ಫಿನೆರಿನೋನ್ ಮಾತ್ರೆ ಮತ್ತು ವಯಸ್ಕರ ಲಸಿಕೆಯನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಿ: ದಿನೇಶ್ ಗುಂಡೂರಾವ್
ಬೆಂಗಳೂರಿನ ಸರ್ ಸಿ ವಿ ರಾಮನ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಲಸಿಕೆ ಕಾರ್ಯಕ್ರಮ, ಸಾರ್ವಜನಿಕರ ಅಪೆಕ್ಷೆಯಂತೆ ಸ್ಪೆಷಲ್ ಮತ್ತು ಸೆಮಿ ಸ್ಪೆಷಲ್ ವಾರ್ಡ್ ಉದ್ಘಾಟನೆ ಮಾಡಿ ಮಾತನಾಡಿದ ದಿನೇಶ್ ಗುಂಡೂರಾವ್
ಅತ್ಯತ್ತಮ ಸೌಲಭ್ಯಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿ ನೀಡುವುದು ನಮ್ಮ ಆದ್ಯತೆ. ಒಳರೋಗಿಗಳು ಹೆಚ್ಚಿರುವ ಈ ಆಸ್ಪತ್ರೆಯಲ್ಲಿ ಸಾರ್ವಜನಿಕರ ಅಪೇಕ್ಷೆಯಂತೆ 5 ಸ್ಪೆಷಲ್ ಮತ್ತು 7 ಸೆಮಿ ಸ್ಪೆಷಲ್ ವಾರ್ಡ್ ಸೌಕರ್ಯ ಕಲ್ಪಿಸಲಾಗಿದೆ. Type 2 ಮಧುಮೇಹ ಹೊಂದಿರುವವರಿಗೆ ಕಿಡ್ನಿ, ಹೃದಯ, ರೆಟಿನಾ ಸಮಸ್ಯೆ ಕಾಣಿಸಿಕೊಳ್ಳುವುದು ಸಹಜ. ಇದರ ಕುರಿತು ಹಲವರಿಗೆ ಜ್ಞಾನ ಇರುವುದಿಲ್ಲ. ಫಿನೆರಿನೋನ್ ಮಾತ್ರೆ ತೆಗೆದುಕೊಳ್ಳುವುದರಿಂದ ಹೃದಯ ಸಂಬಂಧಿಸಿದ ಮರಣ, ಕಿಡ್ನಿ ಸಮಸ್ಯೆಗಳನ್ನು ನಿಯಂತ್ರಿಸಲು ಸಾಧ್ಯ. ಉಚಿತವಾಗಿ ಇದನ್ನು ನೀಡುತ್ತಿದ್ದೇವೆ. ಟೈಪ್ 2 ಮದುಮೇಹ ಇರುವ ರೋಗಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು.
ಹಾಗೆಯೇ ಸಿಎಸ್ ಆರ್ ನೆರವಿನೊಂದಿಗೆ ವಯಸ್ಕರ ಲಸಿಕಾಕರಣಕ್ಕೆ ಚಾಲನೆ ನೀಡಿ
Pneumococcal ಲಸಿಕೆಯನ್ನು 65 ವರ್ಷ ಮೇಲ್ಪಟ್ಟವರು ಪಡೆದುಕೊಳ್ಳಬೇಕು. ಇದು ಸೋಂಕು ಜನ್ಯ ರೊಗಗಳನ್ನು ತಡೆಗಟ್ಟುತ್ತದೆ. ಹೃದಯ ಸಂಬಂಧಿಸಿದ ಕಾಯಿಲೆ ಇರುವವರು, ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಇದು ಉಪಯುಕ್ತವಾಗಲಿದೆ.
ಪ್ಲೂ ಲಸಿಕೆ 6 ತಿಂಗಳಿಂದ 65 ವರ್ಷ ವಯೋಮಾನದವರು ಇದನ್ನು ಪಡೆದುಕೊಳ್ಳುಬೇಕು. 18 ರೀತಿಯ ವೈರಸ್ ಗಳಿಂದ ಇದು ರಕ್ಷಣೆ ಕೊಡುತ್ತದೆ. ಮುಂಗಾರು ಪ್ರಾರಂಭವಾಗುವ ಈ ಹೊತ್ತಿನಲ್ಲಿ ಇದನ್ನು ಪಡೆದುಕೊಂಡರೆ ಹಲವಾರು ರೋಗಗಳಿಂದ ರಕ್ಷಣೆ ಪಡೆಯಬಹುದಾಗಿದೆ. ಇವುಗಳಿಂದ ಆಸ್ಪತ್ರೆಗೆ ದಾಖಲಾಗುವ ಸಮಸ್ಯೆ ಕಡಿಮೆ ಮಾಡಬಹುದು, ಶ್ವಾಸಕೋಶ ಸಂಬಂಧಿತ ಸಮಸ್ಯೆ ಇರುವವರಿಗೆ ಇದು ವರದಾನವಾಗಲಿದೆ.
ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ತೆರಳಿ ರೋಗಿಗಳು ಹಾಗೂ ಸಂಬಂಧಿಗಳೊಂದಿಗೆ ಸೌಲಭ್ಯ, ಚಿಕಿತ್ಸೆ ಕುರಿತು ಸಮಾಲೋಚನೆ ನಡೆಸಿದರು. ಸದ್ಯದಲ್ಲೇ MRI ಸೇರಿದಂತೆ ಹಲವಾರು ಸೌಲಭ್ಯಗಳನ್ನು, ಸಿಬ್ಬಂದಿ ನೇಮಕಾತಿಯನ್ನು ಮಾಡಲಾಗುವುದು.



