Monday, June 1, 2026
23.7 C
Belagavi

ಸ್ವಾತಂತ್ರ್ಯ ಹೋರಾಟಗಾರ ಅರಟಾಳ ರುದ್ರಗೌಡರಿಗೆ ಸಿಗಬೇಕಾದ ಗೌರವ ಸಿಕ್ಕಿಲ್ಲ:ಬಸವರಾಜ ಬೊಮ್ಮಾಯಿ

advertisement

spot_img

*ಸ್ವಾತಂತ್ರ್ಯ ಹೋರಾಟಗಾರ ಅರಟಾಳ ರುದ್ರಗೌಡರಿಗೆ ಸಿಗಬೇಕಾದ ಗೌರವ ಸಿಕ್ಕಿಲ್ಲ:ಬಸವರಾಜ ಬೊಮ್ಮಾಯಿ*

ಕೆಎಲ್ ಇ ಸಂಸ್ಥೆಯಿಂದ ಅರಟಾಳ ರುದ್ರಗೌಡರ ಹೆಸರು ಶಾಸ್ವತವಾಗಿ ಉಳಿಯುವಂತಹ ಕೆಲಸ ಮಾಡಬೇಕು: ಬಸವರಾಜ ಬೊಮ್ಮಾಯಿ

ಹಾವೇರಿ ( ಶಿಗ್ಗಾವಿ) ಕೆಎಲ್ ಇ ಸಂಸ್ಥೆಯನ್ನು ಕಟ್ಟಿರುವ ಸಪ್ತರ್ಷಿಗಳಲ್ಲಿ ಅರಟಾಳ ರುದ್ರಗೌಡರು ಒಬ್ಬರು ಅವರಿಗೆ ಸಿಗಬೇಕಾದ ಗೌರವ ಸಿಕ್ಕಿಲ್ಲ. ಕೆಎಲ್ ಇ ಸಂಸ್ಥೆ ವತಿಯಿಂದ ಅವರ ಹೆಸರು ಶಾಸ್ವತ ಆಗುವಂತ ಕೆಲಸವನ್ನು ಬೆಳಗಾವಿ ಮತ್ತು ಅರಟಾಳದಲ್ಲಿ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಇಂದು ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಅರಟಾಳ ಗ್ರಾಮದಲ್ಲಿ ಶ್ರೀ ಮದ್ ರಂಭಾಪುರಿ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ಶ್ರೀ ವರವೀರಭದ್ರಸ್ವಾಮಿಯ 32 ನೇಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಅರಟಾಳ ನಮ್ಮ ಪ್ರದೇಶದ ಒಂದು ಭಾಗ ಆಗಿರುವುದು ನಮ್ಮೆಲ್ಲರ ಪುಣ್ಯ. ಯಾಕೆಂದರೆ ಈ ಮಣ್ಣು ಅತ್ಯಂತ ಶ್ರೇಷ್ಠ ಪುರುಷನಿಗೆ ಜನ್ಕ ಕೊಟ್ಟಿದೆ. ಪರಕೀಯರ ಆಡಳಿತದಲ್ಲಿ ಭಾರತ ದೇಶ ಇದ್ದಾಗ ಯಾರಿಗೂ ಕೂಡ ಕಲ್ಪನೆ ಇಲ್ಲ. ಶಿಕ್ಷಣ ಅದರ ಮಹತ್ವ ಅದನ್ನು ನಮ್ಮ‌ಜನಕ್ಕೆ ಕೊಡಬೇಕು. ಪರಕೀಯರು ಬ್ರಿಟಿಷರು ನಮಗೆ ಶಿಕ್ಚಣ ಕೊಡುವುದಿಲ್ಲ. ನಮ್ಮನ್ನು ಎಲ್ಲಿ ಇಟ್ಟಿದ್ದರು ಅಲ್ಲಿಯೆ ಇಡುತ್ತಾರೆ. ಶಿಕ್ಷಣ ಮಾತ್ರ ನಮ್ಮನ್ನು ಉದ್ದಾರ ಮಾಡುತ್ತದೆ ಎಂದು ಸರ್ಕಾರದ ಬೆಂಬಲ ಇಲ್ಲದಾಗ ಅವತ್ತಿನ ದೇಶಗತ್ತಿ ಮನೆತನ, ದೇಸಾಯರು ನಾಡಗೌಡರ ಮನೆತನಗಳು ಬೆಳಗಾವಿ ವಿಭಾಗದಲ್ಲಿದ್ದವು. ಆಗ ಕಲ್ಪಿಸಿಕೊಂಡು ಹಿರಿಯರನ್ಮು ದಾನ ಮಾಡುವಂತೆ ಮನವೊಲಿಸಿ ತಾವೆ ಮುಂದೆ ನಿಂತು ದಾನಮಾಡುವಂತೆ ಮಾಡಿ ಕೆಎಲ್ ಇ ಸಂಸ್ಥೆಯನ್ನು ತಾವೆ ಮುಂದೆ ನಿಂತು ಸಹಿ ಮಾಡಿಸಿದ ಸಪ್ತ ಋಷಿಗಳಲ್ಲಿ ಅರಟಾಳ ರುದ್ರಗೌಡರು ಒಬ್ಬರು. ಅರಟಾಳ ರುದ್ರಗೌಡ ಅವರಿಗೆ ಎಷ್ಟು ಗೌರವ ಸಿಗಬೇಕಿತ್ತೊ ಅಷ್ಟು ಸಿಕ್ಕಿಲ್ಲ. ಇದನ್ನು ಬೆಳಗಾವಿ ನಾಯಕರು ಒಪ್ಪಿಕೊಂಡು ಗುರುತು ಮಾಡಬೇಕು. ಇಲ್ಲದಿದ್ದರೆ ಕಾಲವೇ ಗುರುತು ಮಾಡುವ ಕಾಲ ಬರುತ್ತದೆ. ಆಗ ನಿಮ್ಮ ಪಾತ್ರ ಏನೂ ಇರುವುದಿಲ್ಲ. ಬಹಳ ಕಷ್ಟಪಟ್ಟು ಬೈದು ಇವರನ್ನು ಹುಬ್ಬಳ್ಳಿವರೆಗೂ ತಂದಿದ್ದೇವೆ‌ ಎಂದು ಹೇಳಿದರು.

