ಇಂದು ದೇಶಾದ್ಯಂತ 77ನೇ ಗಣರಾಜ್ಯೋತ್ಸವದ ಸಂಭ್ರಮ ಮನೆಮಾಡಿದೆ. ಶಾಲಾ ಕಾಲೇಜುಗಳು ಮಾತ್ರವಲ್ಲದೆ, ದೇವಸ್ಥಾನಗಳಲ್ಲೂ ಕೂಡ ದೇಶಭಕ್ತಿಯ ಮೆರುಗು ಕಂಡುಬರುತ್ತಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಮುತ್ತೂರು ಗ್ರಾಮದ ದೇವಿಯ ಸನ್ನಿಧಾನದಲ್ಲಿ ಗಣರಾಜ್ಯೋತ್ಸವವನ್ನು ಅತ್ಯಂತ ವಿಶಿಷ್ಟವಾಗಿ ಆಚರಿಸಲಾಗಿದೆ.
ದೇವಿಯ ಪೂರ್ಣ ಅಲಂಕಾರ, ಹಣ್ಣುಗಳು, ತ್ರಿವರ್ಣ ಧ್ವಜ
ಹೌದು, ಇದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಮುತ್ತೂರು ಗ್ರಾಮದ ಸುಕ್ಷೇತ್ರ ಮುತ್ತೂರು ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಕಂಡುಬಂದ ದೃಶ್ಯ. ಇಲ್ಲಿನ ದೇವಿಗೆ ಗಣರಾಜ್ಯೋತ್ಸವದ ನಿಮಿತ್ತ ತ್ರಿವರ್ಣ ಧ್ವಜದ ಬಣ್ಣಗಳಿಂದ ವಿಶೇಷ ಅಲಂಕಾರ ಮಾಡಲಾಗಿದೆ. ತಾಯಿಯ ಸೀರೆಯು ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳಿಂದ ಕಂಗೊಳಿಸುತ್ತಿದ್ದರೆ, ಹಿನ್ನೆಲೆಯಲ್ಲಿ ರಾಷ್ಟ್ರಧ್ವಜಗಳನ್ನು ಜೋಡಿಸಿ ದೇಶಭಕ್ತಿ ಮೆರೆಯಲಾಗಿದೆ.
ದೇವಿಯ ಪಾದದ ಬಳಿ ಸೇಬು, ದಾಳಿಂಬೆ, ಕಿತ್ತಳೆ ಸೇರಿದಂತೆ ವಿವಿಧ ಬಗೆಯ ಹಣ್ಣುಗಳನ್ನು ನೈವೇದ್ಯವಾಗಿ ಸಮರ್ಪಿಸಲಾಗಿದೆ. ಭಕ್ತರು ತಾಯಿಯ ದರ್ಶನ ಪಡೆದು, ನಾಡಿನ ಸುಭಿಕ್ಷೆಗಾಗಿ ಪ್ರಾರ್ಥನೆ ಸಲ್ಲಿಸಿದರು. ಈ ವಿಶೇಷ ಅಲಂಕಾರ ಭಕ್ತರ ಕಣ್ಮನ ಸೆಳೆಯುವಂತಿತ್ತು.”
ಪ್ರತಿ ವರ್ಷದಂತೆ ಈ ವರ್ಷ ಕೂಡ ದೇವಿಗೆ ವಿಶೇಷ ಪೂಜೆ ಕೈಂಕರ್ಯ ಸಲ್ಲಿಸಿ ತ್ರಿವರ್ಣ ಧ್ವಜದ ಸೀರೆಯಲ್ಲಿ ಮಹಾಲಕ್ಷ್ಮಿ ದೇವಿ ಕಂಗೊಳಿಸಿದ, ಗಣರಾಜ್ಯೋತ್ಸವದ ಪ್ರಯುಕ್ತ ದೇವಿಗೆ ವಿಶೇಷ ಅಲಂಕಾರ
ಭಕ್ತಿ ಮತ್ತು ದೇಶಭಕ್ತಿಯ ಅನನ್ಯ ಸಂಗಮವನ್ನು ಭಕ್ತರು ಕಣ್ಣು ತುಂಬಿಕೊಂಡರು. ಇತಿಹಾಸ ಪರಂಪರೆ ಹೊಂದಿರುವ ಮುತ್ತೂರು ಮಹಾಲಕ್ಷ್ಮಿ ತ್ರಿವರ್ಣ ಧ್ವಜವನ್ನೇ ಹೋಲುವ ವಿಶೇಷ ಸೀರೆಯುಟ್ಟು ಭಕ್ತರಿಗೆ ದರ್ಶನ ನೀಡುತ್ತಿರುವುದು ದೈವ ಭಕ್ತಿಯ ಜೊತೆಗೆ ದೇಶಭಕ್ತಿಯನ್ನು ನಾಡಿನಲ್ಲಿ ಮತ್ತಷ್ಟು ಪಸರಿಸಿತು ಮಹಾಲಕ್ಷ್ಮಿಯಲ್ಲಿ ಇಂದು ಭಾರತಾಂಬೆಯ ಪ್ರತಿರೂಪ ಕಂಡ ಭಕ್ತಸಾಗರ ಪುನೀತವಾಯಿತು,
ಒಟ್ಟಾರೆಯಾಗಿ ಗಣರಾಜ್ಯೋತ್ಸವದ ಹಿನ್ನಲೆಯಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಮಹಾಮಂಗಳಾರತಿಯನ್ನು ಅರ್ಚಕರಾದ ಸುರೇಶ್ ಹಾಗೂ ಹನುಮಂತ ಗುರುವ ಅವರಿಂದ ದೇವಿಗೆ ವಿಶೇಷ ಅಲಂಕಾರ ಪೂಜೆ ಸಲ್ಲಿಸಿದರು.



