ಪುರಸಭೆ ಸಿಬ್ಬಂದಿಗಳಿಗೆ ಮುತ್ತಿಗೆ ಹಾಕಿದ ಸಾರ್ವಜನಿಕರು.
ರಾಮದುರ್ಗ ಪಟ್ಟಣದ ನೇಕಾರಪೇಟೆಯಲ್ಲಿ ಇಂದು ನೀರಿನ ಬಿಲ್ ಜಾಸ್ತಿ ಬರ್ತಾ ಇದೆ ಎಂದು ನೀರಿನ ಬಿಲ್ ನೀಡಲು ಬಂದ ಪುರಸಭೆ ಸಿಬ್ಬಂದಿಗಳನ್ನು ಗೆರವು ಹಾಕಿ ಆಕ್ರೋಶ ವ್ಯಕ್ತಪಡಿಸಿದರು ಕಳೆದ ಕೆಲವು ತಿಂಗಳಿಂದ ಪುರಸಭೆಗೆ ತೆರಳಿ ಬಿಲ್ಲ ಪರಿಷ್ಕರಣೆ ಮಾಡುವಂತೆ ಮನವಿಯನ್ನ ಮಾಡಿದ್ದೆವು ಆ ಸಂದರ್ಭದಲ್ಲಿ ಪುರಸಭೆ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಅಧ್ಯಕ್ಷರು ಸರ್ವ ಸದಸ್ಯರು ಬಿಲ್ ಪರಿಷ್ಕರಣೆಯ ಬಗ್ಗೆ ಸಲಹೆ ನೀಡಿದರು ಆದರೆ ಮತ್ತೆ ಸಿಬ್ಬಂದಿಗಳು ಪ್ರಸಕ್ತ ಸಾಲಿನಲ್ಲಿ ಬಿಲ್ಲನ್ನ ಜಾಸ್ತಿ ನೀಡುತ್ತಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ ಪಟ್ಟಣದ ನೇಕಾರಪೇಟೆಯ ಶ್ರೀ ಕರಿಯಮ್ಮ ದೇವಿ ದೇವಸ್ಥಾನದಲ್ಲಿ
ಸಾರ್ವಜನಿಕರೆಲ್ಲ ಒಟ್ಟಿಗೆ ಕೂಡಿ ಪುರಸಭೆ ಸಿಬ್ಬಂದಿಗಳಿಗೆ ಗೆರವ ಹಾಕಿರುವ ಘಟನೆ ನಡೆಯಿತು ನಂತರ ಪುರಸಭೆ ಮುಖ್ಯ ಅಧಿಕಾರಿ ಈರಣ್ಣ ಗುಡುದಾರಿ ಸ್ಥಳಕ್ಕೆ ಆಗಮಿಸಿ ಸಾರ್ವಜನಿಕರ ಕುಂದು ಕೊರತೆ ಆಲಿಸಿ ನೀರಿನ ಬಿಲ್ಲನ್ನು ಪರಿಶೀಲಿಸಲಾಗುವುದು ಎಂದು ಆಕ್ರೋಶಗೊಂಡ ಸಾರ್ವಜನಿಕರಿಗೆ ತಿಳಿ ಹೇಳಿದರು ಈ ಸಂದರ್ಭದಲ್ಲಿ ನೇಕಾರ ಸಮಾಜದ ಮುಖಂಡರಾದ ಶಂಕ್ರಣ್ಣ ಮುರುಡಿ ಏಕನಾಥ ಕೊಣ್ಣೂರ್ ಪಿಆರ್ ಸೂಳಿಬಾವಿ ನಾಮದೇವ ಸೂರಿ ಪುರಸಭೆ ಮಾಜಿ ಅಧ್ಯಕ್ಷ ಶಂಕ್ರಣ್ಣ ಬೆನ್ನೂರ್ ಮಾಜಿ ಉಪಾಧ್ಯಕ್ಷರುಗಳಾದ ನಾಗರಾಜ್ ಕಟ್ಟಿಮನಿ ಸರಿತಾ ದೂತ್ ಸೇರಿದಂತೆ ನೇಕಾರಪೇಟೆಯ ಸಾರ್ವಜನಿಕರು ಉಪಸ್ಥಿತರಿದ್ದರು
Trending Now