ಕೆಎಲ್ ಇ ಸಂಸ್ಥೆಯ ಹಿಂದಿನ ಮುಖ್ಯಸ್ಥರಾಗಿದ್ದ ಸಿ.ಬಿ ಕೋರೆಯವರು ಅವರ ಹಿಂದಿನವರೊಂದಿಗೆ ಪ್ರಭಾಕರ ಕೋರೆ ಬಂದರು ಅವರೊಂದಿಗೆ ಉತ್ತಮ ಸಂಬಂದ ಇಟ್ಟುಕೊಂಡಿದ್ದೇವೆ‌.‌ ಈಗ ಅವರ ಮಗನೊಂದಿಗೂ ಉತ್ತಮ ಸಂಬಂಧ ಇಟ್ಟು ಕೊಂಡಿದ್ದೆವೆ. ಸಂಸ್ಥೆ ನಮಗೆ ಬಹಳ ಮುಖ್ಯ. ನಾವೆಲ್ಲ ಇಲ್ಲಿ ನಿಂತು ಮಾತನಾಡುವ ಶಕ್ತಿ ನೀಡಿದ್ದು ಕೆ ಎಲ್ ಇ ಸಂಸ್ಥೆ. ಈ ಸಂಸ್ಥೆಯ ಮೂಲಕ ಜ್ಞಾನ ಹಂಚುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಹಲವಾರು ಊರುಗಳಲ್ಲಿ ಬಡವರಿಗೆ ಅನುಕೂಲವಾಗಿದೆ. ಇದರ ಮೂಲ ಅಂಕುರ ಹಾಕಿದವರು ಏಳು ಜನ ಸಪ್ತರ್ಷಿಗಳು. ರುದ್ರಗೌಡರ ಪಾತ್ರವನ್ನು ನೆನಪು ಮಾಡಿಕೊಂಡು ಅವರ ಹೆಸರು ಶಾಸ್ವತ ಆಗುವಂತ ಕೆಲಸವನ್ನು ಬೆಳಗಾವಿ ಮತ್ತು ಅರಟಾಳನಲ್ಲಿ ಮಾಡಬೇಕು ಎಂದು ಸಲಹೆ ನೀಡಿದರು.

