ಸರಕಾರಿ ಮೆಡಿಕಲ್ ಕಾಲೇಜಿಗೆ 20 ಎಕರೆ ಭೂಮಿ : ಗೃಹ ಸಚಿವ ಪರಮೇಶ್ವರ್ ಘೋಷಣೆ
ತುಮಕೂರು : ಸರಕಾರಿ ಮೆಡಿಕಲ್ ಕಾಲೇಜಿಗೆ ಹೊಸ ರಿಂಗ್ ರಸ್ತೆಯಲ್ಲಿ 20 ಎಕರೆ ಭೂಮಿ ಗುರುತಿಸಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಕೆಆರ್ಎಸ್ ಪಕ್ಷದಿಂದ ಒತ್ತಾಯ ವಿಚಾರಕ್ಕೆ ಉತ್ತರಿಸಿದ ಸಚಿವರು ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣರೆಡ್ಡಿಗೆ ಮಾಹಿತಿ ಕೊರತೆ ಇದ್ದಂತೆ ಕಾಣುತ್ತದೆ. ತುಮಕೂರು ಜಿಲ್ಲೆಯ ಅಭಿವೃದ್ಧಿ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಪಾಪ ಅವರಿಗೆ ಗೊತ್ತಿಲ್ಲ. ತುಮಕೂರಿನಲ್ಲಿ ಏನೆಲ್ಲಾ ಅಭಿವೃದ್ಧಿ ಆಗಿದೆ ಎನ್ನುವುದನ್ನು ಮುಂದಿನ ದಿನದಲ್ಲಿ ಒಂದು ಕೈಪಿಡಿಯನ್ನೇ ಬಿಡುಗಡೆ ಮಾಡುತಿದ್ದೇನೆ ಎಂದರು.
ಸರ್ಕಾರಿ ವೈ ದ್ಯಕೀಯ ಕಾ ಲೇಜು ನಿ ರ್ಮಾಣಕ್ಕೆ ನಾ ನು ಬಿಡುತ್ತಿಲ್ಲ ಎಂದು ಆ ರೋಪಿಸಿದ್ದಾರೆ. ಈಗಾಗಲೇ ನಾವು ಸರ್ಕಾರಿ ಮೆಡಿಕಲ್ ಕಾಲೇಜಿಗೆ ಹೊಸ ರಿಂಗ್ ರಸ್ತೆಯಲ್ಲಿ 20 ಎಕರೆ ಭೂಮಿ ಗುರುತಿಸಿದ್ದೇವೆ. 130 ಕೋಟಿ ರೂ ವೆಚ್ಚದಲ್ಲಿ ಹಳೆ ಆಸ್ಪತ್ರೆ ಒಡೆದು ಹೊಸದನ್ನು ಕಟ್ಟಲು ನಾನು ವೈಯಕ್ತಿಕವಾಗಿ ಭೇಟಿಯಾಗಿ ಜಿಲ್ಲಾ ಹಿತದೃಷ್ಟಿಯಿಂದ 2 ಸಾವಿರ ಕೋಟಿ ಮೂರು ತಾಲೂಕಿಗೆ ಖರ್ಚು ಮಾಡಿದರೆ ಹೇಗೆ. ಅದು ತಾರತಮ್ಯ ಆಗುತ್ತದೆ. ಬೇರೆ ತಾಲೂಕುಗಳು ಅಭಿವೃದ್ಧಿಯಾಗುವುದಿಲ್ಲ. ಎಂದು ಆರೋಗ್ಯ, ಶಿಕ್ಷಣಕ್ಕೆ ಅನುಮತಿ ಪಡೆದು ಕೆಲಸ ಪ್ರಾರಂಭಿಸಿದ್ದೇವೆ ಎಂದು ತಿಳಿಸಿದರು.
ಹೆಚ್ಚಿನ ಭದ್ರತೆ ಪ್ರೋಟೋಕಾಲ್
ಸಿದ್ದಗಂಗಾ ಮಠದ ಗುರುವಂದನಾ ಕಾರ್ಯಕ್ರಮದ ರಾಷ್ಟ್ರಪತಿ ಭದ್ರತೆಯ ಚರ್ಚೆ ವಿಚಾರಕ್ಕೆ ಉತ್ತರಿಸಿ ರಾಷ್ಟ್ರಪತಿ ಕಾರ್ಯಕ್ರಮಕ್ಕೆ ಹೆಚ್ಚಿನ ಭದ್ರತೆ ನೀಡುವುದು ಪ್ರೋಟೊಕಾಲ್. ಪ್ರಧಾನಮಂತ್ರಿ, ರಾಷ್ಟ್ರಪತಿ, ಉಪರಾಷ್ಟ್ರಪತಿಗಳಿಗೆ ಹಾಗೂ ಕೇಂದ್ರದ ಗೃಹ ಸಚಿವರಿಗೆ ಪ್ರೊಟೋಕಾಲ್ ಇರುತ್ತದೆ. ಅದನ್ನು ನಾನು ಇಲ್ಲಿ ವಿವರಿಸಲು ಹೋಗುವುದಿಲ್ಲ. ಸ್ವಾಮೀಜಿಗಳನ್ನು ವೇದಿಕೆಯಲ್ಲಿ ಕೊನೆಯಲ್ಲಿ ಕೂರಿಸಲಾಯಿತು. ಅವರು ನಮಗೆ ಸ್ವಾಮೀಜಿಗಳು. ಅದರೇ ಕಾನೂನು ದೃಷ್ಟಿಯಲ್ಲಿ ಸರಳವಾದ ಒಬ್ಬ ವ್ಯಕ್ತಿ ಎಂದು ಅವರು ಪರಿಗಣಿಸುತ್ತಾರೆ ಎಂದರು.
ತೀರ್ಮಾನಿಸಿದ್ದೇವೆ. ಆ ದುಡ್ಡನ್ನು ಸಹ ಗಣಿಬಾಧಿತ ಪ್ರದೇಶ ನಿಧಿಯನ್ನು ಬಳಸಿಕೊಂಡು ನಿರ್ಮಾಣ ಮಾಡುತಿದ್ದೇವೆ. ಆದರೇ ಅವರು ಹಣವನ್ನೇ ಉಪಯೋಗ ಮಾಡಿಲ್ಲ ಎಂದಿದ್ದಾರೆ.
ನನ್ನನ್ನು ಟೀಕೆ ಮಾಡಿದ್ದಾರೆ ಅವರು ಹೇಳುವುದಕ್ಕೆ ನಾನು ವಿರೋಧ ಮಾಡುವುದಿಲ್ಲ. ನಮ್ಮ ಸಮರ್ಥತೆ, ಅಸಮರ್ಥತೆಯನ್ನು ಜನ ತೀರ್ಮಾನ ಮಾಡುತ್ತಾರೆ ಎಂದರು.



