*ವಿಧಾನ ಪರಿಷತ್ತು*
*ಔಷಧ ಪೂರೈಕೆಗೆ ಸಾಕಷ್ಟು ಅನುದಾನ ನೀಡಲಾಗಿದೆ: ದಿನೇಶ್ ಗುಂಡೂರಾವ್*
ಪರಿಷತ್ ಸದಸ್ಯರಾದ ಡಾ.ಧನಂಜಯ ಸರ್ಜಿ ಅವರ ಪ್ರಶ್ನೆಗೆ ಉತ್ತರಿಸಿದ ದಿನೇಶ್ ಗುಂಡೂರಾವ್

KSMCL ಮುಖಾಂತರ ಕಳೆದ ಅಗಸ್ಟ್ ನಲ್ಲಿಯೇ ಪಟ್ಟಿಮಾಡಿ ಕ್ರಮ ವಹಿಸಿದ್ದೇವೆ. ಬಹಳಷ್ಟು ಔಷಧಗಳು ಸರಿಯಾದ ತಪಾಸಣೆ ಆಗದೆ ವಿತರಣೆ ಆಗುತ್ತಿತ್ತು. ಕಡಿಮೆ ಬಳಜೆಯ ಔಷಧಗಳ ಹೆಚ್ಚು ಖರೀದಿಯೂ ಆಗುತ್ತಿತ್ತು. ಈಗ ಅವಶ್ಯಕ ಔಷಧಗಳ ಹೆಚ್ಚು ಖರೀದಿ ಮಾಡುತ್ತಿದ್ದೇವೆ. ಬೇರೆ ಬೇರೆ ರಾಜ್ಯಗಳ ಮಾದರಿ ಅಧ್ಯಯನ ನಡೆಸಿದ್ದೇವೆ. ಉದಾ: ತಮಿಳುನಾಡು ರಾಜ್ಯ ಬಹಳ ಅಚ್ಚುಕಟ್ಟಾದ ಖರೀದಿ ಪ್ರಕ್ರಿಯೆ ನಡೆಸುತ್ತದೆ.ನಮ್ಮ ಟೆಂಡರ್ ಗಳಲ್ಲಿ ಅನವಶ್ಯಕ ಕಂಡೀಶನ್ ಗಳಿಂದ ಹೆಚ್ಚು ಬಿಡ್ ದಾರರು ಬರುತ್ತಿರಲಿಲ್ಲ. ಯಾವದು, ಎಷ್ಟು ಔಷಧ ಅಗತ್ಯ ಇದೆ ಎಂದು ಪರಿಶೀಲನೆ ಮಾಡಿ ಪಾರದರ್ಶಕ ವ್ಯವಸ್ಥೆ ಮುಖಾಂತರ ಟೆಂಡರ್ ಪ್ರಕ್ರಿಯೆ ನಡೆಸುತ್ತಿದ್ದೇವೆ. ಖರೀದಿಸಿದ ಔಷಧಗಳನ್ನು ಉಗ್ರಾಣದಲ್ಲಿಯೂ ಮತ್ತೊಮ್ಮೆ ಪರೀಕ್ಷೆ ನಡೆಸಿ, ಗುಣಮಟ್ಟ ಖಾತರಿ ಪಡಿಸಿಕೊಳ್ಳುವ ಪ್ರಕ್ರಿಯೆ ನಡೆಸುತ್ತಿದ್ದೇವೆ. ಇದರಿಂದ ಸ್ವಲ್ಪ ವಿಳಂಬ ಆಗಿದೆ. Abrk ಅಡಿಯಲ್ಲಿ ಎಲ್ಲ ಜಿಲ್ಲೆಗಳಲ್ಲಿ ಸುಮಾರು 300 ಕೋಟಿ ರೂ ಹಣ ಇದ್ದು, ಹೆಚ್ಚುವರಿಯಾಗಿ 30 ಕೋಟಿ ಅನುದಾನ ಬಿಡುಗಡೆ ಮಾಡಿ, ಸ್ಥಳೀಯವಾಗಿಯೂ ಖರೀದಿಸಲು ಸೂಚನೆ ನೀಡಲಾಗಿದೆ. KSMCL ಎಂಡಿ ಹುದ್ದೆಗೆ IAS ಅಧಿಕಾರಿಯನ್ನು ನೇಮಕ ಮಾಡಿ ಸರಿಯಾಗಿ ವ್ಯವಸ್ಥಿತವಾಗಿ ನಡೆಸಲು ಕ್ರಮ ವಹಿಸಲಾಗಿದೆ. ಮೊದಲು ವರ್ಷಕ್ಕೊಮ್ಮೆ ಔಷದ ಸರಬರಾಜು ಆಗುತ್ತಿತ್ತು. ಬಹಳಷ್ಟು ಔಷಧಗಳು ವ್ಯರ್ಥವಾಗುತ್ತಿತ್ತು. ಈಗ ಹೊಸ ಕ್ರಮದಿಂದ ಪ್ರತಿ 3 ತಿಂಗಳಿಗೆ ಅಗತ್ಯ ಇರುವ ಔಷಧ ಸರಬರಾಜು ಮಾಡಲಾಗುತ್ತದೆ. ಇದರಿಂದ ಎಕ್ಸ್ಪೈರಿ ಆಗಿ ಹಾಳಾಗುವುದು ತಪ್ಪುತ್ತದೆ. ಜನರಿಗೆ ಉಚಿತವಾಗಿ ಔಷಧ ನೀಡುವುದು ಸರ್ಕಾರದ ಆದ್ಯ ಕರ್ತವ್ಯ, ಆ ನಿಟ್ಟಿನಲ್ಲಿ ಕ್ರಮಬದ್ಧ ರೀತಿಯಲ್ಲಿ ಆರೋಗ್ಯ ಇಲಾಖೆ ಕೆಲಸ ಮಾಡುತ್ತದೆ.


