ರಾಮದುರ್ಗ: ಹೊರಗಿನವರು ಎಂದರೆ ನಾವೇನು ಪಾಕಿಸ್ತಾನದವರ ಮಾಜಿ ಶಾಸಕರಿಗೆ ಟಿಕೆಟ್ ಕೊಡಿಸಿದವರು ನಾನು ಮತ್ತು ದಿವಂಗತ ಉಮೇಶ್ ಕತ್ತಿ ಅವರು ಅವಾಗ ನಮ್ಮವರು ಎಂದವರು ಈಗ ಹೊರಗಿನವರು ಎಂದು ಅಪಪ್ರಚಾರ ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಮಾಜಿ ಶಾಸಕ ಮಹದೇವಪ್ಪ ಯಾದವಾಡ ಅವರಿಗೆ ಅರಭಾವಿ ಶಾಸಕ ಹಾಗೂ ಬೆಮಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಪರೋಕ್ಷವಾಗಿ ಟಾಂಗ ನೀಡಿದರು.
ಪಟ್ಟಣದ ಹೊರವಲಯದಲ್ಲಿರುವ ಪ್ರಗತಿ ಸಭಾ ಭವನದಲ್ಲಿ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯ ಹಿರೇರೆಡ್ಡಿ ಪೆನಲ್ ನಿರ್ದೇಶಕರು, ವಿವಿಧ ಸೊಸೈಟಿಯಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಹೊರಿಗಿನವರು ಎಂದರೆ ನಾವು ಪಾಕಿಸ್ತಾನದವರಾ ಎಂದು ಪ್ರಶ್ನಿಸಿದ ಅವರು, ಸನ್ಮಾನ ಸಮಾರಂಭದಲ್ಲಿ ಸೇರಿದ ಜನತೆಯನ್ನು ನೋಡಿ, ಮಾಜಿ ಹಾಲಿಗಳಿಗೆ ನಿದ್ದೆ ಹತ್ತುವುದಿಲ್ಲ ಎಂದು ಲೇವಡಿ ಮಾಡಿದರು.
ಡಿಸಿಸಿ ಬ್ಯಾಂಕ ಚುನಾವಣೆಯಲ್ಲಿ ಮಾಜಿ ಹಾಗೂ ಹಾಲಿ ಶಾಸಕರು ಏನೇ ಕಸರತ್ತು ನಡೆಸಿದರೂ 16 ಸೊಸೈಟಿಯವರು ನಮ್ಮ ಜೊತೆಗೆ ಗಟ್ಟಿಯಾಗಿ ನಿಂತು ನಮ್ಮನ್ನು ಬೆಂಬಲಿಸಿದ್ದು ಅವೆಲ್ಲ ಸಂಸೈಟಿಗಳ ಮೇಲೆ ವಿಶೇಷ ಕಾಳಜಿ ಪ್ರೀತಿ ಇದ್ದೆ ಇರುತ್ತದೆ. ಆಡಳಿತ ವ್ಯವಸ್ಥೆ ಇದ್ದರೂ, ಅದನ್ನು ಮೀರಿ ನಮಗೆ ಆಶೀರ್ವಾದ ಮಾಡಿದ್ದೀರಿ. ನಿಮ್ಮ ಪ್ರೀತಿಗೆ ನಾವು ಚಿರಋಣಿಯಾಗಿರುತ್ತೇವೆ. ನಿಮ್ಮ ಕಷ್ಟ ಸುಖಗಳಲ್ಲಿ ನಾವು ಜೊತೆಯಾಗಿರುತ್ತೇವೆ.
ಸ್ಥಳೀಯ ಹಿರಿಯ ನಾಯಕರು ಮತ್ತು ನಮ್ಮ ಅಭಿಮಾನಿಗಳೊಂದಿಗೆ ನಾವು ಗಟ್ಟಿಯಾಗಿದ್ದೇವೆ ಸ್ಥಳೀಯ ನಾಯಕರುಗಳು ಎಲ್ಲರನ್ನೂ ಸ್ಪಂದಿಸುವ ಕೆಲಸ ಮಾಡಬೇಕು. ನಸೀಬು ಇದ್ದವರಿಗೆ 2028 ರಲ್ಲಿ ಚುನಾವಣೆಗೆ ಅವಕಾಶ ಸಿಗಲಿದೆ. ಇನ್ನು 8 ಹೊಸ ಸೊಸೈಟಿ ಜೊತೆಗೆ ತಮ್ಮ ಅಪೇಕ್ಷೆಯಂತೆ ಸೂಕ್ತ ದಾಖಲೆಗಳನ್ನು ಸಲ್ಲಿಸಿದಲ್ಲಿ ಮತ್ತಷ್ಟು ಹೊಸ ಸೊಸೈಟಿಗಳನ್ನು ಮಂಜೂರು ಮಾಡಲು ನಾವು ಬದ್ದರಿದ್ದೇವೆ ಎಂದರು.
