ಬಾಬಾ ಸಾಹೇಬರ ಜಯಂತಿಯ ಯಶಸ್ವಿಗೆ ವೆಂಕಟೇಶ್ ಹೊಸಮನಿ ಮನವಿ
ಸುರಪುರ : ತಾಲೂಕು ಆಡಳಿತದಿಂದ ನಡೆಯುವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಸಹಭಾಗಿತ್ವ ವಹಿಸುವ ಮೂಲಕ ಯಶಸ್ವಿಗೊಳಿಸುವಂತೆ ಗೋಲ್ಡನ್ ಕೇವ್ ಬುದ್ಧ ವಿಹಾರದ ಅಧ್ಯಕ್ಷರಾದ ವೆಂಕಟೇಶ್ ಹೊಸಮನಿ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪ್ರತಿ ವರ್ಷದಂತೆ ತಾಲೂಕ ಆಡಳಿತ ಆಚರಿಸುವ ಕಾರ್ಯಕ್ರಮಕ್ಕೆ ಬೆಂಬಲ ನೀಡುವುದು ನಮ್ಮ ಕರ್ತವ್ಯವಾಗಿದೆ, ಆದರೇ ಕಳೆದ್ ಏ. 7 ರಂದು ನಡೆದ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ವಿಶೇಷ ಆಹ್ವಾನಿಸುವ ವ್ಯಕ್ತಿಯನ್ನು ಒಮ್ಮತವಾಗಿ ಸೂಚಿಸದ ಹಿನ್ನಲೆಯಲ್ಲಿ ಮರಳಿ ಏ.10ರಂದು ಎಲ್ಲಾ ಸಂಘಟನೆಗಳ ಸಭೆ ಕರೆದು ದಲಿತ ಸಮುದಾಯದ ಹಿರಿಯ ವ್ಯಕ್ತಿಯನ್ನು ಆಯ್ಕೆ ಮಾಡಿದ್ದಾರೆ. ಕೆಲ ಮುಖಂಡರುಗಳು ವಿರೋಧ ವ್ಯಕ್ತಪಡಿಸಿ ಜಯಂತಿ ಕಾರ್ಯಕ್ರಮವನ್ನು ಬಹಿಷ್ಕಾರಿಸುವುದು ಸರಿಯಲ್ಲಾ ಹೀಗಾಗಿ ದಲಿತ ಪರ ಸಂಘಟನೆಗಳಾಗಲಿ ಅಥವಾ ಯಾರೂ ಕೂಡ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ ಅವರ ಜಯಂತಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವುದು, ವಿರೋಧ ವ್ಯಕ್ತಪಡಿಸುವುದು ಅವರಿಗೆ ಅಪಮಾನ ಮಾಡಿದಂತಾಗುತ್ತದೆ.
ದಲಿತ ಪರ ಸಂಘಟನೆಯವರು ಹಾಗೂ ಸಾರ್ವಜನಿಕರು ಯಾರ ಮಾತಿಗೂ ಕಿವಿಗೊಡದೆ ತಾಲೂಕು ಆಡಳಿತ ನಡೆಸುವ ಡಾ.ಬಾಬಾ ಸಾಹೇಬ ಅಂಬೇಡ್ಕರ ಅವರ ಜಯಂತಿ ಕಾರ್ಯಕ್ರಮವನ್ನು ಎಲ್ಲಾ ಜನರು ಒಗ್ಗೂಡಿ ಅರ್ಥಪೂರ್ಣವಾಗಿ ಹಾಗೂ ವಿಜ್ರಂಭಣೆಯಿಂದ ಆಚರಿಸಿ ಯಶಸ್ವಿಗೊಳಿಸುಬೇಕೆಂದು ಕರೆ ನೀಡಿದ್ದಾರೆ.


