Thursday, February 12, 2026
29.1 C
Belagavi

ಅಥಣಿ: ನಂದೇಶ್ವರ ಗಡಾಮ ಮುತ್ಯಾನ ಮಹಿಮೆ ಅಪಾರ

advertisement

spot_img

ನಂದೇಶ್ವರ ಗಡಾಮ ಮುತ್ಯಾನ ಮಹಿಮೆ ಅಪಾರ

ಮನುಷ್ಯ ಗಳಿಸಿದ ಸಂಪತ್ತು ಶಾಶ್ವತವಲ್ಲ. ಸತ್ಕಾರ್ಯಗಳೇ ಶಾಶ್ವತವಾಗಿ ಉಳಿಯುತ್ತವೆ. ಪುಣ್ಯ ಕ್ಷೇತ್ರ ನಂದೇಶ್ವರ ಗ್ರಾಮದ ಸಿದ್ದಿ ಪುರುಷ ಗಡಾಮ ಮುತ್ಯಾನ ಮಹಿಮೆ ಅಪಾರವಾಗಿದೆ. ಗಡಾಮ ಮುತ್ಯಾನ ಮಹಿಮೆಯನ್ನು ಮುಂದಿನ ಯುವ ಪೀಳಿಗೆಗೂ ತಲುಪಿಸಬೇಕೆಂದು ಮನಕವಾಡ ಮಹಾಮಠದ ಶ್ರೀ ಅಭಿನವ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ನಂದೇಶ್ವರ ಗ್ರಾಮದಲ್ಲಿ ಜರುಗಿದ ಗಡಾಮ ಮುತ್ಯಾನ ಜಾತ್ರಾ ಮಹೋತ್ಸವದ ಆಧ್ಯಾತ್ಮಿಕ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಅವರು ಮಾತನಾಡುತ್ತಾ ಮನುಷ್ಯ ಜನ ಮಾನಸದಲ್ಲಿ ಶಾಶ್ವತವಾಗಿ ಉಳಿಯಲು ಪರೋಪಕಾರಿ ಬದುಕಬೇಕು. ಬದುಕಿದ್ದಾಗಲೇ ಸತ್ಕಾರ್ಯಗಳನ್ನು ಮಾಡಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು. ಆರೋಗ್ಯವೇ ನಿಜವಾದ ಭಾಗ್ಯವಾಗಿದೆ. ಇಂದಿನ ದಿನಗಳಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯ ಅತ್ಯಂತ ಮುಖ್ಯವಾಗಿದೆ. ವ್ಯಕ್ತಿಯೂ ಮರಣದ ಹೊಂದಿದ ನಂತರವೂ ಎಲ್ಲರ ಹೃದಯದಲ್ಲಿ ಗಡಾಮ ಮುತ್ಯಾನ ಹಾಗೆ ಶಾಶ್ವತವಾಗಿ ಉಳಿಯುವಂತೆ ಬದುಕಬೇಕೆಂದು ಅವರು ಹೇಳಿದರು. ಹೆಬ್ಬಾಳಟ್ಟಿ ಚಂದ್ರಗಿರಿ ಮಠದ ಶ್ರೀ ಸಿದ್ಧಲಿಂಗಯ್ಯ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ಸಾವಳಗಿ ಶ್ರೀ ಪರಶುರಾಮ ಸ್ವಾಮೀಜಿ, ಗಡಾಮ ಮುತ್ಯಾ ವಂಶಸ್ಥ ಬಸಪ್ಪ ಚಂಡಕಿ, ಪೆಟ್ಲುರದ ಶ್ರೀ ಪರಶುರಾಮ ಸ್ವಾಮೀಜಿ, ಹಿರಿಯ ಮುಖಂಡ ರಾಮೇಶಗೌಡ ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಹಾದೇವಿ ಲಾಲಸಿಂಗಿ, ಚಿಕ್ಕ ಮಕ್ಕಳ ವೈದ್ಯ ಡಾ. ಸಿ. ಎ. ಸಂಕ್ರಟ್ಟಿ, ರಾಮಣ್ಣ ದೇವನ್ನವರ, ಬಸಪ್ಪ ಮುಧೋಳ, ಸುರೇಶಗೌಡ ಪಾಟೀಲ, ಗುರುಲಿಂಗ ತೇಲಿ, ಬುಜಬಲಿ ಪರಟಿ, ಮಹಾಂತೇಶ ಚಂಡಕಿ, ವಿರುಪಾಕ್ಷ ಹಿರೇಮಠ, ಭೀಮಗೊಂಡ ಪಾಟೀಲ, ಚಿದಾನಂದ ಬಡಿಗೇರ, ಅದೃಶಿ ಪಾಟೀಲ, ಹಣಮಂತ ಹಳಿಂಗಳಿ, ಬಸಪ್ಪ ಬಿರಡಿ, ಹನಮಂತ ಬಡಿಗೇರ, ಧರೆಪ್ಪ ಮಗದುಮ್ಮ, ಪಿ.ಬಿ. ಜನವಾಡ, ಕಾಡಪ್ಪ ತೇಲಿ, ಸಿದ್ದಪ್ಪ ಬಳವಾಡ, ಸಿದ್ದಲಿಂಗ ಚಂಡಿಕಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ವಿವಿಧ ಸಮಾಜ ಸೇವಕರನ್ನು ಗೌರವಿಸಿ ಸತ್ಕರಿಸಲಾಯಿತು. ಎಸ್ .ಬಿ. ಲಾಲಸಿಂಗಿ ನಿರೂಪಿಸಿದರು, ಚಿದಾನಂದ ಪಾಟೀಲ ಸ್ವಾಗತಿಸಿದರು, ಎಲ್ಲರಿಗೂ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
12 ಎನ್ ಡಿ ಆರ್ ಫೊಟೋ ಶಿರ್ಷಿಕೆ 1 ನಂದೇಶ್ವರ ಗ್ರಾಮದಲ್ಲಿ ಜರುಗಿದ ಗಾಡಾಮ ಮುತ್ಯಾನ ಜಾತ್ರೆಯ ಉತ್ಸವವನ್ನು ಜ್ಯೋತಿ ಬೆಳಗಿಸುವ ಮೂಲಕ ಶ್ರೀ ಅಭಿನವ ಮೃತ್ಯುಂಜಯ ಸ್ವಾಮೀಜಿ ಉದ್ಘಾಟಿಸಿದರು. ಇತರರು ಇದ್ದರು.

