ಬೆಳ್ಳಂಕಿಯ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಅಭಿಮತ
ಅಥಣಿ :
ಭಕ್ತೆ ಸಂಗವ್ವ ಸದಾಶಿವ ಅವಟಿ ಅವರ ಭಕ್ತಿಗೆ ಒಲಿದು ಸಾಕ್ಷಾತ ಶ್ರೀಶೈಲ ಮಲ್ಲಿಕಾರ್ಜುನ ದೇವರೇ ಘಟನಟ್ಟಿ ಕ್ರಾಸ್ ಹತ್ತಿರ ಬಂದು ನೆಲೆಸಿದ್ದಾನೆ. ಭಕ್ತಿ ಶ್ರದ್ದೆಯಲ್ಲಿ ಅಪಾರವಾದ ಶಕ್ತಿಯಿದೆ ಎಂದು ಬೆಳ್ಳಂಕಿಯ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಘಟನಟ್ಟಿ ಕ್ರಾಸ್ ಹತ್ತಿರ ಜರುಗಿದ ಶ್ರೀ ಮಲ್ಲಿಕಾರ್ಜುನ ದೇವರ ಹಾಗೂ ಭ್ರಮರಂಭಾ ದೇವಿಯವರ 15ನೇ ವರ್ಷದ ಜಾತ್ರಾ ಮಹೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡುತ್ತಾ ಕೆಲವು ವರ್ಷಗಳ ಹಿಂದೆ ಅಥಣಿ ತಾಲೂಕಿನ ಘಟನಟ್ಟಿ ಕ್ರಾಸ್ ದಿಂದ ಪುಣ್ಯಕ್ಷೇತ್ರ ಶ್ರೀಶೈಲದ ವರೆಗೆ 5 ಸಲ ದೀರ್ಘದಂಡ ನಮಸ್ಕಾರ ಹಾಕಿರುವ ತಾಯಿ ಸಂಗವ್ವ ಸದಾಶಿವ ಅವಟಿ ಅವರ ಭಕ್ತಿ ಸೇವೆ ಇತಿಹಾಸದಲ್ಲಿ ಚಿರಕಾಲ ಶಾಶ್ವತವಾಗಿ ಉಳಿಯುವಂತದ್ದು ಎಂದು ಅವರು ಹೇಳಿದರು.
ಚಿಕ್ಕಾಲಗುಂಡಿಯ ಶ್ರೀ ಶಿವ ಶರಣಾನಂದ ಸ್ವಾಮೀಜಿ ಮಾತನಾಡಿ ಪ್ರತಿಯೊಬ್ಬರ ಮನಸ್ಸಿಗೆ ಶಾಂತಿ ನೆಮ್ಮದಿ ಪುಣ್ಯಕ್ಷೇತ್ರದಲ್ಲಿ ಮಾತ್ರ ದೊರೆಯುತ್ತದೆ. ಎಲ್ಲರೂ ಇಲ್ಲಿರುವ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಭಕ್ತಿ ಭಾವದಿಂದ ಭಕ್ತಿ ಸೇವೆ ಸಲ್ಲಿಸಬೇಕೆಂದು ಅವರು ಹೇಳಿದರು. ಜಮಖಂಡಿ ಕಲ್ಯಾಣ ಮಠದ ಶ್ರೀ ಗೌರಿಶಂಕರ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಅರ್ಚಕಿ ಸಂಗವ್ವ ಸದಾಶಿವ ಅವಟಿ, ಅನಿಲ ಗಲಗಲಿ, ಜಾತ್ರಾ ಕಮಿಟಿ ಮುಖಂಡ ಹಣಮಂತ ಅವಟಿ, ಕರೆಪ್ಪ ಪಟೇಕರ, ಸದಾಶಿವ ಜನವಾಡ, ಶ್ರೀಶೈಲ ಜಕಪ್ಪನವರ, ಹನುಮಂತ ಕುಳಗೇರಿ, ಮಲ್ಲಪ್ಪ ಹಂಚಿನಾಳ, ರಾಜಕುಮಾರ ಜಂಬಗಿ, ಉಮೇಶ ನಾವಿ, ರಾಜು ಕುರೆನ್ನವರ, ಸಮ್ಮೇದ ನಾಡಗೌಡ, ಸಂಜೀವ ಕಿತ್ತೂರ, ಬಹುಸಾಹೇಬ ಗೌಡಪ್ಪನವರ, ಪರಶು ಸನದಿ, ರಮೇಶ ಕುಳಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶ್ರೀಶೈಲ ಜಕ್ಕಪ್ಪನವರ ಹಾಗೂ ಅಶೋಕ ಕೆಂಪವಾಡ ಸಂಗೀತ ಸೇವೆ ಸಲ್ಲಿಸಿದರು. ಬಾಹುಸಾಹೇಬ ಗೌಡಪ್ಪನವರ ನಿರೂಪಿಸಿದರು. ಸುಧಾರಾಣಿ ಸವದಿ ವಂದಿಸಿದರು. ಜಾತ್ರೆಯ ಅಂಗವಾಗಿ ವಚನ ಸ್ಪರ್ಧೆ, ಕಬಡ್ಡಿ ಪಂದ್ಯಾವಳಿಗಳು, ರಥೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು.
Trending Now



