ಹುಬ್ಬಳ್ಳಿಯಿಂದ ಜಮಖಂಡಿಗೆ ತೆರಳುವ ಮಾರ್ಗ ಮಧ್ಯದಲ್ಲಿ.ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮುಳ್ಳೂರು ಗುಡ್ಡದ ಶಿವನ ಮೂರ್ತಿ ಹತ್ತಿರ
ಡಿಎಪಿ ಗೊಬ್ಬರ ತುಂಬಿರುವ ಲಾರಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಬಿದ್ದಿದ್ದು ಚಾಲಕ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ.ಲಾರಿಯೂ ಹುಬ್ಬಳ್ಳಿ ನವಲೂರಿನಿಂದ ಜಮಖಂಡಿಗೆ ಹೋಗುವಾಗ ಈ ಘಟನೆ ಸಂಭವಿಸಿದೆ ಲಾರಿ ನಂಬರ್ KA02 AG 8387 ಅಶೋಕ್ ಲೇಲ್ಯಾಂಡ್ ಟ್ರಕ್ ಚಾಲಕ ವೃತಪಟ್ಟಿರುತ್ತಾನೆ . ಶರಣಪ್ಪಗೌಡ ಭೀಮನಗೌಡ ಹರಳಲ್ಲಿ ವಯಸ್ಸು-39 ಜಾತಿ-ಲಿಂಗಾಯತ ಉದ್ಯೋಗ- ಡ್ರೈವರ್ ಸಾಕಿನ್- ಗುಡಕುಂಠಿ ತಾಲೂಕು -ಯಲಬುರ್ಗಾ ಜಿಲ್ಲಾ – ಕೊಪ್ಪಳ
ಸುದ್ದಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ರಾಮದುರ್ಗ ಪೊಲೀಸ್ ಠಾಣಾ ಪಿಎಸ್ಐ ಸವಿತಾ ಮುನ್ಯಾಳ ಹಾಗೂ ಎ ಎಸ್ ಐ ಕೆಂಪುಶಿವಣ್ಣವರ ಪೊಲೀಸ್ ಸಿಬ್ಬಂದಿ ಹನುಮಂತ ವಾಸನ ಬೇಟಿ ನೀಡಿ ತಕ್ಷಣ ಜೆಸಿಬಿ ಮುಖಾಂತರ ಕಾರ್ಯಾಚರಣೆ ನಡೆಸಿರುತ್ತಾರೆ ಈ ಕುರಿತು ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Trending Now
