ವಿಜಯನಗರ |ಶಿವಲೀಲಾ ಸಿನಿಮಾಗೆ ಚಿತ್ರಮಂದಿರಗಳು ನೀಡಲು ಒತ್ತಾಯ
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಡಾ. ಮಂಜಮ್ಮ ಜೋಗತಿ ಆಗ್ರಹ ಇಂತಹ ಕನ್ನಡ ಸಿನಿಮಾಗಳಿಗೆ ಚಿತ್ರಮಂದಿರಗಳು ಕೊಡದೇ ಇರೋದು ಸರಿಯಲ್ಲ ಈಗಾಗಲೇ ಸಿನಿಮಾ ರಿಲೀಸ್ ಆದಾಗಲೇ ನಾವು ಹೇಳಿದ್ವಿ ನಮಗೆ ಥಿಯೇಟರ್ ಗಳು ಕೊಡಿ ಅಂತ, ಆದ್ರೆ ಆ ಸಿನಿಮಾ ಇದೆ, ಈ ಸಿನಿಮಾ ಇದೆ ಅಂತೆಲ್ಲಾ ನಮಗೆ ಹೇಳಿದ್ದಾರೆ ನಮ್ಮ ಶಿವಲೀಲಾ ಸಿನಿಮಾ ಕುರಿತಂತೆ ಸ್ಪೀಕರ್ ಯುಟಿ ಖಾದರ್ ಅವರೇ, ಸದನದಲ್ಲಿ ಮಾತನಾಡಿದ್ದಾರೆ
ಶಾಸಕರು, MLCಗಳು ನೋಡಿದ್ದಾರೆ, ಉತ್ತಮ ಸಿನಿಮಾ ಪ್ರೋತ್ಸಾಹ ನೀಡಬೇಕು ಅಂತ ಹೇಳಿದ್ದಾರೆ ಆದರೆ ನಮಗೆ ಥಿಯೇಟರ್ ಗಳು ನೀಡದೇ ಇರೋದು ಸರಿಯಲ್ಲ ಈ ಕೂಡಲೇ ನಮಗೆ ಥಿಯೇಟರ್ ಗಳು ನೀಡಬೇಕು ಶಾಲಾ/ ಕಾಲೇಜುಗಳ ಮಕ್ಕಳಿಗೆ ಸಿನಿಮಾ ತೋರಿಸಲು, ರಾಜ್ಯ ಸರ್ಕಾರ ಆದೇಶ ಮಾಡಬೇಕು ಎಂದು ಒತ್ತಾಯಿಸಿದ ಮಂಜಮ್ಮ ಜೋಗತಿ ವಿಜಯನಗರ ಜಿಲ್ಲೆ ಹೊಸಪೇಟೆಯ ಪ್ರವಾಸಿ ಮಂದಿರದಲ್ಲಿ ಒತ್ತಾಯಿಸಿದ ಪದ್ಮಶ್ರೀ ಪ್ರಶಸ್ತಿ ವಿಜೇತೆ ಮಾತಾ ಮಂಜಮ್ಮ ಜೋಗತಿ



