ಕಲಹಾಳ ಗ್ರಾಮದಲ್ಲಿ ಕ್ರಾಂತಿವೀರ ಶ್ರೀ ಸಂಗೊಳ್ಳಿ ರಾಯಣ್ಣನವರ ವೃತ್ತ ಸ್ಥಾಪನೆ ಮಾಡಲಾಯಿತು
ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಹತ್ತಿರ ರಾಮದುರ್ಗ, ಕಲಹಾಳ , ಕೊಣ್ಣೂರ ಹಾಗೂ ಚಿಕ್ಕೊಪ್ಪ ಎಸ್.ಕೆ ಗ್ರಾಮಗಳನ್ನು ಸಂಪರ್ಕಿಸುವ ವೃತ್ತಕ್ಕೆ ಗ್ರಾಮಸ್ಥರೆಲ್ಲ ಸೇರಿ ಕ್ರಾಂತಿವೀರ ಶ್ರೀ ಸಂಗೊಳ್ಳಿ ರಾಯಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ರಾಯಣ್ಣ ವೃತ್ತ ಎಂದು ನಾಮಕರಣ ಮಾಡಿದರು
ಇದೇ ವೇಳೆ ಗ್ರಾಮದ ಯುವ ನಾಯಕ , ನೀಲಗಂಗಾ ಪ್ಯಾರಾ ಮೆಡಿಕಲ್ ಕಾಲೇಜು ತುಮಕೂರಿನ ಕಾರ್ಯದರ್ಶಿ ಶ್ರೀ ಕಲ್ಲಪ್ಪ ಜಗ್ಗಲ ಮಾತನಾಡಿ ಮುಂಬರುವ ದಿನಗಳಲ್ಲಿ ಗ್ರಾಮದ ಎಲ್ಲರ ಸಹಕಾರದೊಂದಿಗೆ ರಾಯಣ್ಣನವರ ಭವ್ಯ ಮೂರ್ತಿ ನಿರ್ಮಿಸಿ ರಾಮದುರ್ಗ ತಾಲೂಕಿನ ಸರ್ವಪಕ್ಷಗಳ ನಾಯಕರನ್ನು ಆಹ್ವಾನಿಸಿ ಬೃಹತ್ ಕಾರ್ಯಕ್ರಮ ಆಯೋಜನೆ ಮಾಡುವದಾಗಿ ತಿಳಿಸಿದರು
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಮಲ್ಲಪ್ಪ ಹೂಗಾರ, ಹನಮಂತಗೌಡ ಪಾಟೀಲ , ಶಂಕರಗೌಡ ಪಾಟೀಲ , ಬಸವರಾಜ ಗುಡ್ಡದ , ಗದಿಗೆಪ್ಪ ಗುಡ್ಡದ , ಮಲ್ಲಪ್ಪ ಹಾದಿಮನಿ ,ಹನಮಂತ ಮಾದರ , ಶಿವಪ್ಪ ಕಂಬಳಿ , ನಾಗಪ್ಪ ಕಪಲಿ , ಶರಣಪ್ಪ ಮಾದರ, ಈರಣ್ಣ ತಳವಾರ , ಹನಮಂತ ಪೂಜಾರ , ಶಿವಪ್ಪ ಉಳ್ಳಾಗಡ್ಡಿ , ಲಕ್ಷ್ಮಣ ಹಾಗನೂರ , ಸಿದ್ದಪ್ಪ ದಾಡಿಭಾವಿ , ಮಹದಾಯಿ ಹೋರಾಟಗಾರ ಹನಮಂತ ಮಡಿವಾಳರ ಸೇರಿದಂತೆ ಗ್ರಾಮದ ಹಲವರು ಉಪಸ್ಥಿತರಿದ್ದರು
Trending Now