ಬಿಡಿಸಿಸಿ ಬ್ಯಾಂಕ ಅಧ್ಯಕ್ಷ
ಅಣ್ಣಸಾಬ್ ಜೊಲ್ಲೆ ಮಾತನಾಡಿ ರೈತರಿಗೆ ಕೇವಲ ರೂ.17 ಕೋಟಿ ಸಾಲ ಸೊಸೈಟಿಗಳಿದ್ದವು. ಈಗ 37 ಆಗಿವೆ. ಮೊದಲು ನೀಡಲಾಗಿತ್ತು. ಸದ್ಯ ರೂ.275 ಕೋಟಿ ಸಾಲ ನೀಡಲಾಗಿದೆ. ಬ್ಯಾಂಕ್ ಪ್ರಾರಂಭವಾದ ಕೇವಲ ಮೂರು ತಿಂಗಳಲ್ಲಿ ರೂ.520 ಕೋಟಿ ಠೇವಣಿ ಹೆಚ್ಚಿಸಿದ್ದೇವೆ. ಫೆ-28 ರಂದು ವ್ಯವಹಾರಿಕ ಸಾಲ, ಗೃಹ ಸಾಲ, ಟ್ರ್ಯಾಕ್ಟರ್ ಸಾಲ ಮೂರು ಹೊಸ ಯೋಜನೆಗಳನ್ನು ಸೊಸೈಟಿಗಳ ನಿರ್ದೇಶಕರನ್ನು ಕರೆಯಿಸಿ, ಕಾರ್ಯಕ್ರಮ ಆಯೋಜನೆಯೊಂದಿಗೆ ಘೋಷಣೆ ಮಾಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಬೆಮುಲ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಬಿಡಿಸಿಸಿ ಬ್ಯಾಂಕ ಅಧ್ಯಕ ಅಣ್ಣಾಸಾಹೇಬ ಜೊಲ್ಲೆ ಅವರನ್ನು ತಾಲೂಕಿನ ಜನತೆ ಹಾಗೂ ಸೊಸೈಟಿಗಳ ಪರವಾಗಿ ಸತ್ಕರಿಸಲಾಯಿತು.
ನ್ಯಾಯವಾದಿಗಳಾದ ಪಿಎಂ ಜಗತಾಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಗತಾಪ
ಈ ಸಂದರ್ಭದಲ್ಲಿ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಬಿ.ಎಸ್.ಬೆಳವಣಕಿ, ನಿರ್ದೇಶಕರುಗಳಾದ ಬಸವರಾಜ್ ಹಿರೇರೆಡ್ಡಿ ಗೋಪಾಲ್ ರೆಡ್ಡಿ ಸಂಶಿ ಈರಣ್ಣ ಕಾಮನ್ನವರ, ಬಿ.ಎಸ್. ಸಿದರಡ್ಡಿ, ಪಾಟೀಲ್, ಪಿ.ಎಫ್. ಪಾಟೀಲ, ಗೋಪಾಲ ಪಾಟೀಲ, ಕಲ್ಲಣ್ಣ ವಜ್ರಮಟ್ಟಿ, ಮಹ್ಮದಶಫಿ ಬೆಣ್ಣೆ, ಪಡಿಯಪ್ಪ ಕ್ಯಾರಿ, ಭೀಮಶೆಪ್ಪ ಬಸಿಡೋಣ, ಬೀಡಕಿ ನಾಯಕ ಸೇರಿದಂತೆ ಇತರರಿದ್ದರು. ಡಾ.ಕೆ.ವಿ. ಪಾಟೀಲ ಸ್ವಾಗತಿಸಿದರು. ಬಿಡಿಸಿಸಿ ಬ್ಯಾಂಕ ಮಾಜಿ ನಿರ್ದೇಶಕ ಎಸ್.ಎಸ್. ಢವಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಂಗಾಧರ ಬೋಸ್ಲೆ ಕಾರ್ಯಕ್ರಮ ನಿರೂಪಿಸಿದರು.



