ಗ್ರಾಮೀಣ ಕ್ರೀಡೆಗಳು ಒಂದುಗೂಡಿಸುವ ಕೊಂಡಿಗಳು
ತಾ. ಪಂ. ಮಾಜಿ ಸದಸ್ಯ ಬಾಳಾಸಾಹೇಬ ಪಾಟೀಲ ಅಭಿಮತ
ಅಥಣಿ :ಗ್ರಾಮೀಣ ಕ್ರೀಡೆಗಳು ಎಲ್ಲರನ್ನೂ ಒಂದು ಗೂಡಿಸುವ ಕೊಂಡಿ ಗಳಾಗಿವೆ. ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹಿಸಿ ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ತಲುಪಿಸಬೇಕೆಂದು ತಾ. ಪಂ. ಮಾಜಿ ಸದಸ್ಯ ಬಾಳಾಸಾಹೇಬ ಪಾಟೀಲ ಹೇಳಿದರು.
ತಾಲೂಕಿನ ನಂದೇಶ್ವರ ಗ್ರಾಮದ ಶ್ರೀ ಹನುಮಾನ ದೇವರ ರಥೋತ್ಸವ ಅಂಗವಾಗಿ ಸೋಮವಾರ ಸಂಜೆ ಜರುಗಿದ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಕ್ರೀಡೆಗಳು ದೈಹಿಕವಾಗಿ ಮಾನಸಿಕವಾಗಿ ಸದೃಢಗೊಳಿಸುತ್ತವೆ. ಆಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಎಲ್ಲರ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.
ಶಿಕ್ಷಕ ಎಸ್ ಬಿ ಲಾಲಸಿಂಗಿ ಮಾತನಾಡಿ ಕ್ರೀಡೆಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ ಕ್ರೀಡಾಪಟುಗಳು ಭಾಗವಹಿಸುವ ಅತ್ಯಂತ ಮುಖ್ಯವಾಗಿದೆ. ಹಿರಿಯ ಕ್ರೀಡಾಪಟುಗಳು ಯುವಕರಿಗೆ ಕ್ರೀಡಾ ತರಬೇತಿ ನೀಡಬೇಕೆಂದು ಅವರು ಹೇಳಿದರು. ಈ ಸಂದರ್ಭದಲ್ಲಿ ರಮೇಶಗೌಡ ಪಾಟೀಲ, ಬಾಳಪ್ಪಾ ಯಲ್ಲಟ್ಟಿ, ಗುರು ಜನವಾಡ, ಅದೃಶಿ ಪಾಟೀಲ, ರಾಮಪ್ಪ ಪರಟಿ, ಗುರುಲಿಂಗ ತೇಲಿ, ಬಸಪ್ಪ ಮುಧೋಳ, ಸತ್ಯಪ್ಪ ಬಳವಾಡ, ನಿಂಗಪ್ಪ ಜನವಾಡ, ಕಲ್ಲಪ್ಪ ಜನವಾಡ, ಧರೆಪ್ಪ ಮಗದುಮ್ಮ, ಸದಾಶಿವ ಲಾಲಸಿಂಗಿ, ಶ್ರೀಶೈಲ ಪೂಜಾರಿ, ಅಣ್ಣಪ್ಪ ಸತ್ತಿ, ಆನಂದ ಶಿರಗುಪ್ಪಿ, ಮುಕ್ಕುಂದ ಭೋಜನ್ನವರ, ಶಂಕರ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಅನೇಕ ಕುಸ್ತಿ ಪಟುಗಳು ಭಾಗವಹಿಸಿದ್ದರು.
Trending Now



