ಬೆಳಗಾವಿ: ಹಿರೇಬಾಗೇವಾಡಿ ಗ್ರಾಮದ ಕಾಂಗ್ರೇಸ್ ಪಕ್ಷದ ಮುಖಂಡರು ಹಾಗೂ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ನೇಮಕವಾಗಿರುವ ಅಡಿವೇಶ್ ಇಟಗಿ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ರವಿವಾರ ಹಮ್ಮಿಕೊಳ್ಳಲಾಗಿದ್ದ ಸತ್ಕಾರ ಸಮಾರಂಭದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹಾಗೂ ಎಂಎಲ್ ಸಿ ಚೆನ್ನರಾಜ್ ಹಟ್ಟಿಹೊಳಿ ಅವರ ನೇತೃತ್ವದಲ್ಲಿ ನೂತನ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷರಾಗಿ ಆಯ್ಕೆ ಆದ ಅಡಿವೇಶ ಇಟಗಿ ಅವರಿಗೆ ಸತ್ಕಾರ ಸಮಾರಂಭ ನೇರವೇರಿತು.
ಇದೇ ವೇಳೆ ಅಡಿವೇಶ್ ಇಟಗಿ ಅವರ ಹುಟ್ಟುಹಬ್ಬಕ್ಕೆ ಹಾಗೂ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷರಾಗಿ ನೂತನ ಜವಾಬ್ದಾರಿ ವಹಿಸಿಕ್ಕೊಂಡ ಹಿನ್ನಲೆ ರಾಜಕೀಯ ಮುಖಂಡರಿಂದ ಶುಭ ಕೋರಲಾಯಿತು.
ಸಚಿವೆ ಲಕ್ಷ್ಮೀ ಹೆಬ್ಬಾಳಕರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಬೆಳೆಯುವ ಹಾದಿಯಲ್ಲಿ ಇತರರನ್ನೂ ಬೆಳೆಸುವುದೇ ನನ್ನ ಬದುಕಿನ ತತ್ವ. ಬೆಳೆದು ತುಳಿಯುವ ಸ್ವಭಾವ ನನ್ನದಲ್ಲ, ಏಕೆಂದರೆ ಬೇರೆಯವರನ್ನು ತುಳಿದು ಮೇಲೆ ಬರುವುದನ್ನು ದೇವರು ಎಂದಿಗೂ ಮೆಚ್ಚುವುದಿಲ್ಲ ಎಂಬ ಅಚಲ ನಂಬಿಕೆ ನನ್ನದು. ಸಮಾಜದ ಎಲ್ಲ ವರ್ಗದವರನ್ನೂ ವಿಶ್ವಾಸದಿಂದ ಸೇರಿಸಿಕೊಂಡು, ಸಮಾನತೆಯೊಂದಿಗೆ ಮುನ್ನಡೆಯುವುದೇ ನನ್ನ ಗುರಿ. ನನ್ನ ಬೆಳಗಾವಿ ಗ್ರಾಮೀಣ ಕ್ಷೇತ್ರವು ರಾಜ್ಯದ ಮುಂಚೂಣಿಯಲ್ಲಿ ಕಂಗೊಳಿಸುವಂತೆ ಮಾಡುವುದೇ ನನ್ನ ಸಂಕಲ್ಪ. ನಾನು ನುಡಿದಂತೆ ನಡೆಯುವ ಬದ್ಧತೆಯನ್ನು ಹೊಂದಿದ್ದು, ಮಾಡುವುದನ್ನು ಮಾತ್ರವೇ ಹೇಳುತ್ತೇನೆ ಮತ್ತು ಹೇಳಿದ ಕೆಲಸವನ್ನು ಅಚ್ಚುಕಟ್ಟಾಗಿ ಪೂರೈಸುತ್ತೇನೆ ಆದರೆ ಎಲ್ಲರನ್ನ ಕರೆಸಿ ಸನ್ಮಾನ ಮಾಡಿದಕ್ಕೆ ತುಂಬಾ ಸಂತೋಷವಾಗಿದೆ ಎಂದು ಸಚಿವರು ಮಾತನಾಡಿದರು
