ನಿಪ್ಪಾಣಿ – ಶಾಸಕಿ ಶಶಿಕಲಾ ಜೊಲ್ಲೆ ನಗರದಲ್ಲಿ ತಾಲೂಕ ಮಟ್ಟದ ಅಧಿಕಾರಿಗಳೊಂದಿಗೆ ನೀರಿನ ಸಮಸ್ಯೆ ಕುರಿತು ಟಾಸ್ಕ್ ಫೋರ್ಸ ಸಭೆಯನ್ನು ನಡೆಸಿ,ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ಮುಂಬರುವ ಬೇಸಿಗೆ ದಿನಗಳಲ್ಲಿ ನಿಪ್ಪಾಣಿ ನಗರದ ಜನತೆಗೆ ಹಾಗೂ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆವಿದ್ದಲ್ಲಿ ತ್ವರಿತವಾಗಿ ಬೋರವೆಲ್ ಗಳನ್ನು ರಿಪೇರಿ ಮಾಡಿ,ಟ್ಯಾಂಕರ್ ಮೂಲಕ ಅವಶ್ಯವಿದಲ್ಲಿ ನೀರನ್ನು ಪೂರೈಸಬೇಕು.ಒಂದುವೇಳೆ ನೀರಿನ ಕೊರತೆವಾದಲ್ಲಿ ಗ್ರಾಮ ಪಂಚಾಯತ್ ಟ್ಯಾಂಕರ್ ಮೂಲಕ ತಕ್ಷಣ ನೀರು ಪೂರೈಸುವಂತೆ ಸೂಚನೆ ನೀಡಲಾಯಿತು.ಜವಾಹರ ಕೆರೆಯಲ್ಲಿ ನೀರಿನ ಶೇಖರಣೆ ಹೆಚ್ಚಿಸಿ ಜನರಿಗೆ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಬೇಕು.ರೈತರ ದನ -ಕರುಗಳಿಗೆ ಮೇವಿನ ಸಮಸ್ಯೆ ಆಗದಂತೆ ಹಾಗೂ ವಿಧ್ಯುತ್ ಅಭಾವ ಆಗದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸಲಹೆ ನೀಡಲಾಯಿತು.ಪ್ರತಿ ವರ್ಷದಂತೆ ಕಾಳಮ್ಮವಾಡಿ ಬ್ಯಾರೇಜ್ ನಿಂದ ನೀರು ಬಿಡುಗಡೆಯಾಗಬೇಕು.
ಈ ಸಂದರ್ಭದಲ್ಲಿ ತಹಶೀಲ್ದಾರರಾದ ಶ್ರೀ ಸುರೇಶ ಮುಂಜೆ, ತಾ.ಪಂ.ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಪ್ರವೀಣ ಕಟ್ಟಿ,ಪೌರಾಯುಕ್ತರಾದ ಶ್ರೀ ಗಣಪತಿ ಪಾಟೀಲ ತಾಲೂಕಿನ ಎಲ್ಲ ಅಧಿಕಾರಿಗಳು,ಪಿ.ಡಿ.ಓ.ಗ್ರಾಮ ಅಭಿವೃದ್ಧಿ ಅಧಿಕಾರಿಗಳು ನಗರಸಭೆ ಸದಸ್ಯರು ಹಾಗೂ ತಾಲೂಕ ಮಟ್ಟದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ತಹಶೀಲ್ದಾರರಾದ ಶ್ರೀ ಸುರೇಶ ಮುಂಜೆ, ತಾ.ಪಂ.ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಪ್ರವೀಣ ಕಟ್ಟಿ,ಪೌರಾಯುಕ್ತರಾದ ಶ್ರೀ ಗಣಪತಿ ಪಾಟೀಲ ತಾಲೂಕಿನ ಎಲ್ಲ ಅಧಿಕಾರಿಗಳು,ಪಿ.ಡಿ.ಓ.ಗ್ರಾಮ ಅಭಿವೃದ್ಧಿ ಅಧಿಕಾರಿಗಳು ನಗರಸಭೆ ಸದಸ್ಯರು ಹಾಗೂ ತಾಲೂಕ ಮಟ್ಟದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.