*ಕ್ರಾಂತಿ ಮಾಡಿದ್ದಾರೆ*

1847 ರಲ್ಲಿ ಸ್ವಾತಂತ್ರ್ಯ ಚಳವಳಿ ಪ್ರಾರಂಭವಾಗಿದ್ದು ಅರಟಾಳ ರುದ್ರಗೌಡರು ಅವರು ಕ್ರಾಂತಿಯ ಕಾಲದಲ್ಲಿ ಹುಟ್ಟಿದ್ದರು ಅದಕ್ಕೆ ಕ್ರಾಂತಿ ಮಾಡಿದ್ದಾರೆ. ಅವರ ಸವಿ ನೆನಪಿಗಾಗಿ ಇಲ್ಲಿ ಸಂಸ್ಥೆ ಮಾಡಬೇಕು. ಈ ಭಾಗದಲ್ಲಿ ಶಿಕ್ಷಣ ದೊಡ್ಡ ಪ್ರಮಾಣದಲ್ಲಿ ಬೆಳೆಸಬೇಕು. ಇಲ್ಲಿ ಒಂದು ತಂಡ ಮಾಡಿ ಕೆ ಎಲ್ ಇ ಸಂಸ್ಥೆಯಿಂದ ಮಾಡುವ ಶಕ್ತಿ ಇದೆ‌ ಎಂದು ಹೇಳಿದರು.

ರಂಭಾಪುರಿ ಶ್ರೀಗಳ ಆಶಿರ್ವಾದ ಅರಟಾಳ ರುದ್ರಗೌಡರ ಕುಟುಂಬಕ್ಕೆ ಇದೆ, ಅರಟಾಳ ರುದ್ರಗೌಡರ ಹೆಸರು ಅವರ ಕಾರ್ಯ, ತ್ಯಾಗ ಸೂರ್ಯ ಚಂದ್ರ ಇರುವವರೆಗೂ ಇರುತ್ತದೆ. ಆ ಗೌರವ ಉಳಿಸಿಕೊಂಡು ಹೋಗಬೇಕು. ನಾವು ಸದಾಕಾಲ ನಿಮ್ಮ ಜೊತೆಗೆ ಇರುತ್ತೇವೆ. ಎಲ್ಲರೂ ಸೇರಿ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗೋಣ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಶ್ರೀ ಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶೀಕೆಂದ್ರ ಶಿವಾಚಾರ್ಯ ಭಗವತ್ಪಾದರು, ಬಾಳೆಹೊನ್ನೂರು ಶ್ರೀಗಳು ಸೇರಿದಂತೆ ಹಲವಾರು ಜಗದ್ಗುರುಗಳು ಸಾನಿಧ್ಯ ವಹಿಸಿದ್ದರು. ಹಾಗೂ ಮಾಜಿ ಸಂಸದರಾದ ಮಂಜುನಾಥ ಕುನ್ನೂರ, ಕೆ.ಎಲ್.ಇ ಸಂಸ್ಥೆಯ ನಿರ್ದೇಶಕರಾದ ಮಹಾಂತೇಶ ಕವಟಗಿಮಠ, ಮುಖಂಡರಾದ ಶಶಿಧರ ಯಲಿಗಾರ, ಸಿದ್ಧಾರ್ಥಗೌಡ ಪಾಟೀಲ್ ಸೇರಿದಂತೆ ಶ್ರೀಮತಿ ಶೀಲಾ ಚನ್ನವೀರಗೌಡ ಪಾಟೀಲ್ ದಂಪತಿಗಳು ಹಾಗೂ ಶ್ರೀಮತಿ ಮಂಜುಳಾ ವಿರೇಶ ಪಾಟೀಲ್ ದಂಪತಿಗಳು ಉಪಸ್ಥಿತರಿದ್ದರು

