ಹೈಕಮಾಂಡ್ ಛೀಮಾರಿ ಸುದ್ದಿ ಸುಳ್ಳು; ಕೇವಲ ಮುನ್ನೆಚ್ಚರಿಕೆ ಸಲಹೆ ನೀಡಲಾಗಿದೆ: ಮುರುಗೇಶ್ ನಿರಾಣಿ
ಬಾಗಲಕೋಟೆ: ಬಿಜೆಪಿ ರಾಜ್ಯಾಧ್ಯಕ್ಷ B. Y. Vijayendra ಹಾಗೂ ವಿರೋಧ ಪಕ್ಷದ ನಾಯಕ R. Ashoka ಅವರಿಗೆ ಬಿಜೆಪಿ ಹೈಕಮಾಂಡ್ ಛೀಮಾರಿ ಹಾಕಿದೆ ಎಂಬ ಮಾಧ್ಯಮ ವರದಿಗಳನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷ Murugesh Nirani ತಳ್ಳಿಹಾಕಿದರು.
ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಅವರು ಅಲ್ಲಿ ಹೋದಾಗ ಮೀಡಿಯಾ ಅಥವಾ ಸಾರ್ವಜನಿಕರು ಯಾರೂ ಇರಲಿಲ್ಲ. ಅವರಿಬ್ಬರು, ನಮ್ಮ ಡೆಪ್ಯುಟಿ ಚೀಫ್ ಹಾಗೂ ರಾಷ್ಟ್ರೀಯ ಅಧ್ಯಕ್ಷರು ಸೇರಿ ಕೇವಲ ನಾಲ್ವರು ಮಾತ್ರ ಇದ್ದರು. ಹೈಕಮಾಂಡ್ ಛೀಮಾರಿ ಹಾಕಿದರು ಎಂದು ಪತ್ರಿಕೆ ಹಾಗೂ ಟಿವಿಗಳಲ್ಲಿ ಬಂದಿರುವ ಸುದ್ದಿ ಸಂಪೂರ್ಣ ಸುಳ್ಳು” ಎಂದು ಹೇಳಿದರು.
“ಅಲ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲ. ಮಾಧ್ಯಮಗಳಲ್ಲಿ ಪ್ರಸಾರವಾದ ಸುದ್ದಿಗೆ ಯಾವುದೇ ರೀತಿಯ ಸಾಕ್ಷ್ಯವೂ ಇಲ್ಲ. ಅನುಭವದ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಯಾವ ರೀತಿಯ ಮುನ್ನೆಚ್ಚರಿಕೆ ವಹಿಸಬೇಕು, ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂಬ ಸಲಹೆಯನ್ನು ಮಾತ್ರ ನೀಡಲಾಗಿದೆ. ಯಾರನ್ನೂ ಬೈಯುವ ಅಥವಾ ತರಾಟೆಗೆ ತೆಗೆದುಕೊಳ್ಳುವ ಪ್ರಸಂಗ ನಡೆದಿಲ್ಲ” ಎಂದು ನಿರಾಣಿ ಸ್ಪಷ್ಟಪಡಿಸಿದರು.
ವಿಜಯೇಂದ್ರ ಸ್ಪಷ್ಟೀಕರಣದಿಂದ ಸಂಶಯಗಳಿಗೆ ತೆರೆ; ರಾಜಕಾರಣಕ್ಕೆ ವೈಯಕ್ತಿಕ ಸಂಬಂಧಗಳನ್ನು ತರಬಾರದು: ಮುರುಗೇಶ್ ನಿರಾಣಿಬಾಗಲಕೋಟೆ: ಮುಖ್ಯಮಂತ್ರಿ D. K. Shivakumar ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ B. Y. Vijayendra ನಡುವೆ ಯಾವುದೇ ವೈಯಕ್ತಿಕ ಅಥವಾ ವ್ಯವಹಾರಿಕ ಸಂಬಂಧ ಇಲ್ಲ ಎಂದು ವಿಜಯೇಂದ್ರ ಧರ್ಮಸ್ಥಳದಲ್ಲಿ ನೀಡಿದ ಸ್ಪಷ್ಟೀಕರಣಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ Murugesh Nirani ಸ್ವಾಗತಿಸಿದರು.
ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ವೈಯಕ್ತಿಕ ಜೀವನ, ವ್ಯವಹಾರ ಮತ್ತು ಸಂಬಂಧಗಳು ಪಕ್ಷದ ಚೌಕಟ್ಟಿನೊಳಗೆ ಬರಬಾರದು. ಅವು ವೈಯಕ್ತಿಕ ವಿಷಯಗಳಾಗಿಯೇ ಉಳಿಯಬೇಕು. ವೈಯಕ್ತಿಕ ವಿಚಾರಗಳಿಂದ ರಾಜಕಾರಣಕ್ಕೆ ಯಾವುದೇ ರೀತಿಯ ತೊಂದರೆ ಆಗಬಾರದು” ಎಂದು ಹೇಳಿದರು.
“ಇಂದು ವಿಜಯೇಂದ್ರ ಅವರು ಯಾವುದೇ ವ್ಯವಹಾರಿಕ ಸಂಬಂಧವೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಧರ್ಮಸ್ಥಳದಲ್ಲಿ ನಿಂತು ಈ ಸ್ಪಷ್ಟನೆ ನೀಡಿರುವುದು ಒಳ್ಳೆಯ ಬೆಳವಣಿಗೆ. ಇದರಿಂದ ಸಾಕಷ್ಟು ಸಂಶಯಗಳಿಗೆ ತೆರೆ ಬಿದ್ದಿದ್ದು, ಜನರಿಗೆ ಸ್ಪಷ್ಟತೆ ಸಿಕ್ಕಂತಾಗಿದೆ. ಏನು ನಡೆದಿತ್ತು ಎಂಬುದು ಅವರಿಬ್ಬರಿಗೆ ಮಾತ್ರ ಗೊತ್ತು. ಹೊರಗಿನವರಿಗೆ ಗೊತ್ತಿಲ್ಲ. ಈಗ ನೀಡಿರುವ ಸ್ಪಷ್ಟೀಕರಣದಿಂದ ಅನುಮಾನ ವ್ಯಕ್ತಪಡಿಸುತ್ತಿದ್ದವರಿಗೆ ಉತ್ತರ ಸಿಕ್ಕಿದೆ” ಎಂದು ನಿರಾಣಿ ಹೇಳಿದರು.