Hot this week

ಬೆಳಗಾವಿಯ ಶೆಲ್ ಪೆಟ್ರೋಲ್ ಬಂಕನಲ್ಲಿ ಮಹಿಳೆಯನ್ನ ಅಸಭ್ಯ ವರ್ತನೆ ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಧರ್ಮದೇಟು

ಬೆಳಗಾವಿಯ ಶೆಲ್ ಪೆಟ್ರೋಲ್ ಬಂಕನಲ್ಲಿ ಮಹಿಳೆಯನ್ನ ಅಸಭ್ಯ ವರ್ತನೆ ಪೆಟ್ರೋಲ್ ಬಂಕ್...

ಮೂರು ರೈಲ್ವೆ ಯೋಜನೆಗಳ ಆರಂಭಕ್ಕೆ ಕೇಂದ್ರ ರೈಲ್ವೆ ಸಚಿವರಿಗೆ ಸಂಸದ ಬಸವರಾಜ ಬೊಮ್ಮಾಯಿ‌ ಮನವಿ

ಗದಗ-ಯಲವಿಗಿ ರೈಲ್ವೆ ಯೋಜನೆ ಶೀಘ್ರ ಆರಂಭಿಸಲು ಕೇಂದ್ರ ರೈಲ್ವೆ ಸಚಿವರಿಗೆ ಸಂಸದ...

ಕೃಷಿಕರ ಹಿತವೇ ನಮ್ಮ ಗುರಿ – ನೀರಾವರಿ ಸೌಲಭ್ಯಕ್ಕೆ ಹೆಚ್ಚಿನ ಒತ್ತು!

ಕೃಷಿಕರ ಹಿತವೇ ನಮ್ಮ ಗುರಿ - ನೀರಾವರಿ ಸೌಲಭ್ಯಕ್ಕೆ ಹೆಚ್ಚಿನ ಒತ್ತು!...

ದಾಖಲೆ ಬಜೆಟ್ ಮಂಡನೆಗೆ ಸಿಎಂ ಸಿದ್ದರಾಮಯ್ಯ ಸಜ್ಜು – ಇಂದು ಕೂಡ ಇಲಾಖಾವಾರು ಪೂರ್ವಭಾವಿ ಸಭೆ!

ರಾಜ್ಯದ ಇತಿಹಾಸದಲ್ಲಿಯೇ ಮತ್ತೊಂದು ದಾಖಲೆ ಬಜೆಟ್ ಮಂಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು...

ಟ್ರ್ಯಾಕ್ಟರ್ಗಳಲ್ಲಿ ಡಿಜೆ ಸೌಂಡ್ ತೆರವುಗೊಳಿಸದ ಅಧಿಕಾರಿಗಳ ವಿರುದ್ಧ ಉಪವಾಸ ಧರಣಿ ಸತ್ಯಾಗ್ರಹ.

