ಭಾರತೀಯ ಚುನಾವಣಾ ಆಯೋಗದ ಆದೇಶದ ಮೇರೆಗೆ ತಾಲೂಕ ಆಡಳಿತ ರಾಮದುರ್ಗ ಹಾಗೂ ವಿದ್ಯಾ ಪ್ರಸಾರಕ ಸಮಿತಿಯ ಬಿಎಡ್ ಕಾಲೇಜ್ ಇವರ ಸಹಯೋಗದಲ್ಲಿ ರಾಷ್ಟ್ರೀಯ ಮತದಾರ ದಿನಾಚರಣೆ 2026 ಆಚರಿಸಲಾಯಿತು ಈ ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕಾ ದಂಡಾಧಿಕಾರಿ ತಹಶೀಲ್ದಾರ್ ಪ್ರಕಾಶ್ ಹೊಳೆಪುಗೊಳು ವಹಿಸಿಕೊಂಡಿದ್ದರು,
ಮುಖ್ಯ ಅತಿಥಿಗಳಾಗಿ ರಾಮದುರ್ಗದ ಸಿಪಿಐ ವಿನಾಯಕ ಬಡಿಗೇರ್ ರಾಮದುರ್ಗ ಪುರಸಭೆ ಮುಖ್ಯ ಅಧಿಕಾರಿ ಆಯ್ ಕೆ ಗುಡುದಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್ ಆರ್ ಕಾಂಬಳೆ ವಿದ್ಯಾ ಪ್ರಸಾರಕ ಸಮಿತಿ ಬಿಎಡ್ ಕಾಲೇಜಿನ ಪ್ರಾಂಶುಪಾಲರಾದ ಆರ್ ಎಲ್ ಕುಳ್ಳೂರ್ ಸಂಯೋಜಕರಾದ ಎಸ್ ಲೇಪಾಕ್ಷಿ ವೇದಿಕೆಯನ್ನು ಹಂಚಿಕೊಂಡಿದ್ದರು ಸಸಿಗೆ ನೀರುಣಿಸುವ ಮೂಲಕ ವೇದಿಕೆಯ ಮೇಲಿದ್ದ ಗಣ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ವಿದ್ಯಾ ಪ್ರಸಾರಕ ಸಮಿತಿಯ ಬಿಎಡ್ ಕಾಲೇಜಿನ ಸಂಯೋಜಕರಾದ ಎಸ್ ಲೇಪಾಕ್ಷಿ ಪ್ರಾಸ್ತಾವಿಕ ನುಡಿಯನ್ನಡಿದರು ತಾಲೂಕ ದಂಡಾಧಿಕಾರಿ ತಹಸಿಲ್ದಾರ್ ಪ್ರಕಾಶ್ ಹೊಳೆಪ್ಪುಗೊಳ್ ಮತದಾನದ ಪ್ರತಿಜ್ಞಾವಿಧಿಯನ್ನ ಬೋಧಿಸಿದರು ಈ ಕಾರ್ಯಕ್ರಮದಲ್ಲಿ ವಿದ್ಯಾ ಪ್ರಸಾರಕ ಸಮಿತಿಯ ಬಿಎಡ್ ಕಾಲೇಜಿನ ಪ್ರಾಚಾರ್ಯರು ಹಾಗೂ ಉಪನ್ಯಾಸಕರು ಪ್ರಶಿಕ್ಷಣಾರ್ಥಿಗಳು ತಾಲೂಕ ಆಡಳಿತದ ಸಿಬ್ಬಂದಿಗಳು ಪುರಸಭೆಯ ಸಿಬ್ಬಂದಿಗಳು ಮುದ್ದು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Trending Now



