*ಲಿಂ. ಶ್ರೀ ನಂದೆಪ್ಪಾ ಟೋಪಗಿ ಅವರ ಪುಣ್ಯ ಸ್ಮರಣೋತ್ಸವ*
ಅಥಣಿ : ತಾಲೂಕಿನ ಸಂಕೋನಟ್ಟಿ ಗ್ರಾಮದ ನಿವೃತ್ತ ಶಿಕ್ಷಕರಾದ ಲಿಂ. ಶ್ರೀ ನಂದೆಪ್ಪಾ ಟೋಪಗಿ ಅವರ 8 ನೇ ವರ್ಷದ ಪುಣ್ಯ ಸ್ಮರಣೋತ್ಸವ ಅಂಗವಾಗಿ ರವಿವಾರ 15 ರಂದು ಮುಂಜಾನೆ 11 ಗಂಟೆಗೆ ಚಿಕ್ಕಟ್ಟಿ – ಸಂಕೋನಟ್ಟಿ ರಸ್ತೆಯ ನಂದೀಶ ವನದಲ್ಲಿ ಶಿವಾನುಭವ ಗೋಷ್ಠಿ ಕಾರ್ಯಕ್ರಮ ಜರುಗಲಿದೆ.
ಬೀಳೂರ ವಿರಕ್ತ ಮಠದ ಶ್ರೀ ಗುರು ಚನ್ನಬಸವ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಜನವಾಡ ಅಲ್ಲಮಪ್ರಭು ಆಶ್ರಮದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ. ನಂದಗಾವ ಭೂಕೈಲಾಸ ಮಂದಿರದ ಶ್ರೀ ಮಹಾದೇವ ಮಹಾರಾಜರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಹಾರೂಗೇರಿಯ ಹಿರಿಯ ಸಾಹಿತಿ ಡಾ. ವಿ. ಎಸ್. ಮಾಳಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಅಲ್ಲದೆ ನಿವೃತ್ತ ಶಿಕ್ಷಕರಾದ ಲಿಂ. ಶ್ರೀ ನಂದೆಪ್ಪಾ ಟೋಪಗಿ ಅವರ ಸಕಲ ಶಿಷ್ಯ ಬಳಗ, ವಿವಿಧ ಗಣ್ಯ ಮಾನ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಕೋನಟ್ಟಿ ಮಾಧವಾನಂದ ಭಜನಾ ಮಂಡಳಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ ಎಂದು ಹಿರಿಯ ಅಭಿಯಂತರಾದ ರಾಜಶೇಖರ ಟೋಪಗಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.