Hot this week

ಮಾಜಿ ಸಚಿವ ಹೆಚ್. ವೆಂಕಟರಮಣ್ಣಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ

ಮಾಜಿ ಸಚಿವ ಹೆಚ್. ವೆಂಕಟರಮಣ್ಣಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ ತಳಸಮುದಾಯದವರ ಬಗ್ಗೆ...

ನೂತನ ಸಿಎಂ ಆಗಿ ಡಿ ಕೆ ಶಿವಕುಮಾರ್ ಬುಧವಾರ ಪ್ರಮಾಣ ವಚನ ಸ್ವೀಕಾರ

ನೂತನ ಸಿಎಂ ಆಗಿ ಡಿ ಕೆ ಶಿವಕುಮಾರ್ ಬುಧವಾರ ಪ್ರಮಾಣ ವಚನ...

ಎಲ್ಲಾ ರಾಜ್ಯಗಳ ರಾಜ್ಯಸಭೆ ಅಭ್ಯರ್ಥಿಗಳ ಪಟ್ಟಿ ಒಟ್ಟಿಗೆ ಬಿಡುಗಡೆ: ಡಿ.ಕೆ. ಶಿವಕುಮಾರ್

ಎಲ್ಲಾ ರಾಜ್ಯಗಳ ರಾಜ್ಯಸಭೆ ಅಭ್ಯರ್ಥಿಗಳ ಪಟ್ಟಿ ಒಟ್ಟಿಗೆ ಬಿಡುಗಡೆ: ಡಿ.ಕೆ. ಶಿವಕುಮಾರ್ ನವದೆಹಲಿ,  "ನನಗೆ...

ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿರುವುದು ಡಿಕೆಶಿಗೆ ತೂಗು ಕತ್ತಿ: ಬಸವರಾಜ ಬೊಮ್ಮಾಯಿ

ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿರುವುದು ಡಿಕೆಶಿಗೆ ತೂಗು ಕತ್ತಿ: ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ಯಾವುದೇ...

ಯುವಕರಿಗೆ ಶಿಕ್ಷಣ, ಉದ್ಯೋಗ, ಅಧಿಕಾರ ನೀಡಿದರೆ ಉಜ್ವಲ ಭವಿಷ್ಯ ಬರೆಯುತ್ತಾರೆ:ಬಸವರಾಜ ಬೊಮ್ಮಾಯಿ

ಯುವಕರಿಗೆ ಶಿಕ್ಷಣ, ಉದ್ಯೋಗ, ಅಧಿಕಾರ ನೀಡಿದರೆ ಉಜ್ವಲ ಭವಿಷ್ಯ ಬರೆಯುತ್ತಾರೆ:ಬಸವರಾಜ ಬೊಮ್ಮಾಯಿ ಸೋಲು,...

Topics

ಮಾಜಿ ಸಚಿವ ಹೆಚ್. ವೆಂಕಟರಮಣ್ಣಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ

ಮಾಜಿ ಸಚಿವ ಹೆಚ್. ವೆಂಕಟರಮಣ್ಣಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ ತಳಸಮುದಾಯದವರ ಬಗ್ಗೆ...

