ರಾಮದುರ್ಗ ತಾಲೂಕ ಅವರಾದಿ ಗ್ರಾಮದ ಶ್ರೀ ಬಸವೇಶ್ವರ ದೇವರ ಜಾತ್ರಾ ಮಹೋತ್ಸವವು ಅತ್ಯಂತ ವಿಜ್ರಂಭಣೆಯಿಂದ ಜರುಗಿತು ಈ ಮೊದಲು ಶ್ರೀ ಬಸವೇಶ್ವರ ದೇವರ ಊಕಳಿಯನ್ನ ಮಾಡಲಾಗುತ್ತಿತ್ತು ತದನಂತರದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ರಥವನ್ನು ನಿರ್ಮಿಸಿ ಪ್ರತಿ ವರ್ಷ ರಥೋತ್ಸವವನ್ನು ಮಾಡಲಾಗುತ್ತಿದೆ ನಂಬಿದ ಭಕ್ತರ ಆರಾಧ್ಯ ದೈವನಾಗಿ ಅವರನ್ನು ಭಕ್ತರ ಎಲ್ಲಾ ಇಷ್ಟಕಾಮನೆಗಳನ್ನು ಪೂರೈಸುತ್ತ ಭಕ್ತರ ಮನೆದೇವರಾಗಿದ್ದಾನೆ ಮುಂಜಾನೆಯ ದಿವಸ ಈ 20ನೇ ಜಾತ್ರಾ ಮಹೋತ್ಸವದ
ಪ್ರಯುಕ್ತವಾಗಿ 50 ರಿಂದ 100 ಜನ ಸುಮಂಗಲೆಯರ ಕುಂಭಮೇಳದೊಂದಿಗೆ ಮನ ಪ್ರಭೇಯ ತೀರದಲ್ಲಿ ಕುಂಭವನ್ನ ತುಂಬಿಕೊಂಡು ಬಸವೇಶ್ವರ ದೇವಸ್ಥಾನಕ್ಕೆ ಅವರಾದಿಯ ಸುಮಂಗಲ ಆಗಮಿಸಿ ತುಂಬಾ ಅಭಿಷೇಕ ಮಾಡಿದರು ತದನಂತರದಲ್ಲಿ ಮಹಾಪ್ರಸಾದ ವ್ಯವಸ್ಥೆಯನ್ನು ಮಾಡಲಾಯಿತು
ಸುಮಾರು ಐದು ಗಂಟೆಗೆ ಶ್ರೀ ಬಸವಣ್ಣ ದೇವರ ರಥೋತ್ಸವವನ್ನು ಅವರಾದಿಯ ಪರಮ ಪೂಜ್ಯರಾದ ಶ್ರೀ ಶಿವಮೂರ್ತಿಗಳು ತೊರಗಲ್ಲದ ಪರಮಪೂಜ್ಯರಾದ ಚೆನ್ನಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ಮುಳ್ಳುರಿನ ಪರಮಪೂಜ್ಯರ ಹಾಗೂ ರಾಮದುರ್ಗದ ಪರಮಪೂಜ್ಯರ ಸನ್ನಿಧಾನದಲ್ಲಿ ವಿಜೃಂಭಣೆಯಿಂದ ಶ್ರೀ ಬಸವೇಶ್ವರ ದೇವರ ತೇರು ಸಾಗಿತು ತದನಂತರದಲ್ಲಿ ಜಾನಪದ ಸಂಭ್ರಮ ಹಾಗೂ ಮಹಾದಾನಿಗಳಿಗೆ ಗೌರವ ಅರ್ಪಣೆ ಕಾರ್ಯಕ್ರಮದಲ್ಲಿ ಅವರಾದಿಯ ಪರಮ ಪೂಜ್ಯರ ನೇತೃತ್ವದಲ್ಲಿ ಕಾರ್ಯಕ್ರಮಗಳು ಪ್ರಾರಂಭವಾದವು ಅಧ್ಯಕ್ಷರಾದ ಶ್ರೀ ಚನ್ನಬಸವರಾಜ್ ಕುಲಕರ್ಣಿ ಇವರು ಪ್ರಸ್ತಾವಿಕವಾಗಿ ಬಸವಣ್ಣ ದೇವರ ಕುರಿತು ಮಾತನಾಡಿದರು ಬಸವಣ್ಣ ದೇವರು ನೆಲೆ ನಿಂತ ಮೇಲೆ ಅವರಾದಿಯ ಒಕ್ಕಲಿಗರ ಮನೆ ಹಾಗೂ ಮನ ತುಂಬಿದ ರೀತಿಯನ್ನು ವಿವರಿಸಿದರೂ ಹಾಗೂ ಎಲ್ಲಾ ಒಕ್ಕಲಿಗರಿಗೆ ಆಶೀರ್ವಾದವನ್ನು ನೀಡುತ್ತಾ ಕುಳಿತಿರುವ ಬಸವೇಶ್ವರನ ಬಗ್ಗೆ ವರ್ಣಿಸಿದರು ತದನಂತರದಲ್ಲಿ ಪರಮಪೂಜ್ಯರ ಸನ್ನಿಧಾನದ ಭಾಷಣದಲ್ಲಿ ಅವರಾದಿಯು ಕಲಾವಿದರ ನಾಡು ಕಲೆಗೆ ಪ್ರೋತ್ಸಾಹನಿತ್ತ ಎಲ್ಲರಿಗೂ ಶ್ರೀ ಗುರುಪಾಲಹಾರೈ ಶರಣ ಹಾಗೂ ಬಸವಣ್ಣನ ಆಶೀರ್ವಾದವಿದೆ ಎಂದು ಹೇಳಿದರು



