ವ್ಯಕ್ತಪಡಿಸಿದರು.
ನಾನು ಮುಂದೆ ವಿಜ್ಞಾನ ವಿಭಾಗದಲ್ಲಿ ಕಲಿಕೆಯನ್ನು ಮುಂದುವರಿಸುತ್ತೇನೆ, ಈ ಸಾಧನೆ ಹಿಂದೆ ನಾನೇನು ತುಂಬಾ ಶ್ರಮ ಪಟ್ಟಿಲ್ಲ, ಶಿಕ್ಷಕರು ಪಾಠವನ್ನು ಹೇಳುವಾಗ ಅಲ್ಲೇ ತಿಳಿದುಕೊಂಡು, ಮನೆಯಲ್ಲಿ ಬಂದು ಮತ್ತೊಮ್ಮೆ ಮರು ಸ್ಟಡಿ ಮಾಡುತ್ತಿದ್ದೆ, ಇದರಿಂದ ಇಷ್ಟು ಅಂಕ ಪಡಿಯೋಕೆ ಸಾಧ್ಯವಾಯಿತು ಹೇಳಿದರು
ಕಟಗೇರಿ ಪ್ರೌಢಶಾಲೆಯಲ್ಲಿ ನಮ್ಮ ತಂದೆ ಶಿಕ್ಷಕರಾಗಿದ್ದಾರೆ ನಾನು ಕೂಡ ತಂದೆ ಜೊತೆಯಲ್ಲಿ ಅದೆ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದೆ, ಸರ್ಕಾರಿ ಶಾಲೆಯಲ್ಲಿ ಕಲಿತು ಇಷ್ಟು ಒಳ್ಳೆ ಅಂಕಗಳಿಗೆ ಸಾಧ್ಯವಾಯಿತು ಎಂದು ಹರ್ಷ ವ್ಯಕ್ತಪಡಿಸಿದರು, ನಾನು ಮುಂದೆ ಸಮಾಜ ಗೋಸ್ಕರ ಏನಾದರು ಸಾಧನೆ ಮಾಡಬೇಕೆಂಬ ನಿಟ್ಟಿನಲ್ಲಿ ಕನಸು ಕಂಡಿದ್ದೇನೆ, ಇದೇ ರೀತಿ ಕೂಡ ನನ್ನ ಮುಂದೆ ವಿದ್ಯಾಭ್ಯಾಸ ನಡೆಸುತ್ತೇನೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಆರ್ ಮುಂಜೆ ಮಾತನಾಡಿ, ನಮ್ಮ ತಾಲೂಕಿನ ವಿದ್ಯಾರ್ಥಿ ಸಾಧನೆ ನಮಗೆ ಹರ್ಷ ತಂದಿದೆ, ನಮ್ಮ ತಾಲೂಕಿಗೆ ಒಳ್ಳೆಯ ವಿದ್ಯಾರ್ಥಿ, ಒಳ್ಳೆಯ ಟ್ಯಾಲೆಂಟ್ ಇರುವ ವಿದ್ಯಾರ್ಥಿ, ಹಿಂದೆ ಕೂಡ ಟ್ಯಾಲೆಂಟ್ ಚಾಂಪಿ ಎಂಬ ಪರೀಕ್ಷೆಯಲ್ಲಿ 21ನೇ ರಾಂಕ್ ಪಡೆದಿರುವ ವಿದ್ಯಾರ್ಥಿನಿಯರಾಗಿದ್ದಾರೆ, ಬೆಳಗಾವಿ ಜಿಲ್ಲೆಗೆ ಈ ವಿದ್ಯಾರ್ಥಿನಿ ಪ್ರಥಮ ಬಂದಿದ್ದಾಳೆ ಕಠಿಣ ಮತ್ತು ಸತತ ಪರಿಶ್ರಮದಿಂದ ಒಳ್ಳೆಯ ಸಾಧನೆ ಮಾಡೋಕೆ ಸಾಧ್ಯ, ನಮ್ಮ ತಾಲೂಕಿಗೆ ವಿದ್ಯಾರ್ಥಿನಿ ಮಾದರಿಯಾಗಿದ್ದಾರೆ, ಎಸ್ ಎಸ್ ಎಲ್ ಸಿ ಪರೀಕ್ಷೆ ಮುಂಚಿತವಾಗಿ ಹಲವು ರೂಪುರೇಷೆಗಳನ್ನು ಸಿದ್ಧಪಡಿಸಿದ್ದರಿಂದ ಎಂಥಹಾ ಸಾಧನೆಗೆ ನಮ್ಮ ತಾಲೂಕಿನಲ್ಲಿ ಸಫಲವಾಗಿದೆ, ವಿಶೇಷವಾಗಿ ಸರ್ಕಾರಿ ಶಾಲೆಯಲ್ಲಿ ಕಲಿತು ವಿದ್ಯಾರ್ಥಿನಿ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದ್ದು ವಿಶೇಷ, ಸರ್ಕಾರಿ ಶಾಲೆ ಅಂದ್ರೆ ಮೂಗು ಮುರಿಯವರ ಮಧ್ಯದಲ್ಲಿ ಈ ವಿದ್ಯಾರ್ಥಿನಿ ಎಲ್ಲರಿಗೂ ಕೂಡ ಮಾದರಿಯಾಗಿದ್ದಾಳೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹರ್ಷ ವ್ಯಕ್ತಪಡಿಸಿದರು.



