ಮಂಡ್ಯ:ಮಾಂತ್ರಿಕ ಶಕ್ತಿಯ ಅದೃಷ್ಟದ ರಾಮ ಲಕ್ಷಣ ನಾಣ್ಯ ಎಂದು ನಂಬಿಸಿ ವಂಚನೆಗೆ ಯತ್ನ.
ಹಳೆಯ ತಾಮ್ರದ ನಾಣ್ಯ ನೀಡಿ ಹಣ ಪಡೆದು ಪರಾರಿಯಾಗಲು ಯತ್ನಿಸಿದ ಯುವಕರಿಬ್ಬರಿಗೆ ಜನರಿಂದ ಗೂಸಾ.
ಮಂಡ್ಯ ಜಿಲ್ಲೆ ನಾಗಮಂಗಲ ಪಟ್ಟಣದಲ್ಲಿ KSRTC ಬಸ್ ನಿಲ್ದಾಣದ ಬಳಿ ಘಟನೆ.
ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ ಮಾಂತ್ರಿಕ ನಾಣ್ಯ ಎಂದು ಹಣ ಪಡೆದು ವಂಚಿಸುವ ವೇಳ ಸಿಕ್ಕಿಬಿದ್ದ ಯುವಕರು.
ನಾಗಮಂಗಲ ತಾಲೂಕಿನ ಶಿಕಾರಿಪುರ ಗ್ರಾಮದ ಯಶ್ವಂತ್ ರಾವ್,ಸುಧೀರ್ ಗೆ ಗೂಸಾ, ಮತ್ತೋರ್ವ ಪರಾರಿ.ಈ ಮೂವರು ಯುವಕರು ಅಮಾಯಕರಿಗೆ ಇದು ಅದೃಷ್ಟದ ನಾಣ್ಯ ಎಂದು ನಂಬಿಸಿ ವಂಚನೆ ಕೆಲಸ.
ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಿಸಿ 1 ಲಕ್ಷ ಹಣ ಪಡೆದು ವಂಚನೆ.
ಈ ಅದೃಷ್ಟ ನಾಣ್ಯ ಪಡೆಯಲು ವ್ಯಕ್ತಿ ನಾಗಮಂಗಲ ಪಟ್ಟಣಕ್ಕೆ ಆಗಮಿಸಿದ್ದ ವೇಳೆ ತಾಮ್ರದ ನಾಣ್ಯ ನೀಡಿ ಪರಾರಿಯಾಗಲು ಯತ್ನ.
ಈ ವೇಳೆ ವಂಚನೆಗೊಳಗಾಗಿರುವುದು ಅರಿತು ವ್ಯಕ್ತಿಯಿಂದ ಕಳ್ಳ ಎಂದು ಚೀರಾಟ.ವ್ಯಕ್ತಿಯ ಚೀರಾಟ ಕೇಳಿ ಸ್ಥಳದಲ್ಲಿದ್ದ ಸಾರ್ವಜನಿಕರು ಆ ಯುವಕರನ್ನು ಹಿಡಿದು ಥಳಿತ.
ವಂಚನೆ ಮಾಡ್ತಿರೋ ಸುದ್ದಿ ತಿಳಿದು ಯುವಕರಿಬ್ಬರನ್ನು ಪೊಲೀಸರ ವಶಕ್ಕೆ ನೀಡಿದ ಸಾರ್ವಜನಿಕರು.
ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರಿಂದ ಆರೋಪಿಗಳ ವಿರುದ್ದ ಪ್ರಕರಣ.
ನಾಗಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.