ಬಳಿಕ ಅಡಿವೇಶ ಇಟಗಿ ಮಾತನಾಡಿ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರುವಾಗಲೇ ಸ್ಥಾನಮಾನ ನೀಡುವ ಆಶ್ವಾಸೆಯನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ನೀಡಿದ್ದರು, ಈಗ ಅದು ಸಹಕಾರ ಆಗಿದೆ ನನ್ನ ಹುಟ್ಟು ಹಬ್ಬದ ದಿನ ಅವರಿಗೆ ಗೊತ್ತಿತ್ತೊ ಇಲ್ವೋ ಗೊತ್ತಿಲ್ಲಾ ಆದರೆ ನನಗೆ ಒಂದು ಜವಾಬ್ದಾರಿಯುತ ಸ್ಥಾನ ನೀಡಿದ್ದಾರೆ ಹಾಗಾಗಿ ನಾನು ಎಂದಿಗೂ ಚಿರಋಣಿಯಾಗಿರುತ್ತೇನೆ ಜನ್ಮದಿನದಂದೆ ನನಗೆ ಲಕ್ಷ್ಮೀ ಹೆಬ್ಬಾಳಕರ್ ಅಕ್ಕಾ ಅವರು ನನಗೆ ಅಧಿಕಾರ ದೊಡ್ಡ ಜವಾಬ್ದಾರಿ ನೀಡಿದ್ದಾರೆ ಒಳ್ಳೆ ರೀತಿಯಿಂದ ನಡೆಸಿಕ್ಕೊಂಡು ಹೋಗುತ್ತೇನೆ ಎಂದರು
ಬಳಿಕ ಮಾತನಾಡಿದ ಎಂಎಲ್ ಸಿ ಚನ್ನರಾಜ ಹಟ್ಟಿಹೊಳಿ ಅವರು, ನಾಯಕರಾಗಿ ಲಕ್ಷ್ಮೀ ಹೆಬ್ಬಾಳಕರ್ ಅವರು ತಾವು ಬೆಳೆದರೆ ಸಾಕಾಗುವುದಿಲ್ಲ ಎಂದು ಸಮಾಜದಲ್ಲಿ ಮುಖಂಡರನ್ನು ಗುರುತಿಸಿ ನಾಯಕತ್ವ ಜವಾಬ್ದಾರಿ ಕೊಡುತ್ತಿದ್ದಾರೆ. ಒಬ್ಬ ನಿಜವಾದ ನಾಯಕ ಜಗತ್ತಿಗೆ ತೊರಿಸಬೇಕಾದರೆ ತಮ್ಮ ನಾಯಕತ್ವದ ಅಡಿಯಲ್ಲಿ ಮುಖಂಡರು ಬೆಳೆಸಬೇಕಾಗಿದೆ. ಈ ಕೇಲಸವನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಮಾಡುತ್ತಿದ್ದಾರೆ ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಲಕ್ಷ್ಮೀ ಅಕ್ಕಾ ಹೆಬ್ಬಾಳಕರ ಅವರು ಎಲ್ಲಿಯವರೆಗೆ ಶಾಸಕರಾಗಿ ಇರುತ್ತೇನೆ ಎನ್ನುತ್ತಾರೆ ಅಲ್ಲಿಯವರೆಗೆ ಅವರಿಗೆ ಅವಕಾಶ ಕೋಡೋನ ಗ್ರಾಮೀಣ ಮತಕ್ಷೇತ್ರ ಸಾಕಷ್ಟು ಅಭಿವೃದ್ದಿ ಹೊಂದಿದೆ ಅನುದಾನ ತಂದಿದ್ದಾರೆ ರಸ್ತೆ ಕೆಲಸ ಮಾಡಬೇಕೆಂದರೆ ಕೆಲಸ ಮಾಡಲಿಕೆ ಸ್ಥಳವೇ ಇಲ್ಲಾ ಈಗಾಗಲೇ ಎಲ್ಲಾ ಗ್ರಾಮದಲ್ಲಿ ಸಿಸಿ ರಸ್ತೆಗಳು ಆಗಿವೆ ಎಂದರು ಆದ್ದರಿಂದ ಈ ಕಾರ್ಯಕ್ರಮದಿಂದ ಅಡಿವೇಶ ಇಟಗಿ ಅವರ ಹೆಗಲಿಗೆ ಸರ್ಕಾರ ದೊಡ್ಡ ಜವಾಬ್ದಾರಿ ಕೊಟ್ಟಿದೆ ಅದನ್ನ ಜವಾಬ್ದಾರಿಯಿಂದ ನಡೆಸಲಿ ಎಂದು ಅಡಿವೇಶ ಇಟಗಿ ಅವರಿಗೆ ಶುಭಹಾರೈಸಿದರು
ಕಾರ್ಯಕ್ರಮದಲ್ಲಿ ಬಡೇಕೊಳ್ಳಿಮಠದ ನಾಗೇಂದ್ರ ಮಹಾಸ್ವಾಮಿಗಳು, ಅರಳಿಕಟ್ಟಿಯ ಶ್ರೀ ಶಿವಮೂರ್ತಿ ಅಜ್ಜನವರು, ದರ್ಗಾ ಅಜ್ಜನವರು, ಬಡಸ್ ನ ಶ್ರೀ ಪ್ರಶಾಂತ ದೇವರು, ಜಾಲಿಕರೆಮ್ಮ ದೇವಿಯ ಆರಾಧಕರಾದ ಶ್ರೀ ಉಳವಪ್ಪ ಅಜ್ಜನವರು, ಶ್ರೀ ಕಲ್ಲಯ್ಯ ಶಾಸ್ತ್ರಿಗಳು, ಶ್ರೀ ಗಂಗಯ್ಯ ಹಿರೇಮಠ್ ಸ್ವಾಮಿಗಳು, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಹಿರೇಬಾಗೇವಾಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತ ಮುಖಂಡರು, ಪಕ್ಷದ ಮುಖಂಡರು ಕಾರ್ಯಕರ್ತರು ಅಡಿವೇಶ್ ಅಭಿಮಾನಿಗಳು ಉಪಸ್ಥಿತರಿದ್ದರು.



