ನಂದೇಶ್ವರ ಗಡಾಮ ಮುತ್ಯಾನ ಮಹಿಮೆ ಅಪಾರ
ಮನುಷ್ಯ ಗಳಿಸಿದ ಸಂಪತ್ತು ಶಾಶ್ವತವಲ್ಲ. ಸತ್ಕಾರ್ಯಗಳೇ ಶಾಶ್ವತವಾಗಿ ಉಳಿಯುತ್ತವೆ. ಪುಣ್ಯ ಕ್ಷೇತ್ರ ನಂದೇಶ್ವರ ಗ್ರಾಮದ ಸಿದ್ದಿ ಪುರುಷ ಗಡಾಮ ಮುತ್ಯಾನ ಮಹಿಮೆ ಅಪಾರವಾಗಿದೆ. ಗಡಾಮ ಮುತ್ಯಾನ ಮಹಿಮೆಯನ್ನು ಮುಂದಿನ ಯುವ ಪೀಳಿಗೆಗೂ ತಲುಪಿಸಬೇಕೆಂದು ಮನಕವಾಡ ಮಹಾಮಠದ ಶ್ರೀ ಅಭಿನವ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ನಂದೇಶ್ವರ ಗ್ರಾಮದಲ್ಲಿ ಜರುಗಿದ ಗಡಾಮ ಮುತ್ಯಾನ ಜಾತ್ರಾ ಮಹೋತ್ಸವದ ಆಧ್ಯಾತ್ಮಿಕ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಅವರು ಮಾತನಾಡುತ್ತಾ ಮನುಷ್ಯ ಜನ ಮಾನಸದಲ್ಲಿ ಶಾಶ್ವತವಾಗಿ ಉಳಿಯಲು ಪರೋಪಕಾರಿ ಬದುಕಬೇಕು. ಬದುಕಿದ್ದಾಗಲೇ ಸತ್ಕಾರ್ಯಗಳನ್ನು ಮಾಡಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು. ಆರೋಗ್ಯವೇ ನಿಜವಾದ ಭಾಗ್ಯವಾಗಿದೆ. ಇಂದಿನ ದಿನಗಳಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯ ಅತ್ಯಂತ ಮುಖ್ಯವಾಗಿದೆ. ವ್ಯಕ್ತಿಯೂ ಮರಣದ ಹೊಂದಿದ ನಂತರವೂ ಎಲ್ಲರ ಹೃದಯದಲ್ಲಿ ಗಡಾಮ ಮುತ್ಯಾನ ಹಾಗೆ ಶಾಶ್ವತವಾಗಿ ಉಳಿಯುವಂತೆ ಬದುಕಬೇಕೆಂದು ಅವರು ಹೇಳಿದರು. ಹೆಬ್ಬಾಳಟ್ಟಿ ಚಂದ್ರಗಿರಿ ಮಠದ ಶ್ರೀ ಸಿದ್ಧಲಿಂಗಯ್ಯ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಈ ಸಂದರ್ಭದಲ್ಲಿ ಸಾವಳಗಿ ಶ್ರೀ ಪರಶುರಾಮ ಸ್ವಾಮೀಜಿ, ಗಡಾಮ ಮುತ್ಯಾ ವಂಶಸ್ಥ ಬಸಪ್ಪ ಚಂಡಕಿ, ಪೆಟ್ಲುರದ ಶ್ರೀ ಪರಶುರಾಮ ಸ್ವಾಮೀಜಿ, ಹಿರಿಯ ಮುಖಂಡ ರಾಮೇಶಗೌಡ ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಹಾದೇವಿ ಲಾಲಸಿಂಗಿ, ಚಿಕ್ಕ ಮಕ್ಕಳ ವೈದ್ಯ ಡಾ. ಸಿ. ಎ. ಸಂಕ್ರಟ್ಟಿ, ರಾಮಣ್ಣ ದೇವನ್ನವರ, ಬಸಪ್ಪ ಮುಧೋಳ, ಸುರೇಶಗೌಡ ಪಾಟೀಲ, ಗುರುಲಿಂಗ ತೇಲಿ, ಬುಜಬಲಿ ಪರಟಿ, ಮಹಾಂತೇಶ ಚಂಡಕಿ, ವಿರುಪಾಕ್ಷ ಹಿರೇಮಠ, ಭೀಮಗೊಂಡ ಪಾಟೀಲ, ಚಿದಾನಂದ ಬಡಿಗೇರ, ಅದೃಶಿ ಪಾಟೀಲ, ಹಣಮಂತ ಹಳಿಂಗಳಿ, ಬಸಪ್ಪ ಬಿರಡಿ, ಹನಮಂತ ಬಡಿಗೇರ, ಧರೆಪ್ಪ ಮಗದುಮ್ಮ, ಪಿ.ಬಿ. ಜನವಾಡ, ಕಾಡಪ್ಪ ತೇಲಿ, ಸಿದ್ದಪ್ಪ ಬಳವಾಡ, ಸಿದ್ದಲಿಂಗ ಚಂಡಿಕಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ವಿವಿಧ ಸಮಾಜ ಸೇವಕರನ್ನು ಗೌರವಿಸಿ ಸತ್ಕರಿಸಲಾಯಿತು. ಎಸ್ .ಬಿ. ಲಾಲಸಿಂಗಿ ನಿರೂಪಿಸಿದರು, ಚಿದಾನಂದ ಪಾಟೀಲ ಸ್ವಾಗತಿಸಿದರು, ಎಲ್ಲರಿಗೂ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
12 ಎನ್ ಡಿ ಆರ್ ಫೊಟೋ ಶಿರ್ಷಿಕೆ 1 ನಂದೇಶ್ವರ ಗ್ರಾಮದಲ್ಲಿ ಜರುಗಿದ ಗಾಡಾಮ ಮುತ್ಯಾನ ಜಾತ್ರೆಯ ಉತ್ಸವವನ್ನು ಜ್ಯೋತಿ ಬೆಳಗಿಸುವ ಮೂಲಕ ಶ್ರೀ ಅಭಿನವ ಮೃತ್ಯುಂಜಯ ಸ್ವಾಮೀಜಿ ಉದ್ಘಾಟಿಸಿದರು. ಇತರರು ಇದ್ದರು.


