ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಶ್ರೀ ಬಸವೇಶ್ವರರ ಜಯಂತಿಯ ಪೂರ್ವಭಾವಿ ಸಭೆಗೆ ಗೈರಾದ ತಹಶೀಲ್ದಾರ್ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳು.
ರಾಮದುರ್ಗ ಪಟ್ಟಣದ ಶಕ್ತಿ ಕೇಂದ್ರ ವಾದ ಮಿನಿವಿಧಾನಸೌಧದಲ್ಲಿ ಇಂದು ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಜ್ಯೋತಿ ಬಸವೇಶ್ವರರ ಜಯಂತಿ ಕುರಿತು ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು
ವೀರಶೈವ ಮಹಾಸಭಾದ ಮುಖಂಡರುಗಳು ಹಾಗೂ ಬಣಜಿಗ ಸಮಾಜದ ಮುಖಂಡರುಗಳು ಸಭೆಗೆ ಹಾಜರಾದರೂ ವಿಪರ್ಯಾಸವೆಂದರೆ ತಾಲೂಕ ದಂಡಾಧಿಕಾರಿ ತಹಸಿಲ್ದಾರ್ ಪ್ರಕಾಶ್ ಹೊಳೆಪಗೋಳ್ ಹಾಗೂ ಬಹುತೇಕ ಎಲ್ಲ ಇಲಾಖೆ ಅಧಿಕಾರಿಗಳು ಸಭೆಗೆ ಗೈರಾಗಿದ್ದರು ಇದನ್ನ ಖಂಡಿಸಿದ ಸಮಾಜದ ಮುಖಂಡರುಗಳು ಸಭೆಯನ್ನ ಬಹಿಷ್ಕರಿಸಿ ಸಭೆಯನ್ನ ಮುಂದೂಡಲಾಗಿದೆ. ಈ ಸಂದರ್ಭದಲ್ಲಿ ಮುಖಂಡರುಗಳಾದ ಜಿ ವಿ ನಾಡಗೌಡ್ರು. ಎಸ್ಎಮ್ ಸಕ್ರಿ ಎಸ್ ಜಿ ಮಾಳವಾಡ. ವಿ ಜಿ ಬೈಲವಾಡ. ಈರಣ್ಣ ಬುಡ್ಯಾ ಗೋಳ ಎಸ್ ವಿ ಕಲ್ಯಾಣ್ ಶೆಟ್ಟಿ ಎಸ್ ಜಿ ಚಿಕ್ಕನರಗುಂದ. ಇನ್ನೂ ಅನೇಕ ಮುಖಂಡರು ಉಪಸ್ಥಿತರಿದ್ದರು.
Trending Now



