ಬಾಗಲಕೋಟೆ ಉಪಚುನಾವಣೆ: ಜನಮನದ ಸ್ಪಷ್ಟ ಬೆಂಬಲ-ಉಮೇಶ್ ಮೇಟಿ ಗೆಲುವು ಖಚಿತ!
ಬಾಗಲಕೋಟೆ ವಿಧಾನಸಭಾ ಉಪಚುನಾವಣೆಯ ಅಖಾಡದಲ್ಲಿ ಕಾಂಗ್ರೆಸ್ ಪರವಾದ ಜನಾಭಿಪ್ರಾಯ ದಿನದಿಂದ ದಿನಕ್ಕೆ ಪ್ರಬಲವಾಗುತ್ತಿದೆ. ಇಂದು ಬಾಗಲಕೋಟೆಯ ‘ಯೂನಿಯನ್ ಆಫ್ ಮರ್ಚಂಟ್ಸ್ ಅಂಡ್ ಎಂಟರಪ್ರೈನರ್ಸ್ ಅಸೋಸಿಯೇಷನ್’ ಅಧ್ಯಕ್ಷರನ್ನು ಹಾಗೂ ಪದಾಧಿಕಾರಿಗಳನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಲಾಯಿತು.
ವ್ಯಾಪಾರಸ್ಥರು ಮತ್ತು ಉದ್ಯಮಿಗಳ ಈ ಮಹತ್ವದ ಸಂಘಟನೆಯ ಸದಸ್ಯರಿಗೆ ನಮ್ಮ ಅಭ್ಯರ್ಥಿ ಶ್ರೀ ಉಮೇಶ್ ಮೇಟಿ ಅವರಿಗೆ ಸಂಪೂರ್ಣ ಬೆಂಬಲ ನೀಡಬೇಕೆಂದು ವಿನಂತಿಸಿದೆ. ಅವರ ಸ್ಪಂದನೆ ಅತ್ಯುತ್ತಮವಾಗಿತ್ತು. ಕ್ಷೇತ್ರದಾದ್ಯಂತ ಸಂಚರಿಸುತ್ತಿರುವಾಗ ಮತದಾರರಲ್ಲಿ ಕಾಣುತ್ತಿರುವ ಉತ್ಸಾಹ, ಜನಮನದಲ್ಲಿ ಸ್ಪಷ್ಟ ಬೆಂಬಲ ವ್ಯಕ್ತವಾಗುತ್ತಿದ್ದು, ನಮ್ಮಅಭ್ಯರ್ಥಿಯಗೆಲುವು ಖಚಿತವೆಂಬ ವಿಶ್ವಾಸ ಮತ್ತಷ್ಟು ಬಲವಾಗಿದೆ.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಶ್ರೀ ರವಿ ಕುಮಟಗಿ, ಉಪಾಧ್ಯಕ್ಷರಾದ ಶ್ರೀ ರಾಮ್ ಮುಂದಡಾ, ಪ್ರಧಾನ ಕಾರ್ಯದರ್ಶಿ ಶ್ರೀ ವಿರುಪಾಕ್ಷಿ ಅಮೃತ್ಕರ್, ಜಮಖಂಡಿಯ ಮಾಜಿ ಶಾಸಕರಾದ ಶ್ರೀ ಆನಂದ ನ್ಯಾಮಗೌಡ, ಮಾಜಿ ಎಂಎಲ್’ಸಿ ಶ್ರೀ ಎಂ.ಪಿ. ನಾಡಗೌಡ, ಮುಖಂಡರಾದ ಶ್ರೀ ಅಬ್ದುಲ್ ಹಮೀದ್ ಮುಶ್ರೀಫ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