ನೂತನ ಸಿಎಂ ಆಗಿ ಡಿ ಕೆ ಶಿವಕುಮಾರ್ ಬುಧವಾರ ಪ್ರಮಾಣ ವಚನ ಸ್ವೀಕಾರ

ನೂತನ ಸಿಎಂ ಆಗಿ ಡಿ ಕೆ ಶಿವಕುಮಾರ್ ಬುಧವಾರ ಪ್ರಮಾಣ ವಚನ...

ಎಲ್ಲಾ ರಾಜ್ಯಗಳ ರಾಜ್ಯಸಭೆ ಅಭ್ಯರ್ಥಿಗಳ ಪಟ್ಟಿ ಒಟ್ಟಿಗೆ ಬಿಡುಗಡೆ: ಡಿ.ಕೆ. ಶಿವಕುಮಾರ್

ಎಲ್ಲಾ ರಾಜ್ಯಗಳ ರಾಜ್ಯಸಭೆ ಅಭ್ಯರ್ಥಿಗಳ ಪಟ್ಟಿ ಒಟ್ಟಿಗೆ ಬಿಡುಗಡೆ: ಡಿ.ಕೆ. ಶಿವಕುಮಾರ್ ನವದೆಹಲಿ,  "ನನಗೆ...

ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿರುವುದು ಡಿಕೆಶಿಗೆ ತೂಗು ಕತ್ತಿ: ಬಸವರಾಜ ಬೊಮ್ಮಾಯಿ

ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿರುವುದು ಡಿಕೆಶಿಗೆ ತೂಗು ಕತ್ತಿ: ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ಯಾವುದೇ...

ಯುವಕರಿಗೆ ಶಿಕ್ಷಣ, ಉದ್ಯೋಗ, ಅಧಿಕಾರ ನೀಡಿದರೆ ಉಜ್ವಲ ಭವಿಷ್ಯ ಬರೆಯುತ್ತಾರೆ:ಬಸವರಾಜ ಬೊಮ್ಮಾಯಿ

ಯುವಕರಿಗೆ ಶಿಕ್ಷಣ, ಉದ್ಯೋಗ, ಅಧಿಕಾರ ನೀಡಿದರೆ ಉಜ್ವಲ ಭವಿಷ್ಯ ಬರೆಯುತ್ತಾರೆ:ಬಸವರಾಜ ಬೊಮ್ಮಾಯಿ ಸೋಲು,...

ಬೆಂಗಳೂರು ನಗರದ ಮೊಳೆ ಮಾಫಿಯಾ ವಿರುದ್ಧ ಕ್ರಮಕ್ಕೆ ಆಯುಕ್ತರಿಗೆ ಪತ್ರ

ಬೆಂಗಳೂರು ನಗರದ ಮೊಳೆ ಮಾಫಿಯಾ ವಿರುದ್ಧ ಕ್ರಮಕ್ಕೆ ಆಯುಕ್ತರಿಗೆ ಪತ್ರ ಬೆಂಗಳೂರು: ಮೇ...

ನಾಯಕತ್ವ ಬದಲಾವಣೆ ಬೆನ್ನಲ್ಲೇ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಬೆಳಗಾವಿ ಶಾಸಕರುಗಳು.

ಬೆಳಗಾವಿ : ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನಂತರ ಹೊಸ ಮುಖ್ಯಮಂತ್ರಿ ಆಯ್ಕೆ...

ಡಿ.ಕೆ. ಶಿವಕುಮಾರ್ ಅವರ ಪರಿಚಯ

ಡಿ.ಕೆ. ಶಿವಕುಮಾರ್ ಅವರ ಪರಿಚಯ ಕನಕಪುರ ತಾಲ್ಲೂಕು, ದೊಡ್ಡಆಲಹಳ್ಳಿ ಗ್ರಾಮದ ಶ್ರೀ ಕೆಂಪೇಗೌಡ...
spot_img

Related Articles

Popular Categories

spot_img