ನೀಲಗಂಗಾ ಪ್ಯಾರಾಮೆಡಿಕಲ್ ಕಾಲೇಜು ಚೆನ್ನಂಬಿಕ ವಿದ್ಯಾ ಸಂಸ್ಥೆ ಕೆಜಿ ಜೆ ಚಾರಿಟೇಬಲ್ ಟ್ರಸ್ಟ್ ಕೆಜಿಜೆ ಡಯಾಗ್ನೋಸ್ಟಿಕ್ ಸೆಂಟರ್ ಕಾಳಿದಾಸ ವಿದ್ಯಾವರ್ಧಕ ಸಂಘ ತುಮಕೂರ್ ಸಹಯೋಗದಲ್ಲಿ ಕರ್ನಾಟಕ ರತ್ನ ತ್ರಿವಿಧ ದಾಸೋಹಿ ನಡೆದಾಡುವ ದೇವರು ಪರಮಪೂಜ್ಯ ಡಾ. ಶ್ರೀ. ಶ್ರೀ. ಶ್ರೀ. ಶಿವಕುಮಾರ ಮಹಾಸ್ವಾಮಿಗಳು ಹಾಗೂ ಪರಮಪೂಜ್ಯ ಜಗದ್ಗುರುಗಳು ಶ್ರೀ ನಿರಂಜನಾ ನಂದಪುರಿ ಮಹಾಸ್ವಾಮಿಗಳ ಹುಟ್ಟು ಹಬ್ಬದ ಪ್ರಯುಕ್ತ ಕಲಾಳ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಿದ್ದು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಶ್ರೀ. ಮ. ನಿ. ಪ್ರ. ಶಾಂತಲಿಂಗ ಸ್ವಾಮಿಗಳು ದೊರೆಸ್ವಾಮಿ ವಿರಕ್ತಮಠ ಬೈರನಟ್ಟಿ ಶಿರೋಳ ಹಾಗೂ ಪರಮಪೂಜ್ಯ ಶ್ರೀ. ಮ. ನಿ. ಪ್ರ. ಚನ್ನಬಸವ ಮಹಾಸ್ವಾಮಿಗಳು ಶ್ರೀ ಶಾಕ ಶಿವಯೋಗಿ ಮಂದಿರ ನಿಡಗುಂದಿಕೊಪ್ಪ ವಹಿಸಿಕೊಂಡಿದ್ದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನ ನೀಲಗಂಗಾ ಪ್ಯಾರಾಮೆಡಿಕಲ್ ಕಾಲೇಜಿನ ಕಾರ್ಯದರ್ಶಿಗಳಾದ ಕಲ್ಲಪ್ಪ ಜಗ್ಗಲ್ ವಹಿಸಿಕೊಂಡಿದ್ದರು ಮುಖ್ಯ ಅತಿಥಿಗಳಾಗಿ ತಾಲೂಕ ಕುರುಬ ಸಂಘದ ಅಧ್ಯಕ್ಷರಾದ ಪಡಿಯಪ್ಪ ಕ್ವಾರಿ. ಮುಖಂಡರಾದ ಮಲ್ಲಪ್ಪ ಸೋಮಗೊಂಡ ಖ್ಯಾತ ವೈದ್ಯರಾದ ಡಾ. ಪ್ರಕಾಶ ಬೀರನೂರ್. ಡಾ. ವೀರಣ್ಣ ಮಲ್ಲಪ್ಪ ಬ್ಯಾಳಿ. ಡಾ. ಶ್ರೀಧರ್ ಮಾರುತಿ ಶಲ್ಲಿಕೇರಿ ಡಾ. ಶಶಿಧರ್ ಮರಬಾಶೆಟ್ಟಿಡಾ. ಭೂಮಿಕಾ ಶಲ್ಲಿಕೇರಿ ಊರಿನ ಗಣ್ಯರು ವೇದಿಕೆಯನ್ನು ಹಂಚಿಕೊಂಡಿದ್ದರು. ವೇದಿಕೆ ಮೇಲಿದ್ದ ಶ್ರೀಗಳು ಮುಖ್ಯ ಅತಿಥಿಗಳು ಜ್ಯೋತಿ ಬೆಳಗಿಸಿ ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ವೆಂಕಣ್ಣ ಸಂಗಳ ಸ್ವಾಗತಿಸಿದರು ಶಿಕ್ಷಕ ಶ್ರೀ ಎಂ ಎನ್ ಗವನ್ನವರ ಕಾರ್ಯಕ್ರಮ ನಿರೂಪಿಸಿದರು ಶಿಕ್ಷಕ ಶ್ರೀ ರಿಯಾಜ್ ಜುಲಿಕಟ್ಟಿ ಕಾರ್ಯಕ್ರಮಕ್ಕೆ ವಂದಿಸಿದರು.
Trending Now