ಬೆಳಗಾವಿ: ಜಿಲ್ಲೆಯಾದ್ಯಂತ ಟ್ರಾಕ್ಟರ್ ಹಾಗೂ ಇತರ ವಾಹನಗಳಲ್ಲಿ ಕಾನೂನುಬಾಹಿರವಾಗಿ ಅಳವಡಿಸಿರುವ ಅಬ್ಬರದ...

Topics

ಬೆಳಗಾವಿಯ ಶೆಲ್ ಪೆಟ್ರೋಲ್ ಬಂಕನಲ್ಲಿ ಮಹಿಳೆಯನ್ನ ಅಸಭ್ಯ ವರ್ತನೆ ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಧರ್ಮದೇಟು

ಬೆಳಗಾವಿಯ ಶೆಲ್ ಪೆಟ್ರೋಲ್ ಬಂಕನಲ್ಲಿ ಮಹಿಳೆಯನ್ನ ಅಸಭ್ಯ ವರ್ತನೆ ಪೆಟ್ರೋಲ್ ಬಂಕ್...

ಮೂರು ರೈಲ್ವೆ ಯೋಜನೆಗಳ ಆರಂಭಕ್ಕೆ ಕೇಂದ್ರ ರೈಲ್ವೆ ಸಚಿವರಿಗೆ ಸಂಸದ ಬಸವರಾಜ ಬೊಮ್ಮಾಯಿ‌ ಮನವಿ

ಗದಗ-ಯಲವಿಗಿ ರೈಲ್ವೆ ಯೋಜನೆ ಶೀಘ್ರ ಆರಂಭಿಸಲು ಕೇಂದ್ರ ರೈಲ್ವೆ ಸಚಿವರಿಗೆ ಸಂಸದ...

ಕೃಷಿಕರ ಹಿತವೇ ನಮ್ಮ ಗುರಿ – ನೀರಾವರಿ ಸೌಲಭ್ಯಕ್ಕೆ ಹೆಚ್ಚಿನ ಒತ್ತು!

ಕೃಷಿಕರ ಹಿತವೇ ನಮ್ಮ ಗುರಿ - ನೀರಾವರಿ ಸೌಲಭ್ಯಕ್ಕೆ ಹೆಚ್ಚಿನ ಒತ್ತು!...

ದಾಖಲೆ ಬಜೆಟ್ ಮಂಡನೆಗೆ ಸಿಎಂ ಸಿದ್ದರಾಮಯ್ಯ ಸಜ್ಜು – ಇಂದು ಕೂಡ ಇಲಾಖಾವಾರು ಪೂರ್ವಭಾವಿ ಸಭೆ!

ರಾಜ್ಯದ ಇತಿಹಾಸದಲ್ಲಿಯೇ ಮತ್ತೊಂದು ದಾಖಲೆ ಬಜೆಟ್ ಮಂಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು...

ಟ್ರ್ಯಾಕ್ಟರ್ಗಳಲ್ಲಿ ಡಿಜೆ ಸೌಂಡ್ ತೆರವುಗೊಳಿಸದ ಅಧಿಕಾರಿಗಳ ವಿರುದ್ಧ ಉಪವಾಸ ಧರಣಿ ಸತ್ಯಾಗ್ರಹ.

ಬೆಳಗಾವಿ: ಜಿಲ್ಲೆಯಾದ್ಯಂತ ಟ್ರಾಕ್ಟರ್ ಹಾಗೂ ಇತರ ವಾಹನಗಳಲ್ಲಿ ಕಾನೂನುಬಾಹಿರವಾಗಿ ಅಳವಡಿಸಿರುವ ಅಬ್ಬರದ...

ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ತಡೆಹಿಡಿದ ನಿರ್ಧಾರ ರಾಜ್ಯ ಸರ್ಕಾರದ್ದು: ಡಿಸಿಎಂ ಡಿ.ಕೆ. ಶಿವಕುಮಾರ್‌

ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ತಡೆಹಿಡಿದ ನಿರ್ಧಾರ ರಾಜ್ಯ ಸರ್ಕಾರದ್ದು:...

ನಮ್ಮ ಸರ್ಕಾರ ಸಾಮಾಜಿಕ ನ್ಯಾಯದ ಪರ-ಮುಖ್ಯಮಂತ್ರಿ ಸಿದ್ದರಾಮಯ್ಯ

ಇತಿಹಾಸ ತಿಳಿಯದಿದ್ದರೆ ಭವಿಷ್ಯ ನಿರ್ಮಾಣ ಸಾಧ್ಯವಿಲ್ಲ ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ಶಿಕ್ಷಣ ಅತ್ಯಗತ್ಯ ಎಸ್...
spot_img

Related Articles

Popular Categories

spot_img