ಪರಸ್ಪರ ಸೆಡ್ಡು ಹೊಡೆದು ವಾಗ್ವಾದ ಮಾಡಿಕೊಂಡ ಡಿವೈಎಸ್ಪಿ ಮತ್ತು ಕನ್ನಡಪರ ಹೋರಾಟಗಾರ
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ನಡೆದ ಘಟನೆ ಮೂರು ದಿನದ ಹಿಂದೆ ನಡೆದ ಘಟನೆ ವಿಡಿಯೋ ವೈರಲ್ ತಹಶಿಲ್ದಾರ ಕಚೇರಿ ಬಂದ್ ಮಾಡಲು ಮುಂದಾಗಿದ್ದ ಹೋರಾಟಗಾರರು ಈ ವೇಳೆ ಸಾರ್ವಜನಿಕರಿಗೆ ತೊಂದರೆ ಆಗದಂತೆ ಹೋರಾಟ ಮಾಡುವಂತೆ ಡಿವೈಎಸ್ಪಿ ವೀರಯ್ಯ ಮನವಿ ಪೊಲೀಸರ ಮನವಿ ಧಿಕ್ಕರಿಸಿ ಮುನ್ನಗ್ಗಲು ಯತ್ನ ನಾವು ನುಗ್ಗುತ್ತೇವೆ ಎನ್ ಮಾಡ್ಕೋಳ್ತಿರಾ ಎಂದು ಅವಾಜ್ ಆಗ ಪರಸ್ಪರ ಸೆಡ್ಡು ಹೊಡೆದು ಬಾ ನೋಡಿಕೊಳ್ತೇನಿ ಎಂದ ಡಿವೈಎಸ್ಪಿ ಕನ್ನಡಪರ ಹೋರಾಟಗಾರ ಶಿವಾನಂದ ಪೊಲೀಸರ ಮೇಲೆ ಮುಗಿಬಿದ್ದ ಹೋರಾಟಗಾರರು
ತಳ್ಳಾಟ ನೂಕಾಟದ ಬಳಿಕ ಹೋರಾಟಗಾರರನ್ನ ಕಳುಹಿಸಿದ ಪೊಲೀಸರು
ಕರ್ತವ್ಯಕ್ಕೆ ಅಡ್ಡಿ ಆರೋಪ ಮಾಡ್ತಿರುವ ಪೊಲೀಸರು ಹೋರಾಟ ಹತ್ತಿಕ್ಕಲು ಯತ್ನ ಮಾಡ್ತಿದ್ದಾರೆಂದು ಹೋರಾಟಗಾರರ ಆರೋಪ ಬೈಲಹೊಂಗಲದಲ್ಲಿ ಚನ್ನಮ್ಮ ಸ್ಮಾರಕ ನಿರ್ಮಾಣದಲ್ಲಿ ಭ್ರಷ್ಟಾಚಾರ ಆರೋಪಿಸಿ ಹೋರಾಟ ಮಾಡ್ತಿದ್ದ ಕನ್ನಡಪರ ಹೋರಾಟಗಾರರು



